“ನಾನು ಶಾರುಖ್ ಅಭಿಮಾನಿ ಆದರೆ..” ಮತ್ತೆ ಆಮಿರ್ ಖಾನ್ ಬಗ್ಗೆ ಮಾತನಾಡಿದ ʼದಂಗಲ್ʼ ಬೆಡಗಿ
Team Udayavani, Aug 1, 2023, 1:23 PM IST
ಮುಂಬಯಿ: ಮಿಸ್ಟರ್ ಫರ್ಫೆಕ್ಟ್ ನಟ ಆಮಿರ್ ಖಾನ್ ʼಲಾಲ್ ಸಿಂಗ್ ಚಡ್ಡಾʼ ಸಿನಿಮಾದ ಬಳಿಕ ಯಾವ ಸಿನಿಮಾದಲ್ಲೂ ನಾಯಕನಾಗಿ ಕಾಣಿಸಿಕೊಂಡಿಲ್ಲ. ನಟನೆಯಿಂದ ಒಂದಷ್ಟು ಗ್ಯಾಪ್ ಪಡೆದುಕೊಂಡಿರುವ ಅವರನ್ನು ಮತ್ತೆ ಬಿಗ್ ಸ್ಕ್ರೀನ್ ನಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಇತ್ತ ನಟ ಆಮಿರ್ ಖಾನ್ ಪತ್ನಿಯಿಂದ ವಿಚ್ಛೇದನ ಪಡೆದು ದೂರವಾಗಿದ್ದರೂ, ತನ್ನ ಮಕ್ಕಳೊಂದಿಗೆ ಸಮಯ ಕಳೆಯುತ್ತಾ, ಮಾಜಿ ಪತ್ನಿಯೊಂದಿಗೆ ಸ್ನೇಹಿತರಾಗಿ ತನ್ನ ಬಾಂಧವ್ಯವನ್ನು ಮುಂದುವರೆಸಿದ್ದಾರೆ.
ನಟಿ ಫಾತಿಮಾ ಸನಾ ಶೇಖ್ ʼದಂಗಲ್ʼ ಸಿನಿಮಾದಲ್ಲಿ ಆಮಿರ್ ಖಾನ್ ಅವರೊಂದಿಗೆ ನಟಿಸಿದ ಬಳಿಕ, ಅವರೊಂದಿಗೆ ಆತ್ಮೀಯವಾಗಿ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿರುವ ಕುರಿತು ʼಡೇಟಿಂಗ್ʼ ಗಾಸಿಪ್ ಗಳು ಕೂಡ ಹಬ್ಬಿದ್ದವು. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ ಫಾತಿಮಾ ಆಮಿರ್ ಅವರೊಂದಿಗೆ ಪೀಕಲ್ ಬಾಲ್ ಗೇಮ್ ಆಡುತ್ತಿದ್ದ ವಿಡಿಯೋ ಸೋಶಿಯಲ್ ಮೀಡಿಯಾಲ್ಲಿ ಮತ್ತೆ ಗಾಸಿಪ್ ಹರಡಲು ಕಾರಣವಾಗಿತ್ತು.
ʼಹ್ಯೂಮನ್ಸ್ ಆಫ್ ಸಿನಿಮಾʼ ಸಂದರ್ಶನದಲ್ಲಿ ನಟಿ ಫಾತಿಮಾ ತನ್ನ ಮೆಚ್ಚಿನ ನಟ ಹಾಗೂ ಅವರ ಸಿನಿಮಾದ ಕುರಿತಾಗಿ ಮಾತನಾಡಿದ್ದಾರೆ.
“ನಾನು ಶಾರುಖ್ ಖಾನ್ ಅವರ ಅಭಿಮಾನಿ, ಆದರೆ ಆಮಿರ್ ಖಾನ್ ಅವರು “ರಂಗ್ ದೇ ಬಸಂತಿ”, “ಪಿಕೆ”, “ಪೀಪ್ಲಿ ಲೈವ್” ನಂತಹ ಸಾಕಷ್ಟು ಚಿತ್ರಗಳನ್ನು ನೀಡಿದ್ದಾರೆ, ಇವೆಲ್ಲವೂ ವಿಭಿನ್ನವಾಗಿವೆ” ಎಂದು ಹೇಳಿದ್ದಾರೆ.
ಅಮೀರ್ ಖಾನ್ ಮತ್ತು ಫಾತಿಮಾ ಸನಾ ಶೇಖ್ ನಡುವಿನ ಆತ್ಮೀಯತೆ ಈಗಲೂ ಮುಂದುವರೆದಿದ್ದು, ಇಬ್ಬರ ನಡುವಿನ ಆತ್ಮೀಯತೆ ಮುಂದೆ ಯಾವ ರೀತಿಯಾಗಿ ತಿರುವು ಪಡೆದುಕೊಳ್ಳುತ್ತದೆ ಎನ್ನುವುದು ಅಭಿಮಾನಿಗಳ ಕುತೂಹಲ.
ಸದ್ಯ ಫಾತಿಮಾ ಮೇಘನಾ ಗುಲ್ಜಾರ್ ಅವರ “ಸ್ಯಾಮ್ ಬಹದ್ದೂರ್” ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Govinda: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಡಿಸ್ಚಾರ್ಜ್
Border 2: ಸನ್ನಿ ಡಿಯೋಲ್ ʼಬಾರ್ಡರ್-2ʼಗೆ ʼಫೌಜಿʼಯಾಗಿ ಬಂದ ಸುನಿಲ್ ಶೆಟ್ಟಿ ಪುತ್ರ
Bollywood Actor Govinda: ಬಾಲಿವುಡ್ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು
‘Emergency’ ದೃಶ್ಯ ಕಡಿತಕ್ಕೆ ಕಂಗನಾ ಸಮ್ಮತಿ: CBFC
Tusshar Kapoor: ʼಗೋಲ್ ಮಾಲ್ʼ ನಟ ತುಷಾರ್ ಕಪೂರ್ ಫೇಸ್ಬುಕ್ ಖಾತೆ ಹ್ಯಾಕ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?
Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ
ನಾಡೋಜ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ
Minchu Hulu Review: ಮಿಂಚುಹುಳು ತಂದ ಹೊಸಕಿರಣ
Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.