ಮದ್ಯಪಾನ ಮಾಡದಿದ್ದರೆ ನಾನು.. ʼಜೈಲರ್ʼ ಆಡಿಯೋ ಬಿಡುಗಡೆ ವೇದಿಕೆಯಲ್ಲಿ ʼತಲೈವಾʼ ಮಾತು ವೈರಲ್
ನನಗೆ "ʼಸೂಪರ್ ಸ್ಟಾರ್"ʼ ಎಂಬ ಪದ ಯಾವಾಗಲೂ ಸಮಸ್ಯೆಯೇ..
Team Udayavani, Jul 29, 2023, 1:41 PM IST
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ʼಜೈಲರ್ʼ ಸಿನಿಮಾದ ಆಡಿಯೋ ಲಾಂಚ್ ಸಮಾರಂಭ ಶುಕ್ರವಾರ ಸಂಜೆ (ಜು.28 ರಂದು) ಅದ್ಧೂರಿಯಾಗಿ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನೆರವೇರಿದೆ.
ರಜಿನಿಕಾಂತ್ ಅವರ ಸಾವಿರಾರು ಅಭಿಮಾನಿಗಳು, ಸಿನಿಮಾ ತಂಡ ಹಾಗೂ ಚಿತ್ರರಂಗದ ಇತರ ಗಣ್ಯರು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ತಲೈವಾ ರಜಿನಿಕಾಂತ್ ವೇದಿಕೆ ಮೇಲೆ ಆಡಿದ ಮಾತುಗಳು ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ.
ಹಿಂದೆ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ವಿಪರೀತ ಮದ್ಯವನ್ನು ಸೇವಿಸುತ್ತಿದ್ದ ವಿಚಾರ ಗೊತ್ತೇ ಇದೆ. ಈ ಬಗ್ಗೆ ಅವರು ʼಜೈಲರ್ʼ ಆಡಿಯೋ ಲಾಂಚ್ ವೇದಿಕೆಯಲ್ಲಿ ಮಾತನಾಡಿದ್ದಾರೆ.
“ಒಂದು ವೇಳೆ ಜೀವನದಲ್ಲಿ ಮದ್ಯಪಾನವಿಲ್ಲದಿದ್ದರೆ, ನಾನು ಸಮಾಜ ಸೇವೆ ಮಾಡುತ್ತಿದ್ದೆ. ನಾನು ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ಎಂದರೆ ಅದು ಮದ್ಯಪಾನ. ನನ್ನ ಸಹೋದರ ನನ್ನನು ರಾಜ ಎಂದು ಕರೆದು, ಮದ್ಯಪಾನ ಮಾಡ್ಬೇಡ ಎನ್ನುತ್ತಿದ್ದರು. ಒಂದೇ ವೇಳೆ ನಾನು ಜೀವನದಲ್ಲಿ ಮದ್ಯಪಾನ ಮಾಡದಿದ್ದರೆ, ನಾನಿವತ್ತು ಏನು ಮಾಡಿದ್ದೇನೋ ಅದಕ್ಕಿಂತ ಹೆಚ್ಚು ಸಾಧನೆಯನ್ನು ಮಾಡುತ್ತಿದ್ದೆ ಹಾಗೂ ಉತ್ತಮ ಸ್ಟಾರ್, ವ್ಯಕ್ತಿಯಾಗಿರುತ್ತಿದ್ದೆ. ನಾನು ಯಾರಿಗೂ ಮದ್ಯಪಾನ ತ್ಯಜಿಸಿ ಎಂದು ಹೇಳುತ್ತಿಲ್ಲ, ಮದ್ಯಪಾನ ಮಾಡಿ, ಆದರೆ ಪ್ರತಿನಿತ್ಯ ಅದನ್ನು ಸೇವಿಸಬೇಡಿ, ಹಾಗೆ ಮಾಡಿದರೆ ಅದು ನಿಮ್ಮ ನೆಮ್ಮದಿ ಹಾಗೂ ಜೀವನಕ್ಕೆ ಹಾನಿಯಾಗುತ್ತದೆ. ನಿತ್ಯ ಕುಡಿದರೆ ನಿಮ್ಮ ಪೋಷಕರು, ನಿಮ್ಮ ಕುಟುಂಬ ಮತ್ತು ನಿಮ್ಮನ್ನು ನಂಬಿಕೊಂಡಿರುವವರು ಅದರಿಂದ ಬಳಲುತ್ತಾರೆ” ಎಂದು ಹೇಳಿದರು.
ಇದನ್ನೂ ಓದಿ: Aachar & co movie review: ಮೆಟ್ರೋ ಮಂದಿ ಮುಂದೆ ರೆಟ್ರೋ ಸಿನಿಮಾ
“ಇತ್ತೀಚೆಗಿನ ದಿನಗಳಲ್ಲಿ ನಾನು ಹಲವು ಸ್ಕ್ರಿಪ್ಟ್ ಗಳನ್ನು ರಿಜೆಕ್ಟ್ ಮಾಡಿದೆ. “ಅಣ್ಣಾಥೆ” ಸಿನಿಮಾದ ಬಳಿಕ ಬಂದ ಸ್ಕ್ರಿಪ್ಟ್ ಗಳು ʼಬಾಷಾʼ, ʼಅಣ್ಣಾಮಲೈʼ ಸಿನಿಮಾದ ಕಥೆಗಳಂತೆಯೇ ಇದ್ದವು. ಎಲ್ಲವೂ ಒಂದೇ ರೀತಿಯ ಕಥೆಯಾಗಿದ್ದರಿಂದ ಒಂದು ಸಮಯದಲ್ಲಿ ನಾನು ಕಥೆ ಕೇಳುವುದನ್ನೇ ನಿಲ್ಲಿಸಿಬಿಟ್ಟಿದ್ದೆ” ಎಂದು ರಜಿನಿಕಾಂತ್ ಹೇಳಿದರು.
ನೆಲ್ಸನ್ ಅವರ ಈ ಹಿಂದಿನ ʼಬೀಸ್ಟ್ʼ ಸಿನಿಮಾ ನಿರೀಕ್ಷೆ ಮಾಡಿದ್ದಷ್ಟು ಗಳಿಕೆ ಕಂಡಿಲ್ಲ. ಆದರೆ ವಿತರಿಕರಿಗೆ ನಷ್ಟವಾಗಿಲ್ಲ. ನಾನು ʼಜೈಲರ್ʼ ಸಿನಿಮಾ ಅನೌನ್ಸ್ ಮಾಡಿದ ಬಳಿಕ, ಅನೇಕರು ಆನ್ಲೈನ್ ನಲ್ಲಿ ನಿರ್ದೇಶಕರನ್ನು ಬದಲಾಯಿಸುವಂತೆ ಆಗ್ರಹಿಸಿದ್ದರು. ಆದರೆ ನಾನು ನೆಲ್ಸನ್ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿದ್ದೆ. ಆ ಬಳಿಕ ನಾನು ಟ್ವಿಟರ್ ನಲ್ಲಿ ʼಜೈಲರ್ʼ ಫೋಟೋ ಹಾಕಿದೆ” ಎಂದು ನಟ ಹೇಳಿದರು.
“ಜೈಲರ್ʼ ಸಿನಿಮಾದ “ಹುಕುಂ” ಹಾಗೂ “ಜುಜುಬಿ” ಹಾಡನ್ನು ಬರೆದ ಗೀತಾರಚನೆಕಾರ ಸೂಪರ್ ಸುಬ್ಬು ಅವರ ಬಳಿ, ʼಹುಕುಂʼ ಹಾಡಿನಲ್ಲಿದ್ದ ʼಸೂಪರ್ ಸ್ಟಾರ್ʼ ಪದವನ್ನು ತೆಗೆಯಲು ವಿನಂತಿಸಿದ್ದೆ. ʼಸೂಪರ್ ಸ್ಟಾರ್ʼ ಎಂಬ ಪದ ಯಾವಾಗಲೂ ಸಮಸ್ಯೆ” ಎಂದು ಹೇಳಿದರು.
ಮಾತಿನ ಕೊನೆಯಲ್ಲಿ ರಜಿನಿಕಾಂತ್ ಸಿನಿಮಾದಲ್ಲಿ ನಟಿಸಿರುವ ಕಲಾವಿದರಿಗೆ ಕೃತಜ್ಞತೆ ಸಲ್ಲಿಸಿದರು. ವಿಶೇಷ ಪಾತ್ರದಲ್ಲಿ ನಟಿಸಿದ್ದ ಮೋಹನ್ ಲಾಲ್ ಅವರ ಬಗ್ಗೆ ಪ್ರಶಂಸೆಯ ನುಡಿಗಳನ್ನಾಡಿದರು.
ʼಜೈಲರ್ʼ ಇದೇ ಆಗಸ್ಟ್ 10 ರಂದು ವರ್ಲ್ಡ್ ವೈಡ್ ಅದ್ಧೂರಿಯಾಗಿ ತೆರೆಗೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.