ಕುಂದಾಪುರ ಬಹುತ್ವ ಸಂಸ್ಕೃತಿಯ ಪ್ರತೀಕ

ಕುಂದಾಪ್ರ ಕನ್ನಡಿಗರಿಗೆ ಟ್ವೀಟ್‌ ಮೂಲಕ ಶುಭಕೋರಿದ ಸಿಎಂ

Team Udayavani, Jul 18, 2023, 5:19 AM IST

ಕುಂದಾಪುರ ಬಹುತ್ವ ಸಂಸ್ಕೃತಿಯ ಪ್ರತೀಕ

ಕುಂದಾಪುರ: ವೈಶಿಷ್ಟ್ಯ  ಪೂರ್ಣ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳ ಕಡಲ ತಡಿಯ ಕುಂದಾಪುರ ಈ ನೆಲದ ಬಹುತ್ವ ಸಂಸ್ಕೃತಿಯ ಪ್ರತೀಕ. ತಮ್ಮ ಭಾಷೆಮತ್ತು ಬದುಕನ್ನು ಜಗತ್ತಿಗೆ ಪರಿಚಯಿಸಲು ಪ್ರತೀ ವರ್ಷ ಆಸಾಡಿ ಅಮಾವಾಸ್ಯೆಯನ್ನು ಕುಂದಾ ಪ್ರ ಕನ್ನಡ ದಿನವನ್ನಾಗಿ ಆಚರಿಸಲಾ ಗುತ್ತಿದೆ. ಕುಂದಾಪ್ರ ಕನ್ನಡವೆಂಬ ಚೆಂದದ ಕನ್ನಡ ಮಾತನಾಡುವವರೆಲ್ಲರಿಗೂ ಶುಭಾಶಯ ಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮೂಲಕ ಶುಭಕೋ ರಿದ್ದಾರೆ.

ಬೊಮ್ಮಾಯಿ ಹಾರೈಕೆ
ಕುಂದಾಪ್ರ ಕನ್ನಡ ಭಾಷೆ, ಅದರ ಉಚ್ಚಾರ, ಶೈಲಿ, ಬದುಕು ಎಲ್ಲವೂ ವೈಶಿಷ್ಟéಪೂರ್ಣ. ಕುಂದಾಪುರದ ಆಹಾರ ಪದ್ಧತಿಯೂ ವಿಭಿನ್ನ. ಹೀಗಾಗಿ ಹೊಟೇಲು ಉದ್ಯಮದಲ್ಲಿ ಕುಂದಾ ಪುರಿಗರದ್ದು ಮೇಲುಗೈ. ವಿಶ್ವ ಕುಂದಾಪ್ರ ಕನ್ನಡ ದಿನದಂದು ಸಮಸ್ತ ಕುಂದಾಪುರದ ಜನತೆಗೆ ಶುಭಾಶಯಗಳು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್‌ ಮೂಲಕ ಹಾರೈಸಿದ್ದಾರೆ.

ಸೊಬಗಿನ ಭಾಷೆ: ಹೆಬ್ಬಾಳ್ಕರ್‌
ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಕನ್ನಡ ಭಾಷೆ ಯ ಅತ್ಯಂತ ಸರಳ ಹಾಗೂ ಸಂಕ್ಷಿಪ್ತ ರೂಪವೆನಿಸಿರುವ ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ವರ್ಣಿಸಲಾಗದು. ಈ ಭಾಷೆಗೆ ತನ್ನದೇ ಆದ ವೈಶಿಷ್ಟéವಿದೆ. ಕುಂದಾಪ್ರ ಕನ್ನಡ ಭಾಷಿಕರು ರಾಜ್ಯ ರಾಜಧಾನಿ ಸೇರಿದಂತೆ ಜಗತ್ತಿನ ವಿವಿಧೆಡೆ ನೆಲೆ ನಿಂತಿದ್ದಾರೆ. ಈ ಮಧ್ಯೆಯೂ ತಮ್ಮ ಭಾಷೆಗೊಂದು ಅಸ್ತಿತ್ವ ಬೇಕೆಂದು ಈ ದಿನವನ್ನಾಗಿ ಆಚರಿಸುತ್ತಿದ್ದು, ಕುಂದಾಪ್ರ ಕನ್ನಡವನ್ನು ಪೂಜಿಸಿ, ಆರಾಧಿಸುವ ಎಲ್ಲ ಕುಂದಾಪ್ರ ಭಾಷಿಕರಿಗೆ ಶುಭಾಶಯಗಳು ಎಂದು ಟ್ವೀಟ್‌ ಮಾಡಿದ್ದಾರೆ.

ವಿವಿಧೆಡೆ ಆಚರಣೆ

ಆಸಾಡಿ ಅಮಾವಾಸ್ಯೆ ದಿನವಾದ ಸೋಮವಾರ ಕುಂದಾಪುರ, ಬೈಂದೂರು, ಕಾರ್ಕಳ ಸಹಿತ ರಾಜ್ಯದ ವಿವಿಧೆಡೆ ಕುಂದಾ ಪ್ರ ಕನ್ನಡಿಗರು ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಸಂಭ್ರಮದಿಂದ ಆಚರಿಸಿದರು.

ಕುಂದಾಪುರ, ಕೋಟ, ಬೀಜಾಡಿ, ಸಿದ್ದಾಪುರ, ಕೊಲ್ಲೂರು, ಉಪ್ಪುಂದ, ಬೈಂ ದೂರು, ಹಂದಾಡಿ, ತೆಕ್ಕಟ್ಟೆ, ತಲ್ಲೂರು, ಕುಳುಂಜೆ-ಶಂಕರನಾರಾಯಣ, ಕಾರ್ಕಳ, ಧಾರವಾಡ ಸೇರಿದಂತೆ ಹಲವೆಡೆ ವಿವಿಧ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆ ಗಳು ಆಚರಿಸಿದರು. ನಗೆ ಹಬ್ಬ, ನೃತ್ಯ, ಸಂಗೀತ ಸ್ಪರ್ಧೆ, ಕೆಸರುಗದ್ದೆ ಕ್ರೀಡಾ ಕೂಟಗಳು ನಡೆದವು. ಹಿಂದಿನ ಕಾಲದ ತಿಂಡಿ-ತಿನಿಸುಗಳ ಪ್ರದರ್ಶನ, ಸಾಧಕರಿಗೆ ಸಮ್ಮಾನ, ಹೂವಿನಕೋಲು ಪ್ರಾತ್ಯಕ್ಷಿಕೆ, ಕುಂದ ಗನ್ನಡದ ಗಾದೆಗಳ ಪ್ರಾತ್ಯಕ್ಷಿಕೆ ನಡೆಯಿತು.

ಹಲವರಿಂದ ಶುಭಾಶಯ
ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ, ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವರಾದ ಮಂಕಾಳ ವೈದ್ಯ, ಎನ್‌.ಎಸ್‌. ಭೋಸರಾಜು, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಕಿರಣ್‌ ಕೊಡ್ಗಿ, ಗುರುರಾಜ್‌ ಗಂಟಿಹೊಳೆ ಸಹಿತ ಹಲವರು ಕುಂದಾಪ್ರ ದಿನಾಚರಣೆಗೆ ಶುಭಕೋರಿದ್ದಾರೆ.

ಆ. 16ರಂದು ಸಮುದ್ರ ಸ್ನಾನ
ಆಷಾಢ ಅಮಾವಾಸ್ಯೆ ದಿನ ಕುಂದಾಪುರ ಭಾಗದ ಮರವಂತೆ, ಸೋಮೇಶ್ವರ, ಮತ್ತಿತರ ಕಡೆಗಳಲ್ಲಿ ಸಮುದ್ರ ಸ್ನಾನ ನಡೆಯುವುದು ವಾಡಿಕೆ. ಆದರೆ ಈ ಬಾರಿ ಈ ತಿಂಗಳಲ್ಲಿ 2 ಅಮಾವಾಸ್ಯೆಗಳು ಬರುವುದರಿಂದ ಈ ಭಾಗದಲ್ಲಿ ಆ. 16ರಂದು ಸಮುದ್ರ ಸ್ನಾನ ಆಚರಣೆ ನಡೆಯಲಿದೆ. ಮರವಂತೆ ಶ್ರೀ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲೂ ಅದೇ ದಿನ ಕರ್ಕಾಟಕ ಜಾತ್ರೆ ನೆರವೇರಲಿದೆ.

ಟಾಪ್ ನ್ಯೂಸ್

Kaup

Ucchila Dasara: ಕರಾವಳಿಯ 108 ವೀಣಾವಾದಕರಿಂದ ಶತವೀಣಾವಲ್ಲರಿ

Manipal-Rain

Heavy Rain: ಅನಿರೀಕ್ಷಿತ ಸಿಡಿಲು ಮಳೆಗೆ ದಂಗಾದ ಉಡುಪಿ

Mangalur

PDO Strikes: ಉಭಯ ಜಿಲ್ಲೆಗಳಲ್ಲಿ ಪಿಡಿಒ, ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

MGM-govinda-Bhat

Udupi: ʼಯಕ್ಷಗಾನ ಕಲಾವಿದನಾಗಿ ಪ್ರತಿಹಂತದಲ್ಲಿ ಕಲಿವ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದೆʼ

HAALUMADDI

Vitla: ಹಾಲುಮಡ್ಡಿ ಸಂಗ್ರಹಿಸಿ ರಿಕ್ಷಾದಲ್ಲಿ ಸಾಗಾಟ

Tejasvi

Govt. Bungalow: ತೇಜಸ್ವಿ ಯಾದವ್ ತೆರವುಗೈದ ಸರಕಾರಿ ಬಂಗಲೆಯಲ್ಲಿ ಸೋಫಾ, ಎಸಿ ನಾಪತ್ತೆ!

1-dd-abbb

Dipa Karmakar; 31 ರ ಹರೆಯದಲ್ಲೇ ನಿವೃತ್ತಿ ಘೋಷಿಸಿದ ಭಾರತದ ಖ್ಯಾತ ಜಿಮ್ನಾಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup

Ucchila Dasara: ಕರಾವಳಿಯ 108 ವೀಣಾವಾದಕರಿಂದ ಶತವೀಣಾವಲ್ಲರಿ

Manipal-Rain

Heavy Rain: ಅನಿರೀಕ್ಷಿತ ಸಿಡಿಲು ಮಳೆಗೆ ದಂಗಾದ ಉಡುಪಿ

MGM-govinda-Bhat

Udupi: ʼಯಕ್ಷಗಾನ ಕಲಾವಿದನಾಗಿ ಪ್ರತಿಹಂತದಲ್ಲಿ ಕಲಿವ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದೆʼ

puttige-2

Udupi; ಗೀತಾರ್ಥ ಚಿಂತನೆ 58-ಒಳ್ಳೆಯ ಕೆಲಸ, ಕೆಟ್ಟ ಕೆಲಸ: ಸಜ್ಜನ, ದುರ್ಜನ ಲಕ್ಷಣ

1

Bramavara: ಪೊಲೀಸರಿಗೆ ತಿಳಿಸದೆ ಅಂತ್ಯಕ್ರಿಯೆ; ದೂರು ದಾಖಲು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Kaup

Ucchila Dasara: ಕರಾವಳಿಯ 108 ವೀಣಾವಾದಕರಿಂದ ಶತವೀಣಾವಲ್ಲರಿ

Manipal-Rain

Heavy Rain: ಅನಿರೀಕ್ಷಿತ ಸಿಡಿಲು ಮಳೆಗೆ ದಂಗಾದ ಉಡುಪಿ

1-gk

Shri Rama Sena;ನ. 4ರಿಂದ ದತ್ತಮಾಲಾ ಅಭಿಯಾನ

Mangalur

PDO Strikes: ಉಭಯ ಜಿಲ್ಲೆಗಳಲ್ಲಿ ಪಿಡಿಒ, ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

MGM-govinda-Bhat

Udupi: ʼಯಕ್ಷಗಾನ ಕಲಾವಿದನಾಗಿ ಪ್ರತಿಹಂತದಲ್ಲಿ ಕಲಿವ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದೆʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.