ಸಂಘ ಶಿಕ್ಷಾ ವರ್ಗ ನವೀಕರಣಕ್ಕೆ ಚಿಂತನೆ
ಶಿಬಿರದ ಅವಧಿ ಕಡಿತಕ್ಕೆ ಆರ್ಎಸ್ಎಸ್ ವಲಯದಲ್ಲಿ ಚರ್ಚೆ- ದಂಡದ ಗಾತ್ರ ಬದಲಿಸಲೂ ಚಿಂತನೆ
Team Udayavani, Jul 28, 2023, 7:51 AM IST
ನಾಗ್ಪುರ: ಮುಂದಿನ ವರ್ಷ ವಿಜಯದಶಮಿಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್)ವು ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ತನ್ನ ದಶಕಗಳ ಹಳೆಯ ತರಬೇತಿ ವ್ಯವಸ್ಥೆಯನ್ನು ನವೀಕರಿಸಲು ಸಂಘ ಚಿಂತನೆ ನಡೆಸುತ್ತಿದೆ.
ಈ ತರಬೇತಿ ಶಿಬಿರವನ್ನು ಆಫೀಸರ್ ಟ್ರೈನಿಂಗ್ ಕ್ಯಾಂಪ್(ಒಟಿಸಿ) ಅಥವಾ ಸಂಘ ಶಿಕ್ಷಾ ವರ್ಗ ಎಂದು ಕರೆಯಲಾಗುತ್ತದೆ. ಇನ್ನೊಂದೆಡೆ, ಆರ್ಎಸ್ಎಸ್ ಸ್ವಯಂ ಸೇವಕರು ಉಪಯೋಗಿಸುವ ಸಾಂಪ್ರದಾಯಿಕ ದಂಡ(ಬಿದಿರಿನ ದೊಣ್ಣೆ)ದ ಗಾತ್ರವನ್ನು ತಗ್ಗಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಜು.13ರಿಂದ 15ರವರೆಗೆ ಊಟಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆಗಳು ಜರುಗಿದವು. ಈ ವರ್ಷ ನಡೆಯಲಿರುವ ಕೇಂದ್ರೀಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಮೊದಲನೇ ವರ್ಷ ಮತ್ತು ಎರಡನೇ ವರ್ಷದ ಶಿಬಿರ(ಒಟಿಸಿ) ಗಳನ್ನು ತಲಾ 20 ದಿನಗಳು ಹಾಗೂ ಮೂರನೇ ವರ್ಷದ ಶಿಬಿರವನ್ನು ನಾಗ್ಪುರದಲ್ಲಿ 25 ದಿನಗಳ ಕಾಲ ನಡೆಸಲಾಗುತ್ತದೆ. ಈ ಅವಧಿಯನ್ನು ಮೊದಲನೇ ವರ್ಷ ಮತ್ತು ಎರಡನೇ ವರ್ಷದಲ್ಲಿ ತಲಾ 15 ದಿನಗಳು ಹಾಗೂ ಮೂರನೇ ವರ್ಷದ ಶಿಬಿರವನ್ನು 20 ದಿನಗಳಿಗೆ ಇಳಿಸಲು ಚಿಂತನೆ ನಡೆದಿದೆ.
ಮತ್ತೂಂದಡೆ, ಪ್ರಸ್ತುತ ಸಾಂಪ್ರದಾಯಿಕ ದಂಡ 5.3 ಅಡಿ ಗಾತ್ರವಿದೆ. ಇದನ್ನು “ಯಶ್ತಿ”‘ ಎಂದು ಕರೆಯುವ ಸುಮಾರು 3 ಅಡಿ ಉದ್ದದ ದಂಡಕ್ಕೆ ಇಳಿಸಲು ಯೋಜಿಸಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ, ಸಮವಸ್ತ್ರದಲ್ಲಿ ಬದಲಾವಣೆ ತರಲಾಗಿ, ಪ್ರಸ್ತುತ ಪ್ಯಾಂಟ್ಗಳನ್ನು ಬಳಸಲಾಗುತ್ತಿದೆ.
ಹೆಚ್ಚಿನ ಸಂಘ ಶಿಕ್ಷಾ ವರ್ಗಗಳು ಏಪ್ರಿಲ್ನಿಂದ ಜೂನ್ವರೆಗೆ ನಡೆಯುತ್ತದೆ ಮತ್ತು ಕೆಲವು ಚಳಿಗಾಲದಲ್ಲೂ ನಡೆಯುತ್ತದೆ. ಈ ವರ್ಷ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಶಿಬಿರಗಳನ್ನು ನಡೆಸಲಾಗಿದ್ದು, 20,000ಕ್ಕೂ ಹೆಚ್ಚು ಮಂದಿ ತರಬೇತಿ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ
Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್ಗೆ ಹೋಗುತ್ತಿಲ್ಲ
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?
Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.