ಗುಡಿಬಂಡೆಯ ತಾಣ ಪ್ರವಾಸಿಗರ ಪಾಲಿಗೆ ಸ್ವರ್ಗ!


Team Udayavani, Jul 23, 2023, 3:55 PM IST

ಗುಡಿಬಂಡೆಯ ತಾಣ ಪ್ರವಾಸಿಗರ ಪಾಲಿಗೆ ಸ್ವರ್ಗ!

ಗುಡಿಬಂಡೆ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡ ದು ಎನ್ನುವಂತೆ ಜಿಲ್ಲೆಯಲ್ಲಿ ಗುಡಿಬಂಡೆ ತಾಲೂಕು ಚಿಕ್ಕದಾದರೂ ಐತಿಹಾಸಿಕ, ಸಾಂಸ್ಕೃತಿಕ, ಪ್ರವಾ ಸೋದ್ಯಮಕ್ಕೆ ಗುಡಿಬಂಡೆ ಪ್ರವಾಸಿಗರ ಪಾಲಿಗೆ ಸ್ವರ್ಗ ವಾಗಿದೆ.

ಈಗಾಗಲೇ ಹಲವು ಸಿನಿಮಾ, ಧಾರವಾಹಿ ಚಿತ್ರೀಕರಣ ಈ ಭಾಗದಲ್ಲಿ ನಡೆದು ಗುಡಿಬಂಡೆ ರಾಜ್ಯ ಮಟ್ಟದಲ್ಲಿ ತಾಣವಾಗಿ ಗಮನ ಸೆಳೆಯುತ್ತಿದೆ. ತಾಲೂಕಿನ ಸುತ್ತಮುತ್ತಲಿನಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಐತಿಹಾಸಿಕ ಹಿನ್ನೆಲೆಯುಳ್ಳ 7 ಸುತ್ತಿನ ಕೋಟೆಯಿಂದ ಆವೃತವಾಗಿರುವ ಸುರಸದ್ಮಗಿರಿ ಬೆಟ್ಟ. ಹಿಂದಿನ ಕಾಲದಲ್ಲಿಯೇ ಭಾರತ ಭೂಪಟ ಹೋಲುವಂತೆ ನಿರ್ಮಿಸಿರುವ ಅಮಾನಿ ಬೈರಸಾಗರ ಕೆರೆ, ಅತ್ಯಂತ ಪುರಾತನ ಜೈನ ಬಸದಿಗಳು, ಪಟ್ಟಣಕ್ಕೆ ಸಮೀಪದಲ್ಲಿಯೇ ನವಿಲು ಜಿಂಕೆಗಳ ವಾಸ, ಜತೆಗೆ ಪಕ್ಕದ ತಾಲೂಕಿನ ವಾಟದಹೊಸಹಳ್ಳಿ ಕೆರೆ, ಗುಡಿಬಂಡೆ ಸನಿಹದಲ್ಲಿರುವ ಆವುಲಬೆಟ್ಟ ಹೀಗೆ ಅನೇಕ ಸ್ಥಳಗಳು ತನ್ನ ಪ್ರಾಕೃತಿಕ ಸೊಬಗಿನೊಂದಿಗೆ ಕಂಗೊಳಿಸುತ್ತಿದೆ.

ವಾರಾಂತ್ಯಕ್ಕೆ ಪ್ರವಾಸಿಗರ ದಂಡು: ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನತೆ ಈ ಪ್ರದೇಶಗಳನ್ನು ವೀಕ್ಷಿಸಲು ಬರುತ್ತಿರುವುದು ಸಾಮಾನ್ಯವಾಗಿದೆ. ಗುಡಿಬಂಡೆ ಸುತ್ತಮುತ್ತಲಿನ ಪರಿಸರದ ಸೌಂದರ್ಯ ಇಡೀ ರಾಜ್ಯದ ಜನರನ್ನು ಸೆಳೆಯುತ್ತಿದೆ ಎನ್ನಲಾಗುತ್ತಿದೆ.

ಭವ್ಯ ಸ್ವಾಗತ ಕೋರುವ ಬೈರಸಾಗರ ಕೆರೆ: ಇನ್ನೂ ಗುಡಿಬಂಡೆಗೆ ಆಗಮಿಸುತ್ತಿದ್ದಂತೆ ಪ್ರಯಾಣಿಕರಿಗೆ ಆಹ್ವಾನ ನೀಡುವಂತೆ ಕಾಣಿಸುವುದು ಅಮಾನಿ ಬೈರಸಾಗರ ಕೆರೆ. ಕೆರೆ ಏರಿ ಮೇಲೆ ಪ್ರಯಾಣಿಸುವುದೇ ಒಂದು ರೀತಿಯ ವಿಭಿನ್ನ ಅನುಭವ. ಕೆರೆ ಬಳಿಯೇ ಸ್ಯಾಂಡಲ್‌ವುಡ್‌ನ‌ಲ್ಲಿ ಹಿಟ್‌ ಹೊಡೆದ ಮೊನಾಲಿಸಾ ಚಿತ್ರದ ಓ ಪ್ರಿಯತಮೆ ಇದು ನ್ಯಾಯಾನಾ ಎಂಬ ಗೀತೆಯ ಚಿತ್ರೀಕರಣವೂ ನಡೆದಿದೆ. ಜತೆಗೆ ದಳಪತಿ ಚಲನಚಿತ್ರ ಹಾಗೂ ರಾಮಾಚಾರಿ ಕನ್ನಡದ ಧಾರವಾಹಿಗಳನ್ನೂ ಚಿತ್ರೀಕರಿಸಲಾಗಿದ್ದು, ಇತ್ತೀಚೆಗೆ ನಟ ಚರಣ್‌ ಅಭಿನಯದ ಗುರುಶಿಷ್ಯರು ಸಿನಿಮಾ ಈ ಭಾಗದಲ್ಲಿ ಭಾಗಶಃ ಚಿತ್ರೀಕರಣಗೊಂಡಿತ್ತು. ರಾಜ್ಯದಲ್ಲಿಯೇ ಅತ್ಯಂತ ಚಿಕ್ಕ ತಾಲೂಕುಗಳಲ್ಲಿ ಒಂದಾದ ಗುಡಿಬಂಡೆಯನ್ನು ರಾಜ ಮಹಾರಾಜರು ಸೇರಿ ಪಾಳೇಗಾರರು ಆಳಿದ್ದ ಐತಿಹಾಸಿಕ ಪ್ರದೇಶ. ಅನೇಕ ಪ್ರೇಕ್ಷಣೀಯ ಸ್ಥಳ ಹೊಂದಿರುವ ಗುಡಿಬಂಡೆಗೆ ಭೇಟಿ ನೀಡುವ ಪ್ರವಾಸಿಗರು ಪುನಃ ಪುನಃ ಭೇಟಿ ನೀಡಬೇಕೆನ್ನುತ್ತಾರೆ. ಅವುಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳ ಇಚ್ಛಾಶಕ್ತಿ, ಕಾಯಕಲ್ಪ ಬೇಕಿದೆ.

ಚಾರಣಿಗರಿಗಾಗಿ ಸುರಸದ್ಮಗಿರಿ ಕೋಟೆ: ಪಟ್ಟಣ ವ್ಯಾಪ್ತಿಯಲ್ಲಿಯೇ ಕಾಣಸಿಗುವುದು ಸುರಸದ್ಮಗಿರಿ ಬೆಟ್ಟ. ಈ ಬೆಟ್ಟಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ರಾಜ್ಯದ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟಗಳಲ್ಲಿ ಪೈಕಿ ಇದೂ ಒಂದಾಗಿದೆ. ಈ ಭಾಗದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬೈರಗೌಡ ಬೆಟ್ಟದ ಸುತ್ತಲೂ ರಕ್ಷಣೆಗಾಗಿ 7 ಸುತ್ತಿನ ಕೋಟೆ ನಿರ್ಮಿಸಿದ್ದಾನೆ. ಜತೆಗೆ ಬೆಟ್ಟದ ಮೇಲ್ಭಾಗದಿಂದ ಸುಂದರವಾದ ಪರಿಸರದ ಸೊಬಗನ್ನು ಕಾಣಬಹುದಾಗಿದೆ. ರಾಮಾಯಣದ ಪ್ರಕಾರ ರಾಮ ಲಕ್ಷ್ಮಣರು ವನವಾಸದ ಸಮಯದಲ್ಲಿ 108 ಜೋರ್ತಿಲಿಂಗಗಳ ಪೈಕಿ ಇಲ್ಲಿಯೂ ರಾಮೇಶ್ವರ ಲಿಂಗ ಪ್ರತಿಷ್ಠಾ ಪಿಸಿದ್ದಾರೆ ಎಂಬ ಪ್ರತೀತಿ ಇದೆ. ಆದರೆ ಸ್ಥಳೀಯ ಆಡಳಿತ ಈ ಬೆಟ್ಟದಲ್ಲಿ ವಾಹನ ನಿಲುಗಡೆ ಸೇರಿ ಮೂಲಭೂತ ಸೌಕರ್ಯ ಒದಗಿಸಿದರೇ ಪ್ರಯಾಣಿಕರಿಗೆ ಅನುಕೂಲವಾಗು ವುದರ ಜತೆಗೆ ನಿಗಧಿತ ಶುಲ್ಕದಿಂದ ಸರ್ಕಾರಕ್ಕೂ ಆದಾಯ ಬರಲಿದೆ.

ಬೇಕಿದೆ ಕಾಯಕಲ್ಪ : ಈಗಾಗಲೇ ಸ್ಥಳೀಯ ಶಾಸಕರು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸುಮಾರು 1 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ಅಮಾನಿ ಬೈರಸಾಗರ ಕೆರೆ ಬಳಿ ಬೋಟಿಂಗ್‌, ಪಾರ್ಕ್‌ ನಿರ್ಮಾಣ ಜತೆಗೆ ಸುರಸದ್ಮಗಿರಿ ಬೆಟ್ಟವನ್ನೂ ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದಾರೆ. ಈ ಕಾರ್ಯ ವಿಳಂಬ ವಾಗುತ್ತಿದ್ದು, ಶೀಘ್ರ ಕೈಗೊಳ್ಳಬೇಕೆಂಬುದು ಪ್ರವಾಸಿಗರ ಆಶಯವಾಗಿದೆ.

ಗುಡಿಬಂಡೆಯನ್ನು ಶಾಸಕರು ಪ್ರವಾಸೋ ದ್ಯಮ ತಾಣ ಮಾಡುವು ದಾಗಿ ಕೇವಲ ಭರವಸೆಗೆ ಸೀಮಿತರಾಗಿದ್ದಾರೆ.ಅಧಿಕಾ ರಿಗಳಾದರೂ ಕ್ರಮ ಕೈಗೊಳ್ಳಬೇಕು. ● ಮಧು ವೈ.ಯರ್ರಹಳ್ಳಿ, ಪಿಎಸ್‌ಎಸ್‌ ಮುಖಂಡರು

ಟಾಪ್ ನ್ಯೂಸ್

Building Collapses: ಕುಸಿದ 6 ಅಂತಸ್ಥಿನ ಕಟ್ಟಡ… 10ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

Surath: ಕುಸಿದ 6 ಅಂತಸ್ತಿನ ಕಟ್ಟಡ… ಓರ್ವ ಮಹಿಳೆ ರಕ್ಷಣೆ, ಹಲವರು ಸಿಲುಕಿರುವ ಶಂಕೆ

Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ

Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ

1-rewewewe

Monsoon season: ದಕ್ಷಿಣ ಕನ್ನಡದಲ್ಲಿ ಜಲ ಚಟುವಟಿಕೆಗಳು, ಚಾರಣಕ್ಕೆ ನಿಷೇಧ

ಅಂತಿಂಥ ಕಳ್ಳ ಇವನಲ್ಲ, ಇವನಂಥ ಕಳ್ಳ.. ಐಷಾರಾಮಿ ಫ್ಲ್ಯಾಟ್‌,ದುಬಾರಿ ಕಾರು; ಈತ ಶ್ರೀಮಂತ ಕಳ್ಳ

ಅಂತಿಂಥ ಕಳ್ಳ ಇವನಲ್ಲ, ಇವನಂಥ ಕಳ್ಳ.. ಐಷಾರಾಮಿ ಫ್ಲ್ಯಾಟ್‌,ದುಬಾರಿ ಕಾರು; ಈತ ಶ್ರೀಮಂತ ಕಳ್ಳ

Nirmala-Budget

Union Budget: ಜು.22ರಿಂದ ಕೇಂದ್ರ ಬಜೆಟ್‌ ಅಧಿವೇಶನ ಆರಂಭ

SS Rajamouli: ಡಾಕ್ಯುಮೆಂಟರಿಯಾಗಿ ಓಟಿಟಿಗೆ ಬರಲಿದೆ ರಾಜಮೌಳಿ ಸಿನಿಮಾ ಸಾಹಸಗಾಥೆ

SS Rajamouli: ಡಾಕ್ಯುಮೆಂಟರಿಯಾಗಿ ಓಟಿಟಿಗೆ ಬರಲಿದೆ ರಾಜಮೌಳಿ ಸಿನಿಮಾ ಸಾಹಸಗಾಥೆ

ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ತಜ್ಞರ ಹುದ್ದೆ ಭರ್ತಿಗೆ ಶೀಘ್ರ ಕ್ರಮ: ದಿನೇಶ್ ಗುಂಡೂರಾವ್

ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ತಜ್ಞರ ಹುದ್ದೆ ಭರ್ತಿಗೆ ಶೀಘ್ರ ಕ್ರಮ: ದಿನೇಶ್ ಗುಂಡೂರಾವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chintamani: ಒಂದು ವರ್ಷದ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ… ದೃಶ್ಯ ಸೆರೆ

Chintamani: ಒಂದು ವರ್ಷದ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ… ದೃಶ್ಯ ಸೆರೆ

Dr.Sudhakar

Lokasabha: ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಪುಷ್ಪ ಮಂಡಳಿ; ಡಾ.ಕೆ.ಸುಧಾಕರ್‌ ಪ್ರಸ್ತಾಪ

Basavaraj Bommai ಸಂವಿಧಾನಕ್ಕೆ ಹೆಚ್ಚು ದ್ರೋಹ ಬಗೆದಿದ್ದು ಕಾಂಗ್ರೆಸ್‌

Basavaraj Bommai ಸಂವಿಧಾನಕ್ಕೆ ಹೆಚ್ಚು ದ್ರೋಹ ಬಗೆದಿದ್ದು ಕಾಂಗ್ರೆಸ್‌

Congress ರಾಜ್ಯ ಸರಕಾರಕ್ಕೆ ಧಮ್‌ ಇದ್ದರೆ ಜಿ.ಪಂ., ತಾ.ಪಂ. ಚುನಾವಣೆ ನಡೆಸಲಿ: ಅಶೋಕ್‌

Congress ರಾಜ್ಯ ಸರಕಾರಕ್ಕೆ ಧಮ್‌ ಇದ್ದರೆ ಜಿ.ಪಂ., ತಾ.ಪಂ. ಚುನಾವಣೆ ನಡೆಸಲಿ: ಅಶೋಕ್‌

1-weewwe

Gudibande: ಸ್ಪೋಟಕಗಳ ಸಾಗಾಣಿಕೆ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವು

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Building Collapses: ಕುಸಿದ 6 ಅಂತಸ್ಥಿನ ಕಟ್ಟಡ… 10ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

Surath: ಕುಸಿದ 6 ಅಂತಸ್ತಿನ ಕಟ್ಟಡ… ಓರ್ವ ಮಹಿಳೆ ರಕ್ಷಣೆ, ಹಲವರು ಸಿಲುಕಿರುವ ಶಂಕೆ

Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ

Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ

1-qewqewq

Dandeli: ತಂಡದಿಂದ ಮನೆಗೆ ನುಗ್ಗಿ ಮೂವರ ಮೇಲೆ ಮರಣಾಂತಿಕ ಹಲ್ಲೆ

Bhibhav Kumar

Swati Maliwal ಹಲ್ಲೆ ಪ್ರಕರಣ: ಬಿಭವ್ ಕುಮಾರ್ ಗೆ ಜುಲೈ 16 ರವರೆಗೆ ನ್ಯಾಯಾಂಗ ಬಂಧನ

Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ

Video: ಕರ್ತವ್ಯದಲ್ಲಿದ್ದ ಪ್ರಾಂಶುಪಾಲೆಯನ್ನು ಹೊರದಬ್ಬಿ ಹೊಸಬರನ್ನು ನೇಮಿಸಿದ ಆಡಳಿತ ಮಂಡಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.