ಜಮಖಂಡಿ: ಅಯೋಧ್ಯೆ-ಕನ್ಯಾಕುಮಾರಿವರೆಗೆ ಸೈಕಲ್‌ ಯಾತ್ರೆ

ಉಪಹಾರ ನೀಡುವ ಮೂಲಕ ಅಂದಾಜು 35 ಸಾವಿರ ವಂತಿಕೆ ಸಂಗ್ರಹವಾಗಿದೆ.

Team Udayavani, Jul 13, 2023, 4:20 PM IST

ಜಮಖಂಡಿ: ಅಯೋಧ್ಯೆ-ಕನ್ಯಾಕುಮಾರಿವರೆಗೆ ಸೈಕಲ್‌ ಯಾತ್ರೆ

ಜಮಖಂಡಿ: ರಾಮನು ಅಂದು ವನವಾಸದಲ್ಲಿ ಸಂಚರಿಸಿದ ವನದ ದಾರಿಯಲ್ಲಿ ಸೈಕಲ್‌ ಮೂಲಕ ಉತ್ತರಪ್ರದೇಶದ
ಯುವಕನೊಬ್ಬ ಅಯೋಧ್ಯೆಯಿಂದ ಕನ್ಯಾಕುಮಾರಿವರೆಗೆ ಸುದೀರ್ಘ‌ ಯಾತ್ರೆ ಕೈಗೊಂಡಿದ್ದು, ಜಮಖಂಡಿ ನಗರಕ್ಕೆ ಆಗಮಿಸುವ ಮೂಲಕ ರಾಮತೀರ್ಥದಲ್ಲಿರುವ ರಾಮನ ಪಾದುಕೆ ಸ್ಥಳಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ಉತ್ತರಪ್ರದೇಶದ ಅಯೋಧ್ಯೆ ನಗರದ ನಿವಾಸಿ ಅಭಿಷೇಕ ಸಾವಂತ ಶ್ರೀವಾತ್ಸವ್‌ ವೃತ್ತಿಯಲ್ಲಿ ಪಂಜಾಬ್‌ ಕೇಸರಿ ಪತ್ರಿಕೆ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಸದ್ಯ ರಜೆಯೊಂದಿಗೆ ಸೈಕಲ್‌ ಯಾತ್ರೆ ಕೈಗೊಂಡಿದ್ದಾರೆ. ಅಯೋಧ್ಯೆ ಡೈರಿ ಟೂರಿಸ್ಟ್‌ ವೆಲ್ಪೇರ್‌ ಅಸೋಸಿಯೇಷನ್‌ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ.

ಏ.6ರಂದು ಆರಂಭಿಸಿರುವ ಸೈಕಲ್‌ ಯಾತ್ರೆ ಮೂಲಕ 93 ದಿನದಲ್ಲಿ ಈಗಾಗಲೇ 6 ಸಾವಿರ ಕಿ.ಮೀ ಯಾತ್ರೆ ಸಂಚರಿಸಿದ್ದು ಇನ್ನೂ 2.5 ಸಾವಿರ ಕಿ.ಮೀ ಸಂಚರಿಸಬೇಕಿದೆ. ರಾಮನ 12 ವರ್ಷದ ವನವಾಸದಲ್ಲಿ ಸಂಚರಿಸಿದ ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡುವ ಗುರಿ ಹೊಂದಿದ್ದಾರೆ. ಶ್ರೀರಾಮ ಅಯೋಧ್ಯೆಯಿಂದ ಕನ್ಯಾಕುಮಾರಿವರೆಗೆ ಕಾಡು, ನಾಡು, ಬೆಟ್ಟ-ಗುಡ್ಡಗಳ ನಡುವೆ ಸಂಚರಿಸಿದ
ದಾರಿಯಲ್ಲಿ ನಿಮಾರ್ಣಗೊಂಡಿರುವ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿರುವ ಮಹಿಮೆ ಅರಿಯುವ ಮೂಲಕ ರಾಮನ ಮಹಿಮೆ ಬಣ್ಣಿಸುತ್ತ ಸಾಗುತ್ತಿರುವುದು ವಿಷೇಷವಾಗಿದೆ.

ಸ್ಪರ್ಧಾತ್ಮಕ ಯುಗದಲ್ಲಿ ರಾಮನ ಮಹಿಮೆ ಇಂದಿನ ಯುವಕರಿಗೆ ಅವಶ್ಯಕತೆ ಪರಿಕಲ್ಪನೆಯಲ್ಲಿ ಯಾತ್ರೆ ಕೈಗೊಂಡಿದ್ದಾರೆ. ಯುವ ಪೀಳಿಗೆ ರಾಮ ಸಂಚರಿಸಿದ ಸ್ಥಳಗಳ ಪರಿಚಯ ಜೊತೆಗೆ ರಾಮನ ಬಗ್ಗೆ ಜನರಲ್ಲಿರುವ ತಪ್ಪು ಸಂದೇಶ ದೂರ ಮಾಡಲು ಕ್ಷೇತ್ರಗಳಿಗೆ ಸಂಚರಿಸುತ್ತಿದ್ದೇನೆ ಎನ್ನುತ್ತಾರೆ ಅಭಿಷೇಕ. ಯಾತ್ರೆ ಕೈಗೊಂಡಿರುವ ಅಭಿಷೇಕಗೆ ಎಲ್ಲ ರೀತಿಯ ಸಹಾಯ, ಸಹಕಾರ ಲಭಿಸುತ್ತಿದ್ದು, ಬರಿಗೈಯಲ್ಲಿ ಆರಭಿಸಿದ ಯಾತ್ರೆಗೆ ಜನಸ್ಪಂದನೆ ಸಿಕ್ಕಿದೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಆರ್ಥಿಕ ಸಹಾಯ, ವಸತಿ, ಊಟ, ಉಪಹಾರ ನೀಡುವ ಮೂಲಕ ಅಂದಾಜು 35 ಸಾವಿರ ವಂತಿಕೆ ಸಂಗ್ರಹವಾಗಿದೆ.

ಉತ್ತರಪ್ರದೇಶ ಮೂಲಕ ಆರಂಭಿಸಿದ ಯಾತ್ರೆ ಮಧ್ಯಪ್ರದೇಶ, ಛತ್ತೀಸಗಡ, ತೆಲಂಗಾಣ, ಮಹಾರಾಷ್ಟ್ರ ಮೂಲಕ ಕರ್ನಾಟಕಕ್ಕೆ
ಆಗಮಿಸಿದ್ದಾರೆ.ಈ ಸಂದರ್ಭದಲ್ಲಿ ಅಜಯ ಕಡಪಟ್ಟಿ, ಶೈಲೇಶ ಆಪ್ಟೆ, ಶಂಕರ ಕಾಳೆ, ವಿನಾಯಕ ಗೌವಳಿ, ಸಿದ್ದು ನ್ಯಾಮಗೌಡ,
ಶ್ರೀಧರ್‌ ಕಂಬಿ, ವೀರೇಶ ಕಲೂತಿ, ಶ್ರೀಶೈಲ ಗಡಾದ, ಪ್ರಭೂಜಿ ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

10-mudhol

Mudhol: ಉದಯವಾಣಿ ಫಲಶೃತಿ; ಭವನ ಸ್ವಚ್ಛತೆಗೆ ಮುಂದಾದ ಅಧಿಕಾರಿಗಳು

Uttara Karnataka: ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಜಾನುವಾರು ಪ್ರೀತಿ

Uttara Karnataka: ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಜಾನುವಾರು ಪ್ರೀತಿ

PC-Gaddigowder

MUDA Scam: ಪಾರದರ್ಶಕ ತನಿಖೆಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಗದ್ದಿಗೌಡರ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.