![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jul 21, 2023, 7:08 AM IST
ಚೆನ್ನೈ: ಇಸ್ರೋ ತನ್ನ ಮಹತ್ವಾಕಾಂಕ್ಷಿ ಮಾನವಸಹಿತ ಬಾಹ್ಯಾಕಾಶ ಯೋಜನೆ “ಗಗನಯಾನ’ಕ್ಕೆ ಬಲವಾದ ಸಿದ್ಧತೆ ನಡೆಸುತ್ತಿದೆ. ತಮಿಳುನಾಡಿನ ಮಹೇಂದ್ರಗಿರಿಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಪ್ರೊಪಲ್ಶನ್ ಕಾಂಪ್ಲೆಕ್ಸ್ (ಐಪಿಆರ್ಸಿ)ನಲ್ಲಿ ಗಗನಯಾನ ಸರ್ವೀಸ್ ಮಾಡ್ನೂಲ್ ಪ್ರೊಪಲ್ಶನ್ ಸಿಸ್ಟಮ್(ಎಸ್ಎಂಪಿಎಸ್) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಬುಧವಾರ ನಡೆದ ಈ ಪರೀಕ್ಷೆಯು, ಐದು ಲಿಕ್ವಿಡ್ ಅಪೋಜಿ ಮೋಟಾರ್(ಎಲ್ಎಎಂ) ಎಂಜಿನ್ಗಳನ್ನು ಒಳಗೊಂಡಿತ್ತು. ಈ ಯೋಜನೆಯ ಮೂಲಕ ಗರಿಷ್ಠ ಮೂವರು ಮಾನವರನ್ನು ಉಡಾವಣಾ ನೌಕೆಯ ಮೂಲಕ ಭೂಮಿಯಿಂದ 400 ಕಿ.ಮೀ. ದೂರದ ಬಾಹ್ಯಾಕಾಶಕ್ಕೆ ಕಳುಹಿಸಿ, ಪುನಃ ವಾಪಸು ಭೂಮಿಗೆ ಅವರನ್ನು ಸುರಕ್ಷಿತವಾಗಿ ಕರೆತರಲಾಗುತ್ತದೆ ಎಂದು ಇಸ್ರೋ ಹೇಳಿದೆ. ಹಾಗೆಯೇ ಪ್ರತಿಕೂಲ ಸನ್ನಿವೇಶಗಳಲ್ಲೂ ಖಗೋಳದ ಪ್ರಕಾಶಮಾನವಾದ ಎಕ್ಸ್ ರೇ ಮೂಲಗಳ ವಿವಿಧ ಆಯಾಮಗಳನ್ನು ಅಧ್ಯಯನ ಮಾಡಲು ನೆರವಾಗುವ ಎಕ್ಸ್ ಪೊಸ್ಯಾಟನ್ನು (ಎಕ್ಸ್ ರೇ ಪೋಲಾರಿಮೀಟರ್ ಉಪಗ್ರಹ) ಸಿದ್ಧಪಡಿಸಲಾಗಿದೆ. ದೇಶದ ಇಂತಹ ಮೊದಲ ಯೋಜನೆ ಇದಾಗಿದೆ. ಇನ್ನು ಆದಿತ್ಯಯಾನಕ್ಕೂ ಇಸ್ರೋ ಸಿದ್ಧತೆ ನಡೆಸಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.