ಕೈಲಾಸ ಮಾನಸ ಸರೋವರಕ್ಕೆ ಹೊಸ ದಾರಿ
ಯಾತ್ರಿಗಳಿಗೆ ಹರ್ಷದ ಸುದ್ದಿ ನೀಡಿದ ಕೇಂದ್ರ ಸರಕಾರ
Team Udayavani, Jul 22, 2023, 7:45 AM IST
ಪಿಥೋರಗಢ: ಕೈಲಾಸ ಮಾನಸ ಸರೋವರಕ್ಕೆ ಇನ್ನು ಮುಂದೆ ನೇರವಾಗಿ ನಮ್ಮ ದೇಶದಿಂದಲೇ ತೆರಳಬಹುದು. ಈ ವರ್ಷದ ಸೆಪ್ಟಂಬರ್ನಿಂದ ಈ ಸೌಲಭ್ಯ ಆರಂಭಗೊಳ್ಳಲಿದೆ. ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಕೆಎಂವಿಎನ್ ಹಟ್ಸ್ನಿಂದ ಭಾರತ-ಚೀನ ಗಡಿಯ ಲಿಪುಲೇಖ್ ವರೆಗೆ ಬಾರ್ಡರ್ ರೋಡ್ ಆರ್ಗನೈಸೇಷನ್ (ಬಿಆರ್ಒ) ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿ ಮುಕ್ತಾಯಗೊಂಡಾಗ ಈ ಕನಸು ನನಸಾಗಲಿದೆ.
ಈ ಹೊಸ ಮಾರ್ಗದಿಂದಾಗಿ ಕೈಲಾಸ ಮಾನಸ ಸರೋವರ ಯಾತ್ರೆಯ ಅವಧಿ ಹಾಲಿ 3 ವಾರಗಳಿಂದ ಒಂದೇ ವಾರಕ್ಕೆ ಇಳಿಕೆಯಾಗಲಿದೆ. ಬಿಆರ್ಒದ ಡೈಮಂಡ್ ಪ್ರಾಜೆಕ್ಟ್ನ ಮುಖ್ಯ ಎಂಜಿನಿಯರ್ ವಿಮಲ್ ಗೋಸ್ವಾಮಿ ಮಾತನಾಡಿ, “ಕಾಮಗಾರಿ ನಿರ್ವಹಿಸಲು ಪೂರಕ ಹವಾಮಾನ ಇದ್ದರೆ ಪ್ರಸಕ್ತ ವರ್ಷದ ಸೆಪ್ಟಂಬರ್ಗೆ ಮುಕ್ತಾಯಗೊಳ್ಳಬಹುದು’ ಎಂದಿದ್ದಾರೆ.
ಕೊರೊನಾ ಆರಂಭವಾದ ಅವಧಿಯಲ್ಲಿ ಲಿಪುಲೇಖ್ ಪಾಸ್ ಮೂಲಕ ಕೈಲಾಸ- ಮಾನಸ ಸರೋವರ ಯಾತ್ರೆ ಕೈಗೊಳ್ಳುವುದನ್ನು ನಿಷೇಧಿಸಲಾಗಿತ್ತು. ಅನಂತರ ಆ ಮಾರ್ಗವಾಗಿ ಯಾತ್ರೆ ಕೈಗೆತ್ತಿಕೊಳ್ಳಲಾಗಿರಲಿಲ್ಲ. ಇದುವರೆಗೆ ಲಿಪುಲೇಖ್ವರೆಗಿನ ದುರ್ಗಮ 90 ಕಿ.ಮೀ. ದೂರವನ್ನು ನಡೆದೇ ಕ್ರಮಿಸ ಬೇಕಿತ್ತು. ಹಾಗೆಯೇ ಶೇ. 80ರಷ್ಟು ಮಾರ್ಗ ಚೀನದಲ್ಲಿ, ಭಾರತೀಯ ಭಾಗ ದಲ್ಲಿ ಶೇ. 20 ಮಾತ್ರ ಮಾರ್ಗವಿತ್ತು. ಹೊಸ ಮಾರ್ಗ ಆರಂಭವಾದ ಬಳಿಕ ಶೇ. 84ರಷ್ಟು ಯಾತ್ರೆ ಭಾರತದಲ್ಲಿ, ಕೇವಲ ಶೇ. 16 ಭಾಗ ಚೀನದಲ್ಲಿ ಇರಲಿದೆ.
ಈಗಿನ ಮಾರ್ಗಗಳು
1. ಬಾಗ್ದೋಗ್ರಾವರೆಗೆ ವಿಮಾನದಲ್ಲಿ ಪ್ರಯಾಣ. ಅನಂತರ 1,665 ಕಿ.ಮೀ. ರಸ್ತೆ ಪ್ರಯಾಣ. ಅನಂತರ 43 ಕಿ.ಮೀ. ನಡಿಗೆ. ಒಟ್ಟು 1,665 ಕಿ.ಮೀ. ದೂರದ ಪೈಕಿ 175 ಕಿ.ಮೀ. ಮಾತ್ರ ಭಾರತದಲ್ಲಿ, ಉಳಿದದ್ದು ಚೀನದಲ್ಲಿ.
2. ನೇಪಾಲದ ರಾಜಧಾನಿ ಕಾಠ್ಮಂಡುವಿಗೆ ವಿಮಾನ. ಅಲ್ಲಿಂದ ರಸ್ತೆಯ ಮೂಲಕ 1,940 ಕಿ.ಮೀ. ನೇಪಾಲದಲ್ಲಿಯೇ 840 ಕಿ.ಮೀ., ಚೀನದಲ್ಲಿ 43 ಕಿ.ಮೀ. ಮೂಲಕ ನಡಿಗೆ. ನೇಪಾಲದ ವ್ಯಾಪ್ತಿಯಲ್ಲಿ 755 ಕಿ.ಮೀ. ದೂರ ಹೆಲಿಕಾಪ್ಟರ್ ಮೂಲಕ ತೆರಳಲು ಅವಕಾಶ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ
Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!
Greece Golden Visa:ಶೇ.37ರಷ್ಟು ಭಾರತೀಯ ಪ್ರಜೆಗಳ ಬಂಡವಾಳ
GDP ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಕೊಡುಗೆ ಹೆಚ್ಚು: ವರದಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Bengaluru: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 23 ಲಕ್ಷ ರೂ. ವಂಚನೆ!
Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ
Karki Movie: ಹಳ್ಳಿ ಹುಡುಗನ ಹೋರಾಟದ ಹಾದಿ
INDvsBAN: ಟೆಸ್ಟ್ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ
Labanon: ಲೆಬನಾನ್ ಪ್ರಯಾಣಿಕರು ಪೇಜರ್ಸ್, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್ ಏರ್ ವೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.