Cinema Theater: ಆಹಾರ, ಪಾನೀಯದ ಜಿಎಸ್ಟಿ ಇಳಿಕೆ
ಶೇ. 18ರಿಂದ ಶೇ. 5ಕ್ಕೆ ತಗ್ಗಿಸಿ ಜಿಎಸ್ಟಿ ಮಂಡಳಿ ಘೋಷಣೆ
Team Udayavani, Jul 12, 2023, 8:25 AM IST
ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್ಟಿ ಮಂಡಳಿಯ 50ನೇ ಸಭೆಯು ಚಿತ್ರಪ್ರೇಮಿಗಳಿಗೆ ಶುಭಸುದ್ದಿ ನೀಡಿದೆ. ಚಿತ್ರಮಂದಿರಗಳಲ್ಲಿ ಪೂರೈಸಲಾಗುವ ಆಹಾರ ಮತ್ತು ಪಾನೀಯಗಳ ಮೇಲಿನ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ)ಯನ್ನು ಶೇ. 5ಕ್ಕೆ ಇಳಿಸಲು ಮಂಡಳಿ ನಿರ್ಧರಿಸಿದೆ.
ಈವರೆಗೆ ಇದಕ್ಕೆ ಶೇ. 18 ಜಿಎಸ್ಟಿ ವಿಧಿಸಲಾಗುತ್ತಿತ್ತು. ಇದಲ್ಲದೆ ತೆರಿಗೆ ಪದ್ಧತಿಯಲ್ಲಿ ಇನ್ನೂ ಕೆಲವು ಬದಲಾವಣೆಗಳನ್ನು ಮಂಗಳವಾರದ ಸಭೆಯಲ್ಲಿ ತರಲಾಗಿದೆ. ಫಿಶ್ ಸೊಲ್ಯೂಬಲ್ ಪೇಸ್ಟ್, ಎಲ್ಡಿ ಸ್ಲಾéಗ್ಗಳ ತೆರಿಗೆಯನ್ನು ಶೇ. 18ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಆನ್ಲೈನ್ ಗೇಮಿಂಗ್ ಕಂಪೆನಿಗಳು, ಕುದುರೆ ರೇಸ್ ಮತ್ತು ಕ್ಯಾಸಿನೋಗಳ ವಹಿವಾಟಿನ ಮೇಲೆ ಶೇ. 28ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಇಷ್ಟು ತೆರಿಗೆ ವಿಧಿಸುವುದರಿಂದ ಇಡೀ ಉದ್ಯಮವೇ ನಾಶವಾಗಲಿದೆ ಎಂಬ ಗೇಮಿಂಗ್
ಉದ್ಯಮಗಳ ಕಳವಳಕ್ಕೆ ಪ್ರತಿಕ್ರಿಯಿಸಿರುವ ಸಚಿವೆ ನಿರ್ಮಲಾ, “ನಾವು ಯಾವ ಉದ್ಯಮವನ್ನೂ ನಾಶ ಮಾಡುತ್ತಿಲ್ಲ’ ಎಂದಿದ್ದಾರೆ.
ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳಿಗೆ ಬಳಸುವ ಔಷಧಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದೆ. ಖಾಸಗಿ ಬಾಹ್ಯಾಕಾಶ ಕಂಪೆನಿಗಳು ನೀಡುವ ಉಪಗ್ರಹ ಸೇವೆಗಳಿಗೂ ತೆರಿಗೆ ವಿನಾಯಿತಿ ಒದಗಿಸಲಾಗಿದೆ.
ಇದೇ ವೇಳೆ, ಸೆಸ್ ಆಕರ್ಷಿಸುವ ನಿಟ್ಟಿನಲ್ಲಿ ಎಸ್ಯುವಿಗಳ ವ್ಯಾಖ್ಯಾನವನ್ನು ಬದಲಿಸಲಾಗಿದೆ. ಪ್ರಸ್ತುತ ಎಸ್ಯುವಿ ಎಂದು ಕರೆಸಿಕೊಳ್ಳಲು ನಾಲ್ಕು ಮಾನದಂಡಗಳಿದ್ದವು. ಆ ವಾಹನವು “ಎಸ್ಯುವಿ’ ಎಂದು ಕರೆಸಿಕೊಳ್ಳಬೇಕು, ನಾಲ್ಕು ಮೀ. ಅಥವಾ ಅದಕ್ಕಿಂತ ಹೆಚ್ಚು ಉದ್ದವಿರಬೇಕು, ಎಂಜಿನ್ ಸಾಮರ್ಥ್ಯ 1,500 ಸಿ.ಸಿ.ಗಿಂತ ಹೆಚ್ಚಿರಬೇಕು ಮತ್ತು ಗ್ರೌಂಡ್ ಕ್ಲಿಯರೆನ್ಸ್ ಕನಿಷ್ಠ 170 ಎಂ.ಎಂ. ಇರಬೇಕು. ಈ ವ್ಯಾಖ್ಯಾನವನ್ನು ಮಂಗಳವಾರದ ಸಭೆಯಲ್ಲಿ ಬದಲಾಯಿಸಲಾಗಿದ್ದು, ಇನ್ನು ಮುಂದೆ ಕೊನೆಯ 3 ಮಾನದಂಡಗಳಿದ್ದರೆ “ಎಸ್ಯುವಿ’ ಎಂದು ಪರಿಗಣಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ
Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ
Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್ ಡೆಲಿವರಿ ಯುವಕ ಆತ್ಮಹತ್ಯೆ
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.