ಶತ್ರುಗಳನ್ನು ಎಂದಿಗೂ ನಂಬದಿರಿ: ಕಾರ್ಗಿಲ್ ವಿಜಯೋತ್ಸವಕ್ಕೆ ಜನರಲ್ ಮಲ್ಲಿಕ್ ಕಿವಿಮಾತು!
Team Udayavani, Jul 26, 2023, 12:54 AM IST
ಹೊಸದಿಲ್ಲಿ: “ಸದಾ ಜಾಗೃತರಾಗಿರಿ, ಎಂದಿಗೂ ನಿಮ್ಮ ಶತ್ರುಗಳನ್ನು ನಂಬದಿರಿ, ಆ ಶತ್ರು ಪಾಕಿಸ್ಥಾನವೇ ಆಗಿರಲಿ ಅಥವಾ ಚೀನವೇ ಆಗಿರಲಿ”…
ಲಡಾಖ್ನ ಹಿಮಗಾಳಿಯಲ್ಲಿ ಎದೆಗುಂದದೆ ನಿಂತು ರಾಷ್ಟ್ರವನ್ನು ರಕ್ಷಿಸುತ್ತಿರುವ ಸೇನಾ ಸಿಬಂದಿಗೆ ಈ ರೀತಿಯ ಕಿವಿಮಾತು ಹೇಳಿದವರು ಭಾರತೀಯ ಸೇನೆಯ ನಿವೃತ್ತ ಮುಖ್ಯಸ್ಥ ಜನರಲ್ ವೇದಾ ಪ್ರಕಾಶ್ ಮಲ್ಲಿಕ್.
1999ರ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಜನರಲ್ ಮಲ್ಲಿಕ್, ಬುಧವಾರ ನಡೆಯಲಿರುವ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಲಡಾಖ್ನ ದ್ರಾಸ್ನಲ್ಲಿ ಯೋಧರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ಶತ್ರುರಾಷ್ಟ್ರವೊಂದು ರಾಜಕೀಯವಾಗಿ ನಮ್ಮ ರಾಷ್ಟ್ರದೊಂದಿಗೆ ಉತ್ತಮ ಸಂಬಂಧ ಹೊಂದಿರುವುದಾಗಿ ತೋರ್ಪಡಿಸಿಕೊಂಡರೂ, ಒಪ್ಪಂದಗಳಿಗೆ ಸಹಿ ಹಾಕುವಂತ ಪ್ರದರ್ಶನಗಳು ಕಂಡರೂ, ನಾವೆಂದಿಗೂ ಅವರನ್ನು ನಂಬುವಂತಿಲ್ಲ.
ಶತ್ರು ಯಾರೇ ಆಗಿದ್ದರೂ ಸೇನಾಪಡೆಗಳು ಸದಾ ಎಚ್ಚರವಾಗಿರಬೇಕು. ಶತ್ರುಗಳು ಹೇಗೆ ಇರಲಿ, ಎಲ್ಲೇ ಅಡಗಿರಲಿ ಅವರನ್ನು ಬೆನ್ನಟ್ಟಿ ಸೆದೆಬಡೆವ ಸಾಮರ್ಥ್ಯ ಭಾರತದ ಸೇನಾಪಡೆಗಳಿಗಿದೆ ಎಂಬುದಕ್ಕೆ ಕಾರ್ಗಿಲ್ ವಿಜಯೋತ್ಸವವೇ ಸಾಕ್ಷಿ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai ಬೀದಿಗಳನ್ನು ವ್ಯಾಪಾರಿಗಳು ವಶಪಡಿಸಿಕೊಂಡಿದ್ದು ಪಾದಚಾರಿಗಳಿಗೆ ಸ್ಥಳವಿಲ್ಲ: ಹೈಕೋರ್ಟ್
Constitution ನಲ್ಲಿ ಎಷ್ಟು ಪುಟಗಳಿವೆ?: ವಿಪಕ್ಷಗಳಿಗೆ ಅನುರಾಗ್ ಠಾಕೂರ್ ಪ್ರಶ್ನೆ ವೈರಲ್
Hathras stampede;‘ಸತ್ಸಂಗ’ದ ವೇಳೆ ಕಾಲ್ತುಳಿತ : ಮೃತರ ಸಂಖ್ಯೆ 116ಕ್ಕೆ
Mumbai; 31 ವರ್ಷ ಬಳಿಕ ಸೆರೆಸಿಕ್ಕ 1993 ಮುಂಬೈ ಗಲಭೆ ಆರೋಪಿ
Annamalai; ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ?
MUST WATCH
ಹೊಸ ಸೇರ್ಪಡೆ
Mumbai ಬೀದಿಗಳನ್ನು ವ್ಯಾಪಾರಿಗಳು ವಶಪಡಿಸಿಕೊಂಡಿದ್ದು ಪಾದಚಾರಿಗಳಿಗೆ ಸ್ಥಳವಿಲ್ಲ: ಹೈಕೋರ್ಟ್
Hurricane; ಯಾವುದೇ ವಿಳಂಬಗಳಾಗದಿದ್ದಲ್ಲಿ ನಾಳೆ ಬೆಳಗ್ಗೆ ದಿಲ್ಲಿಗೆ ಟೀಮ್ ಇಂಡಿಯಾ
Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000
Shiva Rajkumar: ನಾಳೆ ಶಿವಣ್ಣ ಹೊಸ ಚಿತ್ರದ ಟೈಟಲ್ ಲಾಂಚ್
Queen’s Premier League: ಕ್ವೀನ್ಸ್ ಪ್ರೀಮಿಯರ್ ಲೀಗ್ ಜೆರ್ಸಿ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.