1923ರ ಮಾರಿ ಬೊಳ್ಳಕ್ಕೆ 100 ವರ್ಷ ಪೂರ್ಣ!

ಪಾಣೆಮಂಗಳೂರಿನ ಕಟ್ಟಡಗಳಲ್ಲಿ ಮುಳುಗಿದ ಗುರುತು

Team Udayavani, Jul 27, 2023, 7:36 AM IST

PANE MANGALORE

ಬಂಟ್ವಾಳ: ಇಡೀ ಬಂಟ್ವಾಳವನ್ನೇ ಮುಳುಗಿಸಿದ್ದ ಮಾರಿ ಬೊಳ್ಳ (ಭೀಕರ ಪ್ರವಾಹ)ಕ್ಕೆ 100 ವರ್ಷ ತುಂಬುತ್ತಿದೆ. ಆ ಪ್ರವಾಹದ ಭೀಕರತೆಯನ್ನು ಸ್ಥಳೀಯರು ಮರೆಯಬಾರದು ಎಂಬ ಕಾರಣಕ್ಕೆ ಬಂಟ್ವಾಳ-ಪಾಣೆಮಂಗಳೂರು ಭಾಗದ ಕೆಲವು ಪುರಾತನ ಕಟ್ಟಡಗಳಲ್ಲಿ ಪ್ರವಾಹ ಆವರಿಸಿದ್ದ ಜಾಗಕ್ಕೆ ಹಾಕಿರುವ ಗುರುತು ಇನ್ನೂ ಮಾಸಿಲ್ಲ !

1923ರ ಆಗಸ್ಟ್‌ 7ರಂದು ಭೀಕರ ಪ್ರವಾಹ ಬಂಟ್ವಾಳ, ಪಾಣೆಮಂಗಳೂರು ಪಟ್ಟಣ ಸೇರಿದಂತೆ ಸಾಕಷ್ಟು ಊರುಗಳನ್ನು ಮುಳುಗಿಸಿತ್ತು. ಮುಂದಿನ ಆಗಸ್ಟ್‌ 7ಕ್ಕೆ ಆ ಘಟನೆಗೆ ನೂರು ವರ್ಷ ತುಂಬುವುದರಿಂದ ಆ ದಿನವನ್ನು ನೆನಪು ಮಾಡಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯರು ಸಿದ್ಧತೆ ಮಾಡಿಕೊಂಡಿದ್ದಾರೆ. ಅದೇ ಸಮಯದಲ್ಲಿ (1923ರಲ್ಲಿ) ಸದ್ಗುರು ನಿತ್ಯಾನಂದ ಸ್ವಾಮಿಗಳು ಬಂಟ್ವಾಳಕ್ಕೆ ಆಗಮಿಸಿದ್ದು, ಆ ಘಟನೆಯ ಶತಮಾನದ ನೆನಪು ಕೂಡ ನಡೆಯಲಿದೆ.

1974ರಲ್ಲಿ ಮತ್ತೂಮ್ಮೆ ಭೀಕರ ಪ್ರವಾಹ ಬಂದಿದ್ದರೂ 1923ರ ಪ್ರವಾಹಕ್ಕಿಂತ ತೀರಾ ಕೆಳಮಟ್ಟದಲ್ಲಿತ್ತು. ಅದರ ಗುರುತುಗಳನ್ನೂ ಕೆಲವು ಕಟ್ಟಡಗಳಲ್ಲಿ ಕಾಣಬಹುದು.

ಕಟ್ಟಡಗಳಲ್ಲಿ 23ರ ನೆನಪು!

ಧರ್ಮಸ್ಥಳ ಕ್ಷೇತ್ರಕ್ಕೆ ಸೇರಿದ ಜಾಗವೊಂದರ ಕಟ್ಟಡದ ಮೇಲ್ಛಾವಣಿಯ ಪಕ್ಕ 7.8.1923 ಎಂದು ಬರೆದಿದ್ದು, ಅಲ್ಲಿಯವರೆಗೂ ನೀರು ಬಂದಿತ್ತು ಎನ್ನಲಾಗುತ್ತಿದೆ. ಈಗ ಆ ರೀತಿಯ ಪ್ರವಾಹ ಬಂದರೆ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸುವುದೂ ಅಸಾಧ್ಯ. ಪಾಣೆಮಂಗಳೂರು ಪೇಟೆಯ ಮೂರುಮಾರ್ಗದ ಬಳಿ ಹಳೆಯ ಕಾಲದ ಹೊಟೇಲೊಂದರ ಪಕ್ಕದ ಕಟ್ಟಡದಲ್ಲಿ ಕಲ್ಲಿನಲ್ಲಿ “ತಾ. 7.8.1923 ಕುಜವಾರ ಇ ಕಲ್ಲಿನ ತನಕ ನೆರೆ ಬಂದಿದೆ’ ಎಂದು ಬರೆಯಲಾಗಿದ್ದು, ಪ್ರಸ್ತುತ ಅದಕ್ಕೆ ಬಿಳಿ ಬಣ್ಣ ಬಳಿಯಲಾಗಿದೆ.

ಅಂದು ಮುಳುಗಡೆಯಾಗಿದ್ದ ಬಹುತೇಕ ಕಟ್ಟಡಗಳಿದ್ದ ಜಾಗದಲ್ಲಿ ಪ್ರಸ್ತುತ ಹೊಸ ಕಟ್ಟಡಗಳು ನಿರ್ಮಾಣವಾಗಿವೆ. ಅಂದು ಅನುಭವಿಸಿದ ಯಾತನೆಯ ಅನುಭವವನ್ನು ಹೇಳಿಕೊಳ್ಳುವವರು ಯಾರೂ ಉಳಿದಿಲ್ಲ.

ಬಂಟ್ವಾಳದಲ್ಲಿ ಅಂದು ಜಲಮಾರ್ಗವೇ ಪ್ರಮುಖ ಸಾರಿಗೆಯಾಗಿತ್ತು. ಹೀಗಾಗಿ ನೇತ್ರಾವತಿ ಕಿನಾರೆಯಲ್ಲಿದ್ದ ಪಾಣೆಮಂಗಳೂರು ಬಂಟ್ವಾಳಕ್ಕಿಂತಲೂ ದೊಡ್ಡ
ವಾಣಿಜ್ಯ ಪಟ್ಟಣವಾಗಿತ್ತು. ಆದರೆ ಭೀಕರ ಪ್ರವಾಹದಲ್ಲಿ ಪೇಟೆಯಲ್ಲಿದ್ದ ಎಲ್ಲ ಸರಕು ಸರಂಜಾಮು ಕೊಚ್ಚಿ ಹೋಗಿತ್ತು; ಹಲವಾರು ಕುಟುಂಬಗಳನ್ನು ದೋಣಿಯ ಮೂಲಕ ರಕ್ಷಣೆ ಮಾಡಲಾಗಿತ್ತು ಎಂದು ಹಿರಿಯರು ಹೇಳುತ್ತಿದ್ದರು ಎಂದು ಪಾಣೆಮಂಗಳೂರಿನ ನಿವಾಸಿಗಳು ನೆನಪಿಸಿಕೊಳ್ಳುತ್ತಾರೆ.

ಟಾಪ್ ನ್ಯೂಸ್

Gangolli ಪೊಲೀಸ್‌ ವಾಹನ ಪಲ್ಟಿ ; ಇಬ್ಬರಿಗೆ ಗಾಯ

Gangolli ಪೊಲೀಸ್‌ ವಾಹನ ಪಲ್ಟಿ ; ಇಬ್ಬರಿಗೆ ಗಾಯ

Kapu ರಿಕ್ಷಾ ಮಾಲಕ ನೇಣಿಗೆ ಶರಣು

Kapu ರಿಕ್ಷಾ ಮಾಲಕ ನೇಣಿಗೆ ಶರಣು

Mulki: ಕಾರು ಡಿವೈಡರ್‌ಗೆ ಢಿಕ್ಕಿ; ಐವರಿಗೆ ಗಾಯ

Mulki: ಕಾರು ಡಿವೈಡರ್‌ಗೆ ಢಿಕ್ಕಿ; ಐವರಿಗೆ ಗಾಯ

Maldievs

T20 ವಿಶ್ವಕಪ್‌ ವಿಜೇತರಿಗೆ ಮಾಲ್ಡೀವ್ಸ್‌ ಆಹ್ವಾನ

Eshwarappa

Shivamogga; ತುರ್ತಾಗಿ ಬಿಜೆಪಿ ಸೇರುವ ಚಿಂತನೆ ಇಲ್ಲ: ಈಶ್ವರಪ್ಪ

Parameshwar

Guarantee Schemeಗಳ ಬಗ್ಗೆ ಬಿಜೆಪಿ ಅಪಪ್ರಚಾರ: ಗೃಹ ಸಚಿವ ಪರಮೇಶ್ವರ್‌

Siruguppa ಹೊಸ ಪಡಿತರ ಚೀಟಿಗಾಗಿ ಸಾರ್ವಜನಿಕರ ಪರದಾಟ

Siruguppa ಹೊಸ ಪಡಿತರ ಚೀಟಿಗಾಗಿ ಸಾರ್ವಜನಿಕರ ಪರದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulki: ಕಾರು ಡಿವೈಡರ್‌ಗೆ ಢಿಕ್ಕಿ; ಐವರಿಗೆ ಗಾಯ

Mulki: ಕಾರು ಡಿವೈಡರ್‌ಗೆ ಢಿಕ್ಕಿ; ಐವರಿಗೆ ಗಾಯ

1-saddasd

Heavy Rain ಅಬ್ಬರ; ಜು.9 ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

1-wewewq

Ullal: ಕಾರಿನ ಮೇಲೆ ಉರುಳಿ ಬಿದ್ದ ಬೃಹತ್ ಮರ

Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ

Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ

Kadaba: ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿ, ಸಹಾಯಕ್ಕಾಗಿ ಬೊಬ್ಬಬಿಡುತ್ತಿರುವ ಯುವಕ

Kadaba: ಆತ್ಮಹತ್ಯೆಗೆ ಯತ್ನಿಸಿ ಕುಮಾರಧಾರ ನದಿಯ ಮಧ್ಯೆ ಸಿಲುಕಿದ ಯುವಕನ ರಕ್ಷಣೆ

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

1-yuvi

Abhishek Sharma ಸೆಂಚುರಿ ಹೊಡೆದ್ದು ಗಿಲ್‌ ಬ್ಯಾಟ್‌ನಲ್ಲಿ !: ಸಂತಸಪಟ್ಟ ಯುವಿ

Gangolli ಪೊಲೀಸ್‌ ವಾಹನ ಪಲ್ಟಿ ; ಇಬ್ಬರಿಗೆ ಗಾಯ

Gangolli ಪೊಲೀಸ್‌ ವಾಹನ ಪಲ್ಟಿ ; ಇಬ್ಬರಿಗೆ ಗಾಯ

Kapu ರಿಕ್ಷಾ ಮಾಲಕ ನೇಣಿಗೆ ಶರಣು

Kapu ರಿಕ್ಷಾ ಮಾಲಕ ನೇಣಿಗೆ ಶರಣು

Mulki: ಕಾರು ಡಿವೈಡರ್‌ಗೆ ಢಿಕ್ಕಿ; ಐವರಿಗೆ ಗಾಯ

Mulki: ಕಾರು ಡಿವೈಡರ್‌ಗೆ ಢಿಕ್ಕಿ; ಐವರಿಗೆ ಗಾಯ

1-jayasuriya

Sri Lanka Team; ಭಾರತ ಕ್ರಿಕೆಟ್‌ ಸರಣಿಗೆ ಜಯಸೂರ್ಯ ಕೋಚ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.