1st ODI;ಕುಲದೀಪ್ ದಾಳಿಗೆ ಕುಸಿದ ವೆಸ್ಟ್ ಇಂಡೀಸ್: ಭಾರತಕ್ಕೆ 5 ವಿಕೆಟ್ ಗಳ ಜಯ
Team Udayavani, Jul 27, 2023, 11:18 PM IST
ಬ್ರಿಡ್ಜ್ಟೌನ್: ವೆಸ್ಟ್ ಇಂಡೀಸ್ ವಿರುದ್ಧ ಗುರುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್ ಗಳ ಜಯ ಸಾಧಿಸಿದೆ.
ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕುಲದೀಪ್, ಜಡೇಜ ಸಹಿತ ಬೌಲರ್ಗಳ ಅಮೋಘ ದಾಳಿಗೆ ತತ್ತರಿಸಿದ ಆತಿಥೇಯ ತಂಡವು ಕೇವಲ 23 ಓವರ್ಗಳಲ್ಲಿ 114 ರನ್ನಿಗೆ ಆಲೌಟಾಯಿತು.
ಗುರಿ ಬೆನ್ನಟ್ಟಿದ ಭಾರತ 22.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಜಯ ಸಾಧಿಸಿತು. ಇಶಾನ್ ಕಿಶನ್ 52, ಗಿಲ್ 7, ಸೂರ್ಯಕುಮಾರ್19, ಹಾರ್ದಿಕ್ ಪಾಂಡ್ಯ (ರನೌಟ್)5,ಶಾರ್ದೂಲ್ ಠಾಕೂರ್ 1 ರನ್ ಗಳಿಸಿ ಔಟಾದರು.ರವೀಂದ್ರ ಜಡೇಜಾ ಔಟಾಗದೆ 16 ಮತ್ತು 6 ನೇ ವಿಕೆಟ್ ಗೆ ಬ್ಯಾಟಿಂಗ್ ಗೆ ಇಳಿದ ರೋಹಿತ್ ಶರ್ಮಾ ಔಟಾಗದೆ 12 ರನ್ ಗಳಿಸಿದರು.
ಹೋಪ್ ಆಸರೆ
ಭಾರತೀಯ ದಾಳಿಗೆ ವೆಸ್ಟ್ಇಂಡೀಸ್ ಆರಂಭದಿಂದಲೇ ಕುಸಿಯತೊಡಗಿತು. ಮೊತ್ತ 7 ತಲುಪಿದಾಗ ಆರಂಭಿಕ ಕೈಲ್ ಮೇಯರ್ ಔಟಾದರು. ಆಬಳಿಕ ಬ್ರ್ಯಾಂಡನ್ ಕಿಂಗ್ ಮತ್ತು ಅಲಿಕ್ ಅಥನಾಝ್ ದ್ವಿತೀಯ ವಿಕೆಟಿಗೆ 38 ರನ್ ಪೇರಿಸಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಈ ಜೋಡಿಯನ್ನು ಮುಕೇಶ್ ಮುರಿದರು. ಅದೇ ಮೊತ್ತಕ್ಕೆ ಬ್ರ್ಯಾಂಡನ್ ಕೂಡ ಔಟಾದ ಕಾರಣ ತಂಡ ಒತ್ತಡಕ್ಕೆ ಬಿತ್ತು.
ನಾಯಕ ಶೈ ಹೋಪ್ ಮತ್ತು ಅನುಭವಿ ಶಿಮ್ರನ್ ಹೆಟ್ಮೈರ್ ನಾಲ್ಕನೇ ವಿಕೆಟಿಗೆ ಮತ್ತೆ 43 ರನ್ ಪೇರಿಸಿದರು. ಈ ಹಂತದಲ್ಲಿ 11 ರನ್ ಗಳಿಸಿದ ಹೈಟ್ಮೈರ್ ಅವರನ್ನು ಜಡೇಜ ಕ್ಲೀನ್ಬೌಲ್ಡ್ ಮಾಡಿಸಿದರು. ಆಬಳಿಕ ಹೋಪ್ ಮಾತ್ರ ವಿಂಡೀಸ್ನ ಆಸರೆಯಾದರು. ಉಳಿದವರು ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲು ವಿಫಲರಾದರು. ಜಡೇಜ ಹಾಗೂ ಕುಲದೀಪ್ ಯಾದವ್ ಅವರ ನಿಖರ ಸ್ಪಿನ್ ದಾಳಿಗೆ ತತ್ತರಿಸಿದ ವಿಂಡೀಸ್ ಆಟಗಾರರು 114 ರನ್ ತಲಪುವಷ್ಟರಲ್ಲಿ ಆಲೌಟಾದರು.
45 ಎಸೆತ ಎದುರಿಸಿದ ಹೋಪ್ 43 ರನ್ ಗಳಿಸಿ ಕುಲದೀಪ್ಗೆ ವಿಕೆಟ್ ಒಪ್ಪಿಸಿದರು. 4 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ಉತ್ತಮ ಸ್ಪಿನ್ ಸಂಘಟಿಸಿದ ಕುಲದೀಪ್ ತನ್ನ ಮೂರು ಓವರ್ಗಳ ದಾಳಿಯಲ್ಲಿ ಕೇವಲ 6 ರನ್ ನೀಡಿ ನಾಲ್ಕು ವಿಕೆಟ್ ಉರುಳಿಸಿದರು. ರವೀಂದ್ರ ಜಡೇಜ 37 ರನ್ನಿಗೆ 3 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರು:
ವೆಸ್ಟ್ಇಂಡೀಸ್ 23 ಓವರ್ಗಳಲ್ಲಿ 114 ಆಲೌಟ್ (ಅಲಿಕ್ ಅಥನಾಝ್ 22, ಶೈ ಹೋಪ್ 43, ರವೀಂದ್ರ ಜಡೇಜ 33ಕ್ಕೆ 3, ಕುಲದೀಪ್ ಯಾದವ್ 6ಕ್ಕೆ 4). ಭಾರತ 22.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 118 ರನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Womens T20 World Cup: ಪಾಕ್ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಸೋತ ಭಾರತ
INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್ ಯಾರು?
T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್
Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್ ಸವಾಲು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ
Cycle Ride: ಸಾಗುತ ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್ ಸವಾರಿ
Kamanur village: ದಾರಿ ತೋರುವ ಮಾದರಿ ಗ್ರಾಮ
Bigg Boss: ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.