ಯಲಗೂರೇಶ್ವರ ದೇವರ ಹುಂಡಿಯಲ್ಲಿ ನೇಪಾಳಿ ನೋಟು, ಪಿಎಸ್ಐ, ಕ್ಲರ್ಕ್ ಹುದ್ದೆ ನೇಮಕಕ್ಕೆ ಹರಕೆ!
Team Udayavani, Jul 17, 2023, 4:40 PM IST
ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ನೇಪಾಳಿ ನೋಟುಗಳು ಹಾಗೂ ಸಂಕಷ್ಟ ಪರಿಹಾರಕ್ಕೆ ಭಕ್ತರು ಹಲವು ಸಮಸ್ಯೆಗಳ ಪರಿಹಾರಕ್ಕೆ ಲಿಖಿತ ರೂಪದಲ್ಲಿ ಮೊರೆ ಇಟ್ಟ ಪತ್ರಗಳು ಪತ್ತೆಯಾಗಿವೆ.
ಯಲಗೂರೇಶ ಎಂದು ಕರೆಯಲ್ಪಡುವ ಯಲಗೂರಿನ ಶ್ರೀಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಸೋಮವಾರ ನಡೆದ ಅಂತಿಮ ಎಣಿಕೆಯಲ್ಲಿ 50,65,970 ರೂ. ಕಾಣಿಗೆ ಹುಂಡಿಯಲ್ಲಿ ಸಮಗ್ರಹವಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಜಾಗೃತ ದೇವರೆಂದು ನಂಬಿಕೆ ಇರುವ ಯಲಗೂರು ಯಲಗೂರೇಶನ ಕಾಣಿಕೆ ಹುಂಡಿಯನ್ನು ದೇವಸ್ಥಾನದ ಆಡಳಿತ ಮಂಡಳಿ ಎಣಿಕೆಗೆ ಮುಂದಾಗಿತ್ತು. 50 ಜನರು ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.
ಹುಂಡಿ ಎಣಿಕೆ ವೇಳೆ ವಿವಿಧ ಬಗೆಯ ಮುಖ ಬೆಲೆಯ ನೇಪಾಳಿ ನೋಟುಗಳು ಪತ್ತೆಯಾಗಿವೆ. ಭಾರತದ 2000 ರೂ. ಮುಖ ಬೆಲೆಯ 40 ನೋಟುಗಳೂ ಹುಂಡಿ ಎಣಿಕೆ ಕಾರ್ಯದಲ್ಲಿ ಪತ್ತೆಯಾಗಿವೆ.
ಕೆಲವು ಭಕ್ತರು ಕಾಣಿಕೆ ಹುಂಡಿಗೆ ಕೇವಲ ಕಾಣಿಗೆಯನ್ನು ಮಾತ್ರ ಸಲ್ಲಿಸದೇ, ನೌಕರಿ, ಸಾಲದ ಸಮಸ್ಯೆಗಳ ಪರಿಹಾರಕ್ಕೆ ಲಿಖಿತ ರೂಪದಲ್ಲಿ ತಮ್ಮ ಇಷ್ಟಾರ್ಥ ಈಡೇರಿಕೆಗೆ ಕೋರಿಕೆ ಮಂಡಿಸಿದ್ದಾರೆ. ಓರ್ವ ಭಕ್ತ ನಾನು ಮಾಡಿಕೊಂಡಿರುವ ಸಾಲ ತೀರಿಸುವ ದಾರಿ ತೋರು ಆಂಜನೇಯ ಎಂದು ಪರಿಹಾರ ಮಾರ್ಗಕ್ಕೆ ಲಿಖಿತ ಮೊರೆ ಇಟ್ಟಿದ್ದಾರೆ.
ಮರಾಠಿ ಭಾಷೆಯಲ್ಲಿರುವ ಒಂದು ಪತ್ರದಲ್ಲಿ ಭಕ್ತ ತನ್ನನ್ನು ಪಿಎಸ್ಐ ಹುದ್ದೆಗೆ ನೇಮಕ ಮಾಡುವಲ್ಲಿ ಹರಸುವಂತೆ ಲಿಖಿತ ಮನವಿ ಮೂಲಕ ಹರಕೆಯ ಚೀಟಿ ಬರೆದು ಹುಂಡಿಗೆ ಹಾಕಿದ್ದಾನೆ. ಮತ್ತೋರ್ವ ಭಕ್ತ ತನ್ನನ್ನು ಎಸ್ಡಿಎ-ಎಫ್ಡಿಎ ಹುದ್ದೆಗೆ ನೇಮಕವಾಗುವಂತೆ ಆಶೀರ್ವದಿಸುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾನೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪೂರ್ವ ದೊಂಬಿವಲಿಯ ನಿಂಜೆ ಮೂಲದ ಚಂದ್ರೇಶ ಲೋಧಾ ಸ್ಮಾರಕ ಶಾಲೆಯ ಉತ್ತರ ಪತ್ರಿಕೆ ಹಾಳೆಯಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ಮರಾಠಿ ಭಾಷೆಯಲ್ಲಿ ಯಲಗೂರೇಶನಿಗೆ ಭಕ್ತಿ ಪೂರ್ವಕ ಮನವಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಗ್ರಾ.ಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ
Muddebihal: ಕೃಷ್ಣಾ ನದಿ ಪಾಲಾದ ಯುವತಿ: ಶವ ಪತ್ತೆ
Muddebihal: ಕೃಷ್ಣಾ ನದಿ ಪಾಲಾದ ಯುವತಿ: ಶವಕ್ಕಾಗಿ ಶೋಧ
Vijayapura: ಮುನಿರತ್ನ ಚನ್ನಾರೆಡ್ಡಿ ಪ್ರಕರಣಕ್ಕೆ ತಳುಕು ಬೇಡ: ಎಂ.ಬಿ.ಪಾಟೀಲ
Congress: ನೂರು ಕಾನೂನು ಮಾಡಿ,ನಾನು ಅಂಜಲ್ಲ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.