ಹೆದ್ದಾರಿಗಳ ಉದ್ದಕ್ಕೂ ಬಿದಿರಿನಿಂದ ತಯಾರಿಸಿದ ಬೇಲಿ : ನಿತಿನ್ ಗಡ್ಕರಿ
ಛತ್ತೀಸ್ಗಢದಲ್ಲಿ ಪ್ರಾಯೋಗಿಕ ಯೋಜನೆ...
Team Udayavani, Jul 26, 2023, 7:26 PM IST
ಹೊಸದಿಲ್ಲಿ : ಎಕ್ಸ್ಪ್ರೆಸ್ವೇಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಬಿದಿರು ನಿರ್ಮಿತ “‘Bahu Balli” ಬೇಲಿಗಳನ್ನು ಪರಿಚಯಿಸುವುದಾಗಿ ಮತ್ತು ಛತ್ತೀಸ್ಗಢದಲ್ಲಿ ಪ್ರಾಯೋಗಿಕ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ಸರಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ.
ಬಿದಿರು ನಿರ್ಮಿತ ಬೇಲಿ ಕಬ್ಬಿಣದ ಬಳಕೆಗೆ ಪರ್ಯಾಯವಾಗಿ, ಪರಿಸರ ಸ್ನೇಹಿಯೂ ಆಗಲಿದೆ. ಈ ಕ್ರಮವು ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡಲು ಸಹಾಯ ಮಾಡುತ್ತದೆ ಮತ್ತು ಗ್ರಾಮಸ್ಥರು ಮತ್ತು ಬುಡಕಟ್ಟು ಜನರು ಇದರ ಪ್ರಯೋಜನ ಪಡೆಯುತ್ತಾರೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸದನಕ್ಕೆ ಮಾಹಿತಿ ನೀಡಿದರು.
“ಈ ರೀತಿಯ ‘ಬಹು ಬಲ್ಲಿ’ ಫೆನ್ಸಿಂಗ್ ಅನ್ನು ಮೊದಲ ಬಾರಿಗೆ ಪ್ರಯೋಗಿಸಲಾಗುತ್ತಿದೆ ಮತ್ತು ಇದು ಪರಿಸರ ಸ್ನೇಹಿಯಾಗಿದೆ. ಎಲ್ಲಾ ಪರೀಕ್ಷೆಗಳು ನಡೆದಿದ್ದು, ಉಕ್ಕಿನ ಬದಲಾಗಿ ಬಿದಿರಿನ ಅಡ್ಡ ತಡೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಎಲ್ಲಾ ಅನುಮೋದನೆಗಳನ್ನು ಸ್ವೀಕರಿಸಲಾಗಿದೆ ಎಂದು ಗಡ್ಕರಿ ಪ್ರಶ್ನೋತ್ತರ ವೇಳೆಯಲ್ಲಿ ಸಂಸದರ ಪೂರಕ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ.
“ನಾವು ಛತ್ತೀಸ್ಗಢದಲ್ಲಿ ಪ್ರಾಯೋಗಿಕ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದೇವೆ.ಅದು ಯಶಸ್ವಿಯಾದರೆ, ಉಕ್ಕಿನ ಬದಲಿಗೆ ಬಿದಿರಿನ ಅಡ್ಡ ತಡೆ ಪರಿಸರ ಸ್ನೇಹಿಯಾಗಲಿದ್ದು, ಆದಿವಾಸಿಗಳಿಗೆ ಬುಡಕಟ್ಟು ಪ್ರದೇಶಗಳಲ್ಲಿ ಕೆಲಸ ಸಿಗಲಿದೆ. ಈಶಾನ್ಯ ಭಾಗದಲ್ಲಿ ಬಿದಿರು ಹೇರಳವಾಗಿ ಲಭ್ಯವಿದೆ” ಎಂದು ಗಡ್ಕರಿ ಹೇಳಿದರು.
ಪ್ರಾಣಿಗಳು ಹೆದ್ದಾರಿಗೆ ಪ್ರವೇಶಿಸುವುದನ್ನು ತಪ್ಪಿಸಲು, ಈ ಬೇಲಿಗಳನ್ನು ಅಲ್ಲಿಯೂ ಬಳಸಲಾಗುವುದು.ರೈತರು ಬಂಜರು ಭೂಮಿಯಲ್ಲಿ ಬಿದಿರು ಬಿತ್ತುವುದರಿಂದ ಗ್ರಾಮೀಣ ಪ್ರದೇಶಗಳಿಗೆ ಇದರ ಲಾಭವಾಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.