2011 ರಿಂದ ಭಾರತದ ಪೌರತ್ವ ತೊರೆದ 17.5 ಲಕ್ಷ ಮಂದಿ: ಎಸ್. ಜೈಶಂಕರ್‌ ಮಾಹಿತಿ

ಹೆಚ್ಚು ಭಾರತೀಯರು ಎಲ್ಲೆಲ್ಲಿ ನೆಲೆಸಿದ್ದಾರೆ..?

Team Udayavani, Jul 22, 2023, 6:49 PM IST

s jaishankar

ನವದೆಹಲಿ: ಲೋಕಸಭೆಯಲ್ಲಿ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಅಧಿವೇಶನದ ವೇಳೆ ಮಾತನಾಡಿದ ಎಸ್‌. ಜೈಶಂಕರ್‌ 2011 ರಿಂದ 2023 ರ ಜೂನ್ ವರೆಗೆ ಎಷ್ಟು ಮಂದಿ ಭಾರತದ ಪೌರತ್ವ ತೊರೆದಿದ್ದಾರೆ ಮತ್ತು ಅವರೆಲ್ಲ ಎಲ್ಲಿ ನೆಲೆಸಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

ಎಸ್‌. ಜೈಶಂಕರ್‌ ನೀಡಿರುವ ಮಾಹಿತಿಗಳ ಪ್ರಕಾರ 2011 ರಿಂದ 2023 ರ ಜೂನ್ ವರೆಗೆ 17.5 ಲಕ್ಷ ಮಂದಿ ಭಾರತದ ಪೌರತ್ವ ತೊರೆದಿದ್ಧಾರೆ. ಮೊದಲು ಭಾರತದಲ್ಲಿ ಜೀವಿಸುತ್ತಿದ್ದ ನಾಗರೀಕರು ಬೇರೆ ಬೇರೆ ಕಾರಣಗಳಿಂದಾಗಿ ಭಾರತವನ್ನು ತೊರೆದು ವಿದೇಶದಲ್ಲಿ ನೆಲೆಸಿದ್ದಾರೆ. ಅವರು ಅಲ್ಲಿನ ಪೌರತ್ವ ಪಡೆದ ಬಳಿಕ ಭಾರತದ ಪೌರತ್ವ ತ್ಯಜಿಸಿದ್ದಾರೆ. ವಿದೇಶದಲ್ಲಿನ ವಿಪುಲವಾದ ಉದ್ಯೋಗಾವಕಾಶಗಳೇ ಭಾರತದ ಪೌರತ್ವ ತ್ಯಜಿಸಲು ಮುಖ್ಯ ಕಾರಣ ಎಂದು ಅವರು ಹೇಳಿದ್ದಾರೆ.

ಭಾರತದ ಮಂದಿ ಪೌರತ್ವ ತ್ಯಜಿಸಿದ್ದಾರೆ ಎನ್ನುವುದು ಭಾರತಕ್ಕೆ ಸಮಸ್ಯೆಯಲ್ಲ. ಬದಲಾಗಿ ವಿದೇಶಗಳಲ್ಲಿ ಭಾರತೀಯರು ಪೌರತ್ವ ಪಡೆಯುವುದು ಭಾರತದ ಪಾಲಿಗೆ ಹೆಮ್ಮೆಯ ಸಂಗತಿ. ಬೇರೆ ಬೇರೆ ದೇಶಗಳಲ್ಲಿ ಭಾರತೀಯರು ನೆಲೆಸಿರುವುದು ಇತರೆ ದೇಶಗಳೊಂದಿಗೆ ಭಾರತದ ಹೊಂದಿರುವ ನಂಟನ್ನು ವೃದ್ಧಿಸುತ್ತದೆ ಎಂದೂ ಅವರು ತಿಳಿಸಿದ್ದಾರೆ.

2011 ರಲ್ಲಿ 1,22,819, 2012 ರಲ್ಲಿ 1,20,923, 2013 ರಲ್ಲಿ 1,31,405, 2014 ರಲ್ಲಿ 1,29,328, 2015 ರಲ್ಲಿ 1,31,405, 2016 ರಲ್ಲಿ 1,41,603 , 2017 ರಲ್ಲಿ 1,33,049 ,2018 ರಲ್ಲಿ 1,34,561, 2019 ರಲ್ಲಿ 1,44,017 , 2020 ರಲ್ಲಿ 85,256 , 2021 ರಲ್ಲಿ 1,63,370, 2022 ರಲ್ಲಿ 2,25,620 ಮಂದಿ ಭಾರತದ ಪೌರತ್ವ ತ್ಯಜಿಸಿದ್ದಾರೆ.

ಹೆಚ್ಚು ಭಾರತೀಯರು ಎಲ್ಲೆಲ್ಲಿ ನೆಲೆಸಿದ್ದಾರೆ..?

2023 (ಜೂನ್‌ ವರೆಗೆ) ರಲ್ಲಿ ಭಾರತೀಯ ಪೌರತ್ವ ತ್ಯಜಿಸಿದವರಲ್ಲಿ ಹೆಚ್ಚು ಮಂದಿ ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳನ್ನು ಆಯ್ಕೆ ಮಾಡಿಕೊಂಡಿದ್ಧಾರೆ. 87 ಸಾವಿರ ಜನರ ಪೈಕಿ ಸುಮಾರು 23 ಸಾವಿರ ಜನ ಈ ಎರಡು ದೇಶಗಳಲ್ಲಿ ನೆಲೆಸಿದ್ದಾರೆ. ಅದರ ನಂತರದ ಆಯ್ಕೆಗಳಲ್ಲಿ ಕೆನಡಾ, ಬ್ರಿಟನ್‌, ಇಟಲಿ, ನ್ಯೂಜಿಲ್ಯಾಂಡ್‌, ಸಿಂಗಾಪುರ, ಜರ್ಮನಿ, ನೆದರ್‌ಲ್ಯಾಂಡ್ಸ್‌, ಸ್ವೀಡನ್‌, ಸ್ಪೇನ್‌  ದೇಶಗಳಿವೆ ಎಂದು ಜೈಶಂಕರ್‌ ತಿಳಿಸಿದ್ದಾರೆ.

2020 ರ ವರೆಗಿನ ವರದಿಯ ಪ್ರಕಾರ ಅಮೆರಿಕದಲ್ಲಿ 40 ಲಕ್ಷ, ಯುಎಇ ಯಲ್ಲಿ 35 ಲಕ್ಷ, ಸೌದಿ ಅರೇಬಿಯಾದಲ್ಲಿ 25 ಲಕ್ಷ ಭಾರತೀಯರು ನೆಲೆಸಿದ್ದಾರೆ.

ಇದನ್ನೂ ಓದಿ: ಸಂಸದ ರಮೇಶ ಜಿಗಜಿಣಗಿ ಹೆಸರಿನಲ್ಲಿ ಅನಾಮಧೇಯ ಕರೆ

ಟಾಪ್ ನ್ಯೂಸ್

Reel-Cinema

Film: ಚಲನಚಿತ್ರ ಚೆನ್ನಾಗಿದ್ದರೆ ಮಾತ್ರ ಟಿಕೆಟ್‌ ಖರೀದಿಸಿ

ಆಗಸ್ಟ್‌ನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

Augustನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

S. T. Somashekhar ಮುಡಾ ಸದಸ್ಯತ್ವಕ್ಕೆ ಬೇರೆಡೆಯ ಶಾಸಕರ ಲಾಬಿ

S. T. Somashekhar ಮುಡಾ ಸದಸ್ಯತ್ವಕ್ಕೆ ಬೇರೆಡೆಯ ಶಾಸಕರ ಲಾಬಿ

Zeeka-Virus

Zika Virus: ಗರ್ಭಿಣಿಯರೇ ಝೀಕಾ ಬಗ್ಗೆ ಎಚ್ಚರ: ಸರಕಾರ ಸೂಚನೆ

MBPatil

Airport: ರಾಜಧಾನಿ ಸಮೀಪ ವಿಮಾನ ನಿಲ್ದಾಣಕ್ಕೆ ಜಾಗದ ಹುಡುಕಾಟ: ಎಂ.ಬಿ. ಪಾಟೀಲ್‌

Charmadi Ghat: ತಡೆಗೋಡೆ ಅಪಾಯದಲ್ಲಿ: ಕೊಚ್ಚಿ ಹೋಗುತ್ತಿರುವ ಮಣ್ಣು

Charmadi Ghat: ತಡೆಗೋಡೆ ಅಪಾಯದಲ್ಲಿ: ಕೊಚ್ಚಿ ಹೋಗುತ್ತಿರುವ ಮಣ್ಣು

1-a-da

Rain; ಭಾರತ ಮತ್ತು ದಕ್ಷಿಣ ಆಫ್ರಿಕಾ ವನಿತಾ ಟಿ20 ರದ್ದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

Jammu; ದೇಗುಲ ಧ್ವಂಸ: ಗಂಟೆಯಲ್ಲೇ ಆರೋಪಿ ಸೆರೆ

Rahul Gandhi 3

Rahul Gandhi ಅವರಿಗೇಕೆ ಹಿಂದೂಗಳೆಂದರೆ ಇಷ್ಟೊಂದು ದ್ವೇಷ?: ಬಿಜೆಪಿ ಕಿಡಿ

1-ewewqewq

BMW; ಮುಂಬೈನಲ್ಲಿ ಹಿಟ್‌-ರನ್‌:ಶಿವಸೇನೆ ಶಿಂಧೆ ಬಣದ ನಾಯಕನ ಪುತ್ರ ಸೆರೆ

army

Kashmir ಎನ್‌ಕೌಂಟರ್‌: ಹತ ಉಗ್ರರ ಸಂಖ್ಯೆ 8ಕ್ಕೆ ಏರಿಕೆ ; ಇಬ್ಬರು ಯೋಧರು ಹುತಾತ್ಮ

Naxal

Chhattisgarh; 5 ನಕ್ಸಲರ ಬಂಧನ: ಭಾರೀ ಸ್ಫೋಟಕ ವಶ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Reel-Cinema

Film: ಚಲನಚಿತ್ರ ಚೆನ್ನಾಗಿದ್ದರೆ ಮಾತ್ರ ಟಿಕೆಟ್‌ ಖರೀದಿಸಿ

ಆಗಸ್ಟ್‌ನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

Augustನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

1-paris

Paris Olympics; ಅಲ್ಡ್ರಿನ್‌, ಅಂಕಿತಾ ಧ್ಯಾನಿಗೆ ಒಲಿಂಪಿಕ್ಸ್‌ ಟಿಕೆಟ್‌

S. T. Somashekhar ಮುಡಾ ಸದಸ್ಯತ್ವಕ್ಕೆ ಬೇರೆಡೆಯ ಶಾಸಕರ ಲಾಬಿ

S. T. Somashekhar ಮುಡಾ ಸದಸ್ಯತ್ವಕ್ಕೆ ಬೇರೆಡೆಯ ಶಾಸಕರ ಲಾಬಿ

1-eweweqw

Wrestling; ವಿನೇಶ್‌ ಫೋಗಾಟ್‌ ಗೆ ಸ್ವರ್ಣ ಪದಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.