ಶಾಸಕಾಂಗ ಸಭೆ ಕರೆದು ಚರ್ಚಿಸಿ ಎಂದಿದ್ದರಲ್ಲಿ ತಪ್ಪೇನಿಲ್ಲ : ರಾಯರಡ್ಡಿ
ನನ್ನ ಪ್ರಕಾರ ಸಿದ್ದು ಐದು ವರ್ಷ ಸಿಎಂ; ಗ್ಯಾರಂಟಿ ಯೋಜನೆಗೆ ನನ್ನ ವೇತನ ಕೊಡುವೆ
Team Udayavani, Jul 25, 2023, 9:24 PM IST
ಕೊಪ್ಪಳ: ಸಿಎಂಗೆ ಶಾಸಕರು ಪತ್ರ ಬರೆದು ಶಾಸಕಾಂಗ ಪಕ್ಷದ ಸಭೆ ಕರೆದು ಚರ್ಚಿಸಿ ಎಂದಿರುವ ವಿಚಾರ ತಪ್ಪೇನಲ್ಲ. ಇದೇನು ಸರ್ಕಾರದ ವಿರುದ್ದವೂ ಅಲ್ಲ, ಅಭಿವೃದ್ಧಿ ವಿಚಾರಕ್ಕೆ ಪತ್ರ ಬರೆದಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಅವರು ಹೇಳಿದ್ದಾರೆ.
ಜಿಲ್ಲೆಯ ಭಾನಾಪೂರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಿಎಂಗೆ ನಾನು ಪತ್ರ ಬರೆದಿಲ್ಲ. ಕಲಬುರಗಿ ಶಾಸಕರು ಪತ್ರ ಬರೆದಿದ್ದು ನಾನು ಸಹಿ ಮಾಡಿದ್ದೇನೆ. ಪತ್ರ ಬರೆದು ಚರ್ಚೆ ಮಾಡಿ ಎಂದಿದ್ದರಲ್ಲಿ ತಪ್ಪಿಲ್ಲ ಎನಿಸುತ್ತದೆ. ಸಿದ್ದರಾಮಯ್ಯ ಅವರು ಸಿಎಂ ಇದ್ದಾರೆ. ಅವರೊಂದಿಗೆ ಚರ್ಚೆ ಮಾಡಿದರೆ ತಪ್ಪೇನಿಲ್ಲ. ಇದೆಲ್ಲವು ಪಕ್ಷದಲ್ಲಿ ಚರ್ಚೆಯಾಗುತ್ತದೆ. ಯಾರೂ ಸಚಿವರ ಬಗ್ಗೆ, ಶಾಸಕರ ಬಗ್ಗೆ ಬರೆದಿಲ್ಲ. ನಮ್ಮ ವಿಚಾರಗಳ ಕುರಿತು ಚರ್ಚೆ ಮಾಡಬೇಕು ಎಂದಿದ್ದಾರೆ. ನನಗೆ ಯಾರೊಂದಿಗೂ ಯಾವುದೇ ಸಮಸ್ಯೆಯಿಲ್ಲ ಎಂದರು.
ಕುಮಾರಸ್ವಾಮಿ ಅವರು ಸಿಂಗಾಪುರದಲ್ಲಿ ಕಾರ್ಯಾಚರಣೆ ಮಾಡುತ್ತಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ. ನಾನು ಆ ಕಾರ್ಯಾಚರಣೆಯಲ್ಲಿ ಭಾಗಿಯಾಗಿಲ್ಲ. ಆಗುವುದೂ ಇಲ್ಲ. ಅಂತ ಆಲೋಚನೆಯು ನನಗಿಲ್ಲ. ಡಿಕೆಶಿ ಅವರು ಡಿಸಿಎಂ ಆಗಿದ್ದಾರೆ. ಅವರಿಗೆ ಇಂಟಲಿಜೆನ್ಸಿ ಮಾಹಿತಿ ಇರಬಹುದು. ಆ ವಿಷಯದ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು ಅಂತಹ ಕೆಳಮಟ್ಟಕ್ಕೆ ಇಳಿಯಲ್ಲ ಎಂದರು.
ಸಿಎಂ ಬದಲಾವಣೆಯ ವಿಚಾರ, ಅಂತಹ ಒಪ್ಪಂದಕ್ಕೆ ನಾನೇನು ಸಾಕ್ಷಿ ಹಾಕಿಲ್ಲ. ಸಿಎಂ ಅವರು ಒಪ್ಪಂದದಲ್ಲಿದ್ದಾರೋ ? ಇಲ್ಲವೋ ? ನನಗೇನು ಗೊತ್ತು ? ಒಂದು ಬಾರಿ ಓಟ್ ತೆಗೆದುಕೊಂಡಿದ್ದು ಐದು ವರ್ಷ ಇರುತ್ತಾರೆ. ಒಂದು ವೇಳೆ ಅವರು ರಾಜಿನಾಮೆ ಕೊಟ್ಟರೆ, ಪಕ್ಷ ತೀರ್ಮಾನ ಕೈಗೊಂಡರೆ ನಾನೇನು ಮಾಡಲಿ. ನನಗಿರುವ ಮಾಹಿತಿ ಪ್ರಕಾರ, ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷವೂ ಮುಖ್ಯಮಂತ್ರಿಯಾಗಿರಲಿದ್ದಾರೆ. ನಮ್ಮಲ್ಲಿ ಯಾರೂ ಬೇರೇ ಪಕ್ಷಕ್ಕೆ ಹೋಗುತ್ತಿಲ್ಲ. ನಾನಂತೂ ಹೋಗಲ್ಲ ಎಂದರಲ್ಲದೇ ಗ್ಯಾರಂಟಿ ಯೋಜನೆಗಳಿಗೆ ನಾನು ನನ್ನ ಶಾಸಕರ ವೇತನವನ್ನು ನೀಡುತ್ತೇನೆ. ಈಗಾಗಲೇ ಸ್ಪೀಕರ್, ಸಿಎಂ ಹಾಗೂ ಡಿಕೆಶಿಗೂ ಹೇಳಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಅದಾಲತ್ನಲ್ಲಿ ಒಂದಾದ 14 ಜೋಡಿ ಇತ್ಯರ್ಥವಾದ 35,721 ಪ್ರಕರಣಗಳು
Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ
ಗಂಗಾವತಿ: ಮೀಸಲು ಅರಣ್ಯದಲ್ಲಿ ಅವ್ಯಾಹತ ಮರಳು ದಂಧೆ – ಹದಗೆಟ್ಟ ರಸ್ತೆ
Darshan, ಸುದೀಪ್ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು
Kustagi: ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿದು ಕಣ್ಣು ಕಳೆದುಕೊಂಡ ವ್ಯಕ್ತಿ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.