Scorpion; ವರ್ಷ ಪೂರ್ತಿ ಆಹಾರ ಇಲ್ಲದೇ ಇದ್ದರೂ ಬದುಕಬಲ್ಲದು ಈ ಚೇಳು!

ಸಡಿಲಾದ ಮಣ್ಣು, ಹುಲ್ಲು ಇರುವ ಜಾಗ ಚೇಳಿನ ಪ್ರಿಯವಾದ ವಾಸಸ್ಥಳ

Team Udayavani, Jul 10, 2023, 4:14 PM IST

Scorpion; ವರ್ಷ ಪೂರ್ತಿ ಆಹಾರ ಇಲ್ಲದೇ ಇದ್ದರೂ ಬದುಕಬಲ್ಲದು ಈ ಚೇಳು!

ಚೇಳು ಬಹಳ ವಿಶಿಷ್ಠವಾದ ಪ್ರಾಣಿ. ವರ್ಷ ಪೂರ್ತಿ ಆಹಾರ ಇಲ್ಲದೇ ಇದ್ದರೂ ಹಾಗೇ ಬದುಕಬಲ್ಲದು. ಹಾಗೆಯೇ, ನೀರಲ್ಲೂ, ನೀರ ಹೊರಗೆ, ಬಿಲಗಳಲ್ಲೂ ಇದು ನಿರಾತಂಕವಾಗಿ ಜೀವಿಸುತ್ತದೆ. ಅಂದ ಹಾಗೇ, ಚೇಳಿನ ಕಣ್ಣುಗಳು ಇರುವುದು ಬೆನ್ನ ಮೇಲೆ.

ಚೇಳನ್ನು ನೋಡಿದ್ದೀರಿ? ಇದರ ಕುಟುಕುವಿಕೆಯಿಂದಲೇ ಜಗತ್‌ಪ್ರಸಿದ್ಧಿ ಪಡೆದಿದೆ. ಅದರ ಬಾಲದ ತುದಿಯಲ್ಲಿರುವ ಮೊನಚು ಕೊಂಡಿಯಿಂದ ಚುಚ್ಚಿದರೆ ಪ್ರಾಣಾಂತಿಕವಲ್ಲದಿದ್ದರೂ ಸಾಕಷ್ಟು ನೋವು, ಉರಿ ಅನುಭವಿಸಬೇಕಾಗುತ್ತದೆ. ಧ್ರುವಪ್ರದೇಶದ ಹೊರತು ಮರುಭೂಮಿಯೂ ಸೇರಿದಂತೆ ಜಗತ್ತಿನ ಎಲ್ಲೆಡೆಯೂ ಚೇಳನ್ನು ಕಾಣಬಹುದು. ಬ್ರೆಜಿಲಿನ ಕಾಡುಗಳು, ಉತ್ತರ ಕೆರೊಲಿನಾ, ಹಿಮಾಲಯಗಳಲ್ಲಿ ಅದರ ಸಂತತಿ ಅಧಿಕವಾಗಿದೆ. ಸೊನ್ನೆ ಡಿಗ್ರಿ ಶೈತ್ಯಾಂಶದಲ್ಲಿ ಬದುಕಿರಬಲ್ಲ ಚೇಳು 68ರಿಂದ 99 ಡಿಗ್ರಿ ಫ್ಯಾರನ್‌ಹೀಟ್‌ ಉಷ್ಣಾಂಶದಲ್ಲೂ ಸಾಯುವುದಿಲ್ಲ. ಹೀಗಾಗಿಯೇ ನಮ್ಮ ಗುಲ್ಬರ್ಗ, ರಾಯಚೂರುಗಳ ಕಡೆ ಚೇಳುಗಳಿವೆ. ನೀವು, ಎರಡು ದಿನಗಳ ವರೆಗೆ ನೀರಿನಲ್ಲಿ ಮುಳುಗಿಸಿಟ್ಟರೂ ಈ ಚೇಳುಗಳು ಬದುಕಿರುತ್ತವೆ. ಅತ್ಯಂತ ಕಡಿಮೆ ಆಮ್ಲಜನಕ ಬಳಸುವ ಗುಣ ಇರುವುದರಿಂದ ಮಣ್ಣಿನೊಳಗೆಯೂ ಚೇಳು ಬದುಕಬಲ್ಲದು.

ಆಹಾರ ಇಲ್ಲದೆಯೂ ಬದುಕುತ್ತೆ
ಒಂದು ವರ್ಷ ಆಹಾರ ಇಲ್ಲದಿದ್ದರೂ ಚೇಳು ಹಸಿವಿನಿಂದ ಸಾಯುವುದೇ ಇಲ್ಲ. ಅದರ ಗರಿಷ್ಠ ಜೀವಿತ ಅವಧಿ 25ರಿಂದ 38 ವರ್ಷಗಳು. ಬಿಲಗಳು, ಕಲ್ಲುಗಳ ಸಂದಿ, ಸಡಿಲಾದ ಮಣ್ಣು, ಹುಲ್ಲು ಇರುವ ಜಾಗ ಚೇಳಿನ ಪ್ರಿಯವಾದ ವಾಸಸ್ಥಳ. ರಾತ್ರಿ ಸಂಚಾರ ಅದಕ್ಕೆ ಇಷ್ಟ. ಚೇಳಿಗೆ ಪ್ರತಿದೀಪಕ ಶಕ್ತಿಯಿರುವುದರಿಂದ ರಾತ್ರಿ ಅದರ ಮೇಲೆ ಬೆಳಕು ಹರಿಸಿದರೆ ಕಪ್ಪಗಿರುವ ಚೇಳಿನ ಬಣ್ಣ ಬದಲಾಗುತ್ತದೆ. 6 ಸೆಂ.ಮೀ.ಯಿಂದ ಆರಂಭಿಸಿ 20 ಸೆ. ಮೀ.ವರೆಗೆ ಗಾತ್ರವಿರುವ ಚೇಳುಗಳಲ್ಲಿ ಹಲವು ಜಾತಿಗಳಿವೆ. ಪ್ರಮುಖವಾಗಿ 13 ಕುಟುಂಬಗಳನ್ನು ಗುರುತಿಸಲಾಗಿದೆ. ಸಮುದ್ರ ಚೇಳು 8 ಅಡಿ ಉದ್ದವಿರುತ್ತದೆ.

ಬಾಲದಲ್ಲಿ ವಿಷ
ಹುಳಗಳು, ಕೀಟಗಳು, ಇಲಿ-ಹೆಗ್ಗಣಗಳು, ಹಕ್ಕಿಗಳು, ಹಲ್ಲಿಗಳು ಅದರ ಆಹಾರ. ಮುಂಭಾಗದಲ್ಲಿರುವ ಇಕ್ಕಳದಂತಹ ಕೊಂಬುಗಳಿಂದ ಬೇಟೆಯನ್ನು ಹಿಡಿದು ಬಾಲದಲ್ಲಿರುವ ಕೊಂಡಿಯಿಂದ ಚುಚ್ಚುತ್ತದೆ. ಕೊಂಡಿಯಲ್ಲಿ ನ್ಯೂರೋಟಾಕ್ಸಿನ್‌ ಎಂಬ ವಿಷವಿದೆ. ಅದು ಎದುರಾಳಿಯ ದೇಹ ಸೇರಿದಾಗ ಅದನ್ನು ನಿಷ್ಕ್ರಿಯಗೊಳಿಸುತ್ತದೆ. ಬಳಿಕ ಕೊಂಬುಗಳಲ್ಲಿರುವ ಅರದಂತಹ ಹಲ್ಲುಗಳಿಂದ ಅರೆದು ಬೇಟೆಯ ದೇಹದ ರಸವನ್ನು ಮಾತ್ರ ಸೇವಿಸಿ ಎಲುಬು, ಚರ್ಮಗಳನ್ನು ಬಿಸುಡುತ್ತದೆ. ಒಮ್ಮೆ ಹೊಟ್ಟೆ ತುಂಬಿದರೆ ಒಂದು ವರ್ಷವಾದರೂ ಹಸಿವಿನ ಭಯವಿಲ್ಲ.

ಡ್ಯಾನ್ಸು ಮಾಡುತ್ತೆ
ಗಂಡು ಚೇಳು ಹೆಣ್ಣನ್ನು ಒಲಿಸಿಕೊಳ್ಳಲು ಅದರ ಮುಂದೆ ತನ್ನದೇ ಶೈಲಿಯಲ್ಲಿ ವಿಶಿಷ್ಟವಾಗಿ ನರ್ತಿಸುತ್ತದೆ. ಚೇಳಿನ ಮೊಟ್ಟೆಗಳು ಒಡೆದು ಮರಿಗಳಾದ ಕೂಡಲೇ ತಾಯಿ ಚೇಳಿನ ಮೈಮೇಲೇರಿಕೊಂಡು ಅದರ ಜೊತೆಗೆ ಸಾಗುತ್ತವೆ. ಇದರಿಂದಾಗಿ ಚೇಳಿನ ಬೆನ್ನನ್ನು ಒಡೆದು ಮರಿಗಳು ಹೊರಗೆ ಬರುತ್ತವೆಂಬ ತಪ್ಪು ಕಲ್ಪನೆಯೂ ಇದೆ. ಚೇಳಿನ ಕಣ್ಣು ಅದರ ಬೆನ್ನಿನ ಮೇಲಿರುತ್ತದೆ. ಮನುಷ್ಯನಿಗೆ ಸಾವು ತರುವಷ್ಟು ಪ್ರಮಾಣದ ವಿಷ ಚೇಳಿನಲ್ಲಿ ಇಲ್ಲ. ಐವತ್ತು ಚೇಳುಗಳ ವಿಷ ಒಟ್ಟಾದರೆ ಮಾತ್ರ ಪ್ರಾಣಾಂತಿಕವಾಗಬಹುದು.

ತಿಂಡಿ ತಯಾರಿಕೆ
ಪ್ರೈಡ್‌ ಜಾತಿಯ ಚೇಳುಗಳನ್ನು ಚೀನೀಯರು ಖಾದ್ಯ ತಯಾರಿಸಿ ತಿನ್ನುತ್ತಾರೆ. ಅದರಿಂದ ವೈನ್‌ ತಯಾರಿಸುತ್ತಾರೆ. ಚೇಳಿನ ಅಂಗಾಂಶಗಳಿಂದ ಕ್ಯಾನ್ಸರ್‌, ಮಲೇರಿಯಾ, ಸಂಧಿವಾತಗಳಿಗೆ ಪರಿಣಾಮಕಾರಿ ಔಷಧಿ ಕಂಡುಹಿಡಿಯುವಲ್ಲಿ ವಿಜ್ಞಾನಿಗಳು ಮಹತ್ವದ ಹಂತ ತಲುಪಿದ್ದಾರೆ. ಚೇಳು ಅಂದರೆ ಭಯವೂ ಇದೆ. ಚೇಳಿನಿಂದ ಅಭಯವೂ ಇದೆ.

– ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.