ಬಾಗಲಕೋಟೆ:ಬಾಕಿ ಕೊಡದ ಕಾರ್ಖಾನೆ ಆರಂಭಿಸಬೇಡಿ

ಅರೆ ಸೇನಾ ಪಡೆಗಳ ಬಂದುಕಿನಿಂದ ಶಾಂತಿ ನೆಲೆಸಲು ಸಾಧ್ಯವಿಲ್ಲ

Team Udayavani, Jul 25, 2023, 2:43 PM IST

ಬಾಗಲಕೋಟೆ:ಬಾಕಿ ಕೊಡದ ಕಾರ್ಖಾನೆ ಆರಂಭಿಸಬೇಡಿ

ಬಾಗಲಕೋಟೆ: ಕಳೆದ ವರ್ಷ ರಾಜ್ಯ ಸರ್ಕಾರ ನಿಗದಿ ಮಾಡಿದ ಟನ್‌ಗೆ 150 ರೂ. ಹೆಚ್ಚುವರಿ ಹಣವನ್ನು ಕೂಡಲೇ ನೀಡಬೇಕು. ಕಬ್ಬಿನ ಬಾಕಿ ಕೂಡದ ಕಾರ್ಖಾನೆಗಳು, ಮುಂದಿನ ವರ್ಷದಿಂದ ಕಬ್ಬು ನುರಿಸುವುದನ್ನು ಆರಂಭಿಸಲು ಅವಕಾಶ ನೀಡಬಾರದು. ಇದಕ್ಕಾಗಿ ಪ್ರತ್ಯೇಕ ಕಾನೂನು ರೂಪಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ನಿಗದಿಪಡಿಸಿದ ಕಬ್ಬು ದರವನ್ನು ಆಯಾ ವರ್ಷವೇ ಪಾವತಿಸಬೇಕು. ಬಾಕಿ ಉಳಿಸಿಕೊಳ್ಳುವ ಕಾರ್ಖಾನೆಗಳನ್ನು ಮುಂದಿನ ವರ್ಷದಿಂದ ಕಬ್ಬು ನುರಿಸಲು ಅನುಮತಿ ನೀಡಬಾರದು. ಆಗ ಮಾತ್ರ ರೈತರ ಬಾಕಿ ಹಣ ವಸೂಲಿಯಾಗಲು ಸಾಧ್ಯವಿದೆ ಎಂದರು. ಕಬ್ಬು ಬೆಳೆಗಾರ ರೈತರಿಗೆ ಸಕ್ಕರೆ ಕಾರ್ಖಾನೆಗಳು, ತೂಕದಲ್ಲಿ ಮೋಸ ಮಾಡುತ್ತಿವೆ ಎಂದು ಮೊದಲು ನಾವೇ ರಾಜ್ಯಾದ್ಯಂತ ಹೋರಾಟ ಆರಂಭಿಸಿದ್ದೇವು. ಆಗ ಸುಮಾರು 15 ಕಾರ್ಖಾನೆಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ವರದಿ ಕೂಡ ಸಲ್ಲಿಕೆಯಾಗಿತ್ತು.

ಈಗ ಮತ್ತೆ ಆ ಧ್ವನಿ ಕೇಳಿ ಬರುತ್ತಿದೆ. ಅಲ್ಲದೇ ಸಕ್ಕರೆ ಸಚಿವರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಖಾತೆ ಸಚಿವರು ಒಬ್ಬರೇ ಇದ್ದಾರೆ. ಹೀಗಾಗಿ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಎದುರು, ಸರ್ಕಾರದಿಂದಲೇ ತೂಕದ ಯಂತ್ರ ಅಳವಡಿಸಬೇಕು. ಅಲ್ಲಿಂದಲೇ ತೂಕ ಮಾಡಿ, ಕಾರ್ಖಾನೆಗೆ ಕಬ್ಬು ಪೂರೈಸುವಂತಾಗಬೇಕು ಎಂದು ಆಗ್ರಹಿಸಿದರು.

ರೈತರಿಗೆ ಸಂಕಷ್ಟ ಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರಕ್ಕೆ ಅನುಕೂಲ ಆಗುತ್ತಿದ್ದ ಕೃಷಿ ಸಮ್ಮಾನ್‌ ಯೋಜನೆಯ 4 ಸಾವಿರ ರೂ. ನೆರವು ನಿಲ್ಲಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ 11 ಸಾವಿರ ಕೋಟಿ ಕಡಿತ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಅನ್ನ ಭಾಗ್ಯ ಯೋಜನೆಗೆ ರಾಜ್ಯದ ರೈತರಿಂದ ಭತ್ತ, ರಾಗಿ, ಜೋಳ, ಸಿರಿಧಾನ್ಯ ಖರೀದಿಸಿ ಪಡಿತರ ವ್ಯವಸ್ಥೆಯಡಿ ವಿತರಿಸಬೇಕು ಎಂದು ಒತ್ತಾಯಿಸಿದರು.

ಸಂಗಮದಲ್ಲಿ ಕಾರ್ಯಾಗಾರ: ಕೂಡಲಸಂಗ ಮದಲ್ಲಿ ರಾಜ್ಯಮಟ್ಟದ ರೈತ ಮುಖಂಡರ ಎರಡು ದಿನಗಳ ಕಾರ್ಯಗಾರವನ್ನು ಜು.25 ಮತ್ತು 26ರಂದು ಹಮ್ಮಿಕೊಳ್ಳಲಾಗಿದೆ. ರೈತರ ಸಮಸ್ಯೆಗಳ ಬಗ್ಗೆ ಚರ್ಚಿ ರೈತ ಸಂಘಟನೆ ಪ್ರಬಲವಾಗಿ ಬೆಳೆಸುವ ಬಗ್ಗೆ ಹಾಗೂ ಮುಂದಿನ ಹೋರಾಟ ರೂಪರೇಷೆಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾ ಕೃತ್ಯಗಳು ಪ್ರಜಾಪ್ರಭುತ್ವದ ಬುನಾದಿಯನ್ನೇ ಸರ್ವನಾಶ ಮಾಡಬಹುದಾದ ಕೃತ್ಯಗಳಾಗಿವೆ. ಕೇಂದ್ರ ಹಾಗೂ ಅಲ್ಲಿನ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಲ್ಲಿ ಮಣಿಪುರದಲ್ಲಿ ಹಲವಾರು ಸಾವು ನೋವು ಆಗುತ್ತಿವೆ. ವಿಫಲವಾಗಿವೆ. ಪೊಲೀಸರ ಲಾಟಿ ಏಟು ಹಾಗೂ ಅರೆ ಸೇನಾ ಪಡೆಗಳ ಬಂದುಕಿನಿಂದ ಶಾಂತಿ ನೆಲೆಸಲು ಸಾಧ್ಯವಿಲ್ಲ.

ಜಾತಿ- ಧರ್ಮ ಮೆಟ್ಟಿನಿಂತು. ಶಾಂತಿ-ಸಹನೆ ಹಾಗೂ ಪ್ರೀತಿಯಿಂದ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯ . ಪ್ರಸ್ತುತ ಮಣಿಪುರದ ಗಲಭೆ ನಿಲ್ಲಿಸಲು ಸಾಧ್ಯ. ಜಾಗತಿಕ ಮಟ್ಟದಲ್ಲಿ ಈ ಘಟನೆಯಿಂದ ಭಾರತಕೆ ಅವಮಾನವಾಗುತ್ತಿದೆ ಎಂದು ವಿಷಾದಿಸಿದರು.

ಸೇನೆಯಲ್ಲಿ ಕಾರ್ಯನಿರ್ವಹಿಸಿರುವ ಸೈನಿಕನ ಪತ್ನಿಗೆ ಈ ರೀತಿ ಆದರೆ ಸೇನೆಯಲ್ಲಿ ಕೆಲಸ ಮಾಡುವ ಸೈನಿಕರ ಆತ್ಮಸ್ಥೈರ್ಯ ಕುಗ್ಗಲಿದೆ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪ್ರತಿಷ್ಠೆ ಬದಿಗೊತ್ತಿ, ಅಲ್ಲಿ ಶಾಂತಿ- ಸಹಬಾಳ್ವೆ ನೆಲೆಸಲು ಮುಂದಾಗಬೇಕು. ಘಟನೆಗೆ ಕಾರಣಿಭೂತರಾದ ಪಾತಕಿಗಳಿಗೆ ಕಾನೂನು ಅಡಿಯಲ್ಲಿ ಶಿಕ್ಷೆ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ರಾಜ್ಯ ಉಪಾಧ್ಯಕ್ಷ ಸುರೇಶ ಪಾಟೀಲ, ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್‌, ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ್‌ ಎತ್ತಿನಗುಡ್ಡ, ಬಾಗಲಕೋಟೆ ಜಿಲ್ಲಾ ಉಪಾಧ್ಯಕ್ಷ ಕಲ್ಲಪ್ಪ ಬಿರಾದಾರ, ರೇವಣ್ಣಯ್ಯ ಹಿರೇಮಠ, ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಬಾಪುಗೌಡ ಪಾಟೀಲ್‌ ಮುಂತಾದವರು ಉಪಸ್ಥಿತರಿದ್ದರು.

ಮಣಿಪುರ ಘಟನೆಯಿಂದ ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಹರಾಜು ಆಗುತ್ತಿದೆ. ಈ ವಿಷದಯಲ್ಲಿ ರಾಜಕೀಯ ಪಕ್ಷಗಳು, ತಮ್ಮ ಪ್ರತಿಷ್ಠೆ ಬಿಟ್ಟು, ಮಣಿಪುರದಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಳ್ಳಬೇಕು. ಕಾರ್ಗಿಲ್‌ ಯುದ್ಧದಲ್ಲಿ ಭಾಗಿಯಾದ ಸೈನಿಕ ಪತ್ನಿಗೇ ಇಂತಹ ಪರಿಸ್ಥಿತಿ ಬಂದರೆ, ಸೈನಿಕರ ಆತ್ಮಸ್ಥೈರ್ಯ ಏನಾಗಬೇಕು ಎಂಬುದು ಚಿಂತಿಸಬೇಕು. ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು.
ಕುರುಬೂರು ಶಾಂತಕುಮಾರ,
ರಾಜ್ಯಾಧ್ಯಕ್ಷ, ಕಬ್ಬು ಬೆಳೆಗಾರರ ಸಂಘ

ಟಾಪ್ ನ್ಯೂಸ್

Women’s T20 World Cup: ಸ್ಮತಿ, ಹರ್ಮನ್‌ ಭರ್ಜರಿ ಆಟ, ಲಂಕಾ ವಿರುದ್ಧ ಭಾರತಕ್ಕೆ ಗೆಲುವು

Women’s T20 World Cup: ಸ್ಮತಿ, ಹರ್ಮನ್‌ ಭರ್ಜರಿ ಆಟ, ಲಂಕಾ ವಿರುದ್ಧ ಭಾರತಕ್ಕೆ ಗೆಲುವು

T20 Cricket: ಬಾಂಗ್ಲಾದೇಶಕ್ಕೆ 86 ರನ್‌ ಸೋಲು… 2-0 ಮುನ್ನಡೆ; ಭಾರತಕ್ಕೆ ಟಿ20 ಸರಣಿ

T20 Cricket: ಬಾಂಗ್ಲಾದೇಶಕ್ಕೆ 86 ರನ್‌ ಸೋಲು… 2-0 ಮುನ್ನಡೆ; ಭಾರತಕ್ಕೆ ಟಿ20 ಸರಣಿ

Multan Test : ಪಾಕಿಸ್ಥಾನಕ್ಕೆ ಇಂಗ್ಲೆಂಡ್‌ ತಿರುಗೇಟು… ರೂಟ್‌, ಬ್ರೂಕ್‌ ಅಜೇಯ

Multan Test : ಪಾಕಿಸ್ಥಾನಕ್ಕೆ ಇಂಗ್ಲೆಂಡ್‌ ತಿರುಗೇಟು… ರೂಟ್‌, ಬ್ರೂಕ್‌ ಅಜೇಯ

Munirathna-case

Munirathna Case: ಭದ್ರತೆ ಕೊಟ್ಟರೆ ಮಾಜಿ ಸಿಎಂಗಳ ಹನಿಟ್ರ್ಯಾಪ್‌ ಬಹಿರಂಗ: ಸಂತ್ರಸ್ತೆ

Tata-Era

Rathan Tata Era End: ಅಜ್ಜಿಯ ಆರೈಕೆಯಲ್ಲಿ ಬೆಳೆದ ರತನ್‌ ಟಾಟಾ

Madhu-Bangarappa

Exam: ಈ ವರ್ಷ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕೃಪಾಂಕ ಇಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ

Nagendra-ED

Find On Investigation: ವಾಲ್ಮೀಕಿ ಹಗರಣ ಸೂತ್ರಧಾರ ಮಾಜಿ ಸಚಿವ ಬಿ.ನಾಗೇಂದ್ರ: ಇ.ಡಿ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Kaladgi:ಜೆಸಿಬಿಚಾಲಕನ ನಿರ್ಲಕ್ಷ್ಯ ಕಾಮಗಾರಿ;ಪೈಪ್ ಲೈನ್ ಒಡೆದು ಸಾಕಷ್ಟು ಪ್ರಮಾಣದ ನೀರುಪೋಲು

Mudhol: ಕಾರು ಅಪಘಾತ… ಜಾನಪದ‌ ಕಲಾವಿದ ಗುರುರಾಜ ಹೊಸಕೋಟಿ ಅವರಿಗೆ ಗಾಯ

Mudhol: ಕಾರು ಅಪಘಾತ… ಜಾನಪದ‌ ಕಲಾವಿದ ಗುರುರಾಜ ಹೊಸಕೋಟಿ ಅವರಿಗೆ ಗಾಯ

Gram panchayat: ಸ್ಥಾನ ಬಿಟ್ಟುಕೊಡದ ಉಪಾಧ್ಯಕ್ಷೆ ವಿರುದ್ದ ಕೆಂಡಾಮಂಡಲಳಾದ ಸದಸ್ಯೆ

Gram panchayat: ಸ್ಥಾನ ಬಿಟ್ಟುಕೊಡದ ಉಪಾಧ್ಯಕ್ಷೆ ವಿರುದ್ದ ಕೆಂಡಾಮಂಡಲಳಾದ ಸದಸ್ಯೆ

MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರೀಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ

MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರಿಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ

12-mudhol

Muda ಸೈಟ್ ಹಿಂತಿರುಗಿಸಿರುವ ಸಿದ್ದರಾಮಯ್ಯ ಪತ್ನಿಯ ಕ್ರಮಕ್ಕೆ ತಿಮ್ಮಾಪುರ ಪ್ರತಿಕ್ರಿಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Women’s T20 World Cup: ಸ್ಮತಿ, ಹರ್ಮನ್‌ ಭರ್ಜರಿ ಆಟ, ಲಂಕಾ ವಿರುದ್ಧ ಭಾರತಕ್ಕೆ ಗೆಲುವು

Women’s T20 World Cup: ಸ್ಮತಿ, ಹರ್ಮನ್‌ ಭರ್ಜರಿ ಆಟ, ಲಂಕಾ ವಿರುದ್ಧ ಭಾರತಕ್ಕೆ ಗೆಲುವು

T20 Cricket: ಬಾಂಗ್ಲಾದೇಶಕ್ಕೆ 86 ರನ್‌ ಸೋಲು… 2-0 ಮುನ್ನಡೆ; ಭಾರತಕ್ಕೆ ಟಿ20 ಸರಣಿ

T20 Cricket: ಬಾಂಗ್ಲಾದೇಶಕ್ಕೆ 86 ರನ್‌ ಸೋಲು… 2-0 ಮುನ್ನಡೆ; ಭಾರತಕ್ಕೆ ಟಿ20 ಸರಣಿ

Multan Test : ಪಾಕಿಸ್ಥಾನಕ್ಕೆ ಇಂಗ್ಲೆಂಡ್‌ ತಿರುಗೇಟು… ರೂಟ್‌, ಬ್ರೂಕ್‌ ಅಜೇಯ

Multan Test : ಪಾಕಿಸ್ಥಾನಕ್ಕೆ ಇಂಗ್ಲೆಂಡ್‌ ತಿರುಗೇಟು… ರೂಟ್‌, ಬ್ರೂಕ್‌ ಅಜೇಯ

Munirathna-case

Munirathna Case: ಭದ್ರತೆ ಕೊಟ್ಟರೆ ಮಾಜಿ ಸಿಎಂಗಳ ಹನಿಟ್ರ್ಯಾಪ್‌ ಬಹಿರಂಗ: ಸಂತ್ರಸ್ತೆ

Tata-Era

Rathan Tata Era End: ಅಜ್ಜಿಯ ಆರೈಕೆಯಲ್ಲಿ ಬೆಳೆದ ರತನ್‌ ಟಾಟಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.