![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jul 22, 2023, 9:52 AM IST
ವಿಟ್ಲ: ಮಣ್ಣು ತುಂಬಿದ್ದ ಲಾರಿ ಇಕೋ ವಾಹನಕ್ಕೆ ಢಿಕ್ಕಿಯಾದ ಘಟನೆ ಇಲ್ಲಿನ ಉಕ್ಕುಡ – ಕನ್ಯಾನ ರಸ್ತೆಯಲ್ಲಿ ಜು.22ರ ಶನಿವಾರ ಸಂಭವಿಸಿದೆ.
ವಿಟ್ಲ ಉಕ್ಕುಡ ಕನ್ಯಾನ ರಸ್ತೆಯಲ್ಲಿ ಸಂಚರಿಸುತ್ತಿರುವ ಮಣ್ಣಿನ ಲಾರಿಯು ಇಕೋ ವಾಹನಕ್ಕೆ ಢಿಕ್ಕಿಯಾಗಿ ವಾಹನ ಜಖಂಗೊಂಡಿದ್ದು, ಯಾರೂ ಗಾಯಗೊಂಡಿಲ್ಲ ಎಂದು ತಿಳಿದು ಬಂದಿದೆ.
ಕನ್ಯಾನ ಕಡೆಯಿಂದ ಬರುತ್ತಿದ್ದ ಬಾಕ್ಸೈಟ್ ಮಣ್ಣಿನ ಲಾರಿ ದೇಲಂತಬೆಟ್ಟು ಕೇಪುಳಗುಡ್ಡೆ ತಿರುವಿನಲ್ಲಿ ವಿಟ್ಲ ಉಕ್ಕುಡ ಕಡೆಯಿಂದ ಬರುತ್ತಿದ್ದ ಇಕೋ ವಾಹನಕ್ಕೆ ಢಿಕ್ಕಿಯಾಗಿದೆ. ಇದರಿಂದ ಇಕೋ ವಾಹನದ ಬಲ ಭಾಗ ಸಂಪೂರ್ಣ ಜಖಂಗೊಂಡಿದೆ.
ಮಣ್ಣಿನ ಲಾರಿಗಳ ಅಬ್ಬರ ತಾರಕಕ್ಕೇರಿದ್ದು, ಜನರಿಗೆ ನಿತ್ಯ ಸಮಸ್ಯೆ ಉಂಟಾಗುತ್ತಿದೆ. ಇವುಗಳ ವೇಗ, ಇತರ ವಾಹನಗಳಿಗೆ ಸೈಡ್ ಕೊಡದೆ ಸತಾಯಿಸುವ ರೀತಿ, ಈಗಾಗಲೇ ಹಲವು ಅಪಘಾತಗಳಿಗೆ ಕಾರಣವಾದ ಘಟನೆಗಳ ಸರಮಾಲೆಯನ್ನು ಸಂಬಂಧಪಟ್ಟ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದರೂ ಈ ಲಾರಿಗಳಿಗೆ ಕಡಿವಾಣ ಹಾಕುವವರಿಲ್ಲ.
You seem to have an Ad Blocker on.
To continue reading, please turn it off or whitelist Udayavani.