![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jul 25, 2023, 12:29 PM IST
ಹೈದರಾಬಾದ್: ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ದೊಡ್ಡ ಅಭಿಮಾನಿಗಳ ವರ್ಗವೇ ಇದೆ. ಅವರ ಸಿನಿಮಾಗಳನ್ನು ಕಾದು ಕೂತು ನೋಡುವವರಿದ್ದಾರೆ. ʼಪುಷ್ಪ-2ʼ ಸಿನಿಮಾಕ್ಕಾಗಿ ಪ್ರೇಕ್ಷಕಕರು ಕಾಯುತ್ತಿದ್ದಾರೆ.
ಅಲ್ಲು ಅರ್ಜುನ್ ಅವರಿಗೆ ಹೈದರಾಬಾದ್ ಮಾತ್ರವಲ್ಲದೆ, ಕೇರಳ ಮತ್ತು ಉತ್ತರ ಭಾರತದಲ್ಲಿಯೂ ಅನೇಕ ಅಭಿಮಾನಿಗಳಿದ್ದಾರೆ. ʼಪುಷ್ಪʼ ಸಿನಿಮಾದ ಬಳಿಕ ಅವರ ಅಭಿಮಾನಿ ವಲಯ ದೊಡ್ಡದಾಗಿದೆ. ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಪತ್ನಿ ಸಾಕ್ಷಿ ಧೋನಿ ಅವರು ಅಲ್ಲು ಅರ್ಜುನ್ ಅವರ ಬಗೆಗಿರುವ ಅಭಿಮಾನದ ಬಗ್ಗೆ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಕಾಲಿವುಡ್ ಸಿನಿಮಾರಂಗಕ್ಕೆ ನಿರ್ಮಾಪಕರಾಗಿ ಎಂಟ್ರಿ ಆಗಿರುವುದು ಗೊತ್ತೇ ಇದೆ. ಅವರ ಮೊದಲ ಸಿನಿಮಾಕ್ಕೆ ʼಲೆಟ್ಸ್ ಗೆಟ್ ಮ್ಯಾರೀಡ್( ಎಲ್ ಜಿಎಂ) ಎಂದು ಟೈಟಲ್ ಇಡಲಾಗಿದೆ. ಈಗಾಗಲೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಇದೀಗ ಸಿನಿಮಾ ತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ.
ಇತ್ತೀಚೆಗೆ ಹೈದರಾಬಾದ್ನಲ್ಲಿ “ಎಲ್ ಜಿಎಂ” ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಸಾಕ್ಷಿ ಧೋನಿ ಅವರು ಅಲ್ಲು ಅರ್ಜುನ್ ಅವರ ಅಭಿಮಾನಿಯಾಗಿ ಮಾತನಾಡಿದ್ದಾರೆ.
“ನಾನು ಅಲ್ಲು ಅರ್ಜುನ್ ಅವರ ಅಭಿಮಾನಿ. ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. ನೆಟ್ಫ್ಲಿಕ್ಸ್ ಅಥವಾ ಹಾಟ್ಸ್ಟಾರ್ ನಿಂದ ಅವರ ಸಿನಿಮಾಗಳನ್ನು ನೋಡಿಲ್ಲ. ಎಲ್ಲಾ ಸಿನಿಮಾವನ್ನು ಯೂಟ್ಯೂಬ್ ನಲ್ಲಿ ನೋಡಿದ್ದೇನೆ. ಗೋಲ್ಡ್ಮೈನ್ ಯೂಟ್ಯೂಬ್ ನಲ್ಲಿ ಅವರ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್ ಮಾಡಿ ಹಾಕುತ್ತಿದ್ದರು. ಅಲ್ಲು ಅರ್ಜುನ್ ಅವರ ಸಿನಿಮಾಗಳನ್ನು ನೋಡುತ್ತಲೇ ಬೆಳೆದಿದ್ದೇನೆ. ನಾನು ಅವರ ದೊಡ್ಡ ಅಭಿಮಾನಿ” ಎಂದು ತನ್ನ ಅಭಿಮಾನದ ಬಗ್ಗೆ ಸಾಕ್ಷಿ ಹೇಳಿಕೊಂಡರು.
“ಧೋನಿ ಎಂಟರ್ಟೈನ್ಮೆಂಟ್” ಬ್ಯಾನರ್ ಅಡಿಯಲ್ಲಿ ಬಂದಿರುವ “ಎಲ್ ಜಿಎಂ” ಸಿನಿಮಾದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ,ಯೋಗಿ ಬಾಬು ಮಿರ್ಚಿ ವಿಜಯ್ ಮುಂತಾದ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾವನ್ನು ರಮೇಶ್ ತಮಿಳ್ಮನಿ ನಿರ್ದೇಶನ ಮಾಡಿದ್ದಾರೆ.
he don’t need any pan india movies Like Bahubali KGF to become a pan india star
He is already the
FIRST PAN INDIA STAR @alluarjun 👑 pic.twitter.com/n1hHG9jCoc— Allu Arjun FC (@AlluArjunHCF) July 24, 2023
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.