ರಜಿನಿ ಕಣ್ಣಲ್ಲಿ ಅಂಬುಜ ಕನಸು
Team Udayavani, Jul 14, 2023, 2:45 PM IST
ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಅನೇಕ ನಟಿಯರು ಈಗ ಸಿನಿಮಾರಂಗದಲ್ಲೂ ಬಿಝಿಯಾಗುತ್ತಿದ್ದಾರೆ. ಒಳ್ಳೆಯ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ ರಜಿನಿ. ಈಗಾಗಲೇ ಹಲವು ಧಾರಾವಾಹಿಗಳ ಪ್ರಧಾನ ಪಾತ್ರದಲ್ಲಿ ಗುರುತಿಸಿಕೊಂಡಿರುವ ರಜಿನಿ ಈಗ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಅದು “ಅಂಬುಜ’.
ಜು.21ಕ್ಕೆ ತೆರೆ ಕಾಣುತ್ತಿರುವ ಈ ಚಿತ್ರದಲ್ಲಿ ರಜಿನಿ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರ ಟೈಟಲ್ ರೋಲ್ನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂದಹಾಗೆ, ಇದು ರಜಿನಿ ನಟಿಸಿರುವ ಚೊಚ್ಚಲ ಚಿತ್ರ. ಮೊದಲ ಚಿತ್ರದಲ್ಲೇ ಟೈಟಲ್ ರೋಲ್ನಲ್ಲಿ ಕಾಣಿಸಿಕೊಂಡಿರುವ ರಜಿನಿ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅವರು, “ಭಾವನಾತ್ಮಕವಾಗಿ ಎಲ್ಲರನ್ನೂ ಕಾಡುವ ಪಾತ್ರ. ಒಂದು ಕಡೆ ಸೆಂಟಿಮೆಂಟ್, ಇನ್ನೊಂದು ಕಡೆ ರಗಡ್ ಲುಕ್ ಇದೆ. ಎಲ್ಲಾ ಪಾತ್ರಗಳ ಮಧ್ಯೆ ಎದ್ದು ಕಾಣುವ ಪಾತ್ರವಿದು. ನಾನಿಲ್ಲಿ ಅಂಬುಜ ಎಂಬ ಟೈಟಲ್ ರೋಲ್ ಮಾಡಿದ್ದೇನೆ. ಅಂಬುಜ ಪಾತ್ರಕ್ಕೆ ಸಾಕಷ್ಟು ಶೇಡ್ಸ್ ಇದೆ. ನಿರ್ದೇಶಕರು ಅದನ್ನು ಸಿನಿಮಾದುದ್ದಕ್ಕೂ ತೋರಿಸಿದ್ದಾರೆ’ ಎನ್ನುತ್ತಾರೆ ರಜಿನಿ.
ಕಾಸ್ಟ್ಯೂಮ್ ಭಾರ
“ಅಂಬುಜ’ ಚಿತ್ರ ಲಂಬಾಣಿ ಜನಾಂಗದ ಮಹಿಳೆಯ ಸುತ್ತ ಸಾಗುವ ಸಿನಿಮಾ. ಹಾಗಾಗಿ, ಸಿನಿಮಾದುದ್ದಕ್ಕೂ ಲಂಬಾಣಿ ಮಹಿಳೆಯರ ಹಾಕುವ ಕಾಸ್ಟೂéಮ್ನಲ್ಲೇ ರಜಿನಿ ಕಾಣಿಸಿಕೊಂಡಿದ್ದಾರೆ. ಆದರೆ, ಆ ಕಾಸ್ಟೂéಮ್ 20ಕೆಜಿಗೂ ಅಧಿಕ ತೂಕದಿಂದ ಕೂಡಿತ್ತಂತೆ. “ಸಿನಿಮಾ ನೈಜವಾಗಿ ಮೂಡಿಬರಬೇಕೆಂಬ ಕಾರಣದಿಂದ ಚಿತ್ರದ ಕಾಸ್ಟೂéಮ್ ಅನ್ನು ನೈಜವಾಗಿ ಸಿದ್ಧಪಡಸಲಾಗಿತ್ತು. ಅಷ್ಟೊಂದು ಭಾರದ ಕಾಸ್ಟೂéಮ್ ಹಾಕಿ ಚಿತ್ರೀಕರಣ ಮಾಡೋದು ಕಷ್ಟ. ದುಪ್ಪಟವನ್ನು ತಲೆ ಮೇಲೆ ಹಾಕಿಕೊಂಡಾಗ ಎರಡು ದಿನ ತಲೆನೋವು ಬರುತ್ತಿತ್ತು. ಅಷ್ಟೊಂದು ಭಾರವಿತ್ತು. ಚಿತ್ರದಲ್ಲಿ ಅಷ್ಟೊಂದು ತೂಕದ ಕಾಸ್ಟ್ಯೂಮ್ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದು ಒಂದು ಸವಾಲು’ ಎನ್ನುವುದು ರಜಿನಿ ಮಾತು.
ಟೈಟಲ್ ರೋಲ್ ಖುಷಿ
ಮೊದಲ ಚಿತ್ರದಲ್ಲೇ ಟೈಟಲ್ ರೋಲ್ನಲ್ಲಿ ಕಾಣಿಸಿಕೊಂಡಿರುವ ಖುಷಿ ರಜಿನಿ ಅವರದು. “ಇವತ್ತು ಮಹಿಳಾ ಪ್ರಧಾನ ಚಿತ್ರಗಳು ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ನನಗೆ ಟೈಟಲ್ ರೋಲ್ ಸಿಕ್ಕಿರೋದು ನಿಜಕ್ಕೂ ತುಂಬಾ ಖುಷಿಯಾಗಿದೆ. ನನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಲು ನಾನು ಪ್ರಯತ್ನಿಸಿದ್ದೇನೆ’ ಎನ್ನುವ ರಜಿನಿ ಕೈಯಲ್ಲಿ ಇನ್ನೊಂದಿಷ್ಟು ಸಿನಿಮಾಗಳಿವೆ. ಎಲ್ಲವೂ ನಟನೆಗೆ ಅವಕಾಶವಿರುವ ಪಾತ್ರಗಳೇ. “ನನಗೆ ಸಣ್ಣಪಾತ್ರವಾದರೂ ಸರಿ, ಅದನ್ನು ಜನ ಗುರುತಿಸುವಂತಿರಬೇಕು. ಇವತ್ತು ಲೀಡ್ರೋಲ್, ಹೀರೋ ಯಿನ್ ಎನ್ನುವುದಕ್ಕಿಂತ ಪಾತ್ರದ ತೂಕಮುಖ್ಯವಾಗುತ್ತಿದೆ. ನಾನು ಕೂಡಾ ಅಂಥ ಪಾತ್ರಗಳನ್ನು ಎದುರು ನೋಡು ತ್ತಿದ್ದೇನೆ’ ಎನ್ನುವ ರಜಿನಿ ಸದ್ಯ “ಅಂಬುಜ’ ದತ್ತ ಮುಖ ಮಾಡಿದ್ದಾರೆ
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ
Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ
Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್ಸರ್ವೀಸ್ ಸೆಂಟರ್ಗೆ 12 ಸಾವಿರ ದಂಡ!
Thumbe: ಅಗೆದಲ್ಲಿ ಕಡೆಗೂ ಡಾಮರು
Bengaluru: ʼರಾಹುಲ್ ಭಯೋತ್ಪಾದಕ’ ಹೇಳಿಕೆ: ಕೇಂದ್ರ ಸಚಿವ ರವನೀತ್ ವಿರುದ್ಧ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.