Actrees : ಸಂಬಂಧ ಬೆಳೆಸಿ ಖಾಸಗಿ ವಿಡಿಯೋ ಲೀಕ್; ಖ್ಯಾತ ನಿರ್ಮಾಪಕನ ವಿರುದ್ಧ ನಟಿ ದೂರು
Team Udayavani, Aug 1, 2023, 5:21 PM IST
ಭುವನೇಶ್ವರ: ನಿರ್ಮಾಪಕ ತನ್ನ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿದ ಆರೋಪವನ್ನು ಮಾಡಿ ಖ್ಯಾತ ನಟಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಒಲಿವುಡ್( ಒಡಿಶಾ ಸಿನಿಮಾರಂಗ) ನಲ್ಲಿ ತನ್ನ ನಟನೆಯಿಂದ ತನ್ನದೇ ಆದ ಛಾಪನ್ನು ಮೂಡಿಸಿರುವ ನಟಿ ಶೀತಲ್ ಪಾತ್ರ ಒಲಿವುಡ್ ರಂಗದ ಖ್ಯಾತ ನಿರ್ಮಾಪಕ ದಯಾನಿಧಿ ಎಂಟರ್ಟೈನ್ಮೆಂಟ್ ನ ಮಾಲೀಕ ದಯಾನಿಧಿ ದಹಿಮಾ ಎಂಬವರ ವಿರುದ್ಧ ಕಿರುಕುಳ, ಬ್ಲ್ಯಾಕ್ ಮೇಲ್ ಆರೋಪವನ್ನು ಮಾಡಿದ್ದಾರೆ.
ನಟಿ ದಯಾನಿಧಿ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿಯಲ್ಲಿ ಸಿನಿಮಾಗಳನ್ನು ಮಾಡಿದ್ದಾರೆ. ಈ ವೇಳೆ ನಿರ್ಮಾಪಕ ದಯಾನಿಧಿ ದಹಿಮಾ ಹಾಗೂ ನಟಿ ಶೀತಲ್ ಆತ್ಮೀಯರಾಗಿದ್ದಾರೆ. ಇಬ್ಬರ ನಡುವಿನ ಆತ್ಮೀಯತೆ ಪ್ರೀತಿಗೆ ತಿರುಗಿದೆ. ಈ ಕ್ಷಣದಲ್ಲಿ ಇಬ್ಬರು ಹಲವು ಕಡೆ ತಿರುಗಾಟ ನಡೆಸಿದ್ದಾರೆ. ಖಾಸಗಿಯಾಗಿ ಕ್ಷಣಗಳನ್ನು ಕಳೆದಿದ್ದಾರೆ.
ನಟಿ ಶೀತಲ್ ಅವರಿಗೆ ಇತರ ಸಿನಿಮಾಗಳ ಆಫರ್ ಗಳ ಬಂದಿದೆ. ಆದರೆ ಇದಕ್ಕೆ ನಿರ್ಮಾಪಕ ದಯಾನಿಧಿ ವಿರೋಧ ವ್ಯಕ್ತಪಡಿಸಿದ್ದಾರೆ. ನಟಿಗೆ ಬಂದ ಆಫರ್ ಗಳನ್ನು ತಾನೇ ತಿರಸ್ಕರಿಸಿ ನಟಿಯನ್ನು ನಿಯಂತ್ರಣದಲ್ಲಿ ಇಡಲು ಯತ್ನಿಸಿದ್ದಾರೆ. ನಿರ್ಮಾಪಕನ ವರ್ತನೆಗೆ ನಟಿ ಬೇಸರಗೊಂಡಿದ್ದಾರೆ. ಈ ವೇಳೆ ನಿರ್ಮಾಪಕ ನಟಿಯ ಬಳಿ ಈ ಹಿಂದೆ ಕೆಲಸ ಮಾಡಿದ ಪ್ರಾಜೆಕ್ಟ್ ಗಳ ಹಣವನ್ನು ವಾಪಾಸ್ ನೀಡುವಂತೆ ಬೆದರಿಕೆಯನ್ನು ಹಾಕಲು ಶುರು ಮಾಡಿದ್ದಾರೆ.
ನಟಿ ಶೀತಲ್ ನಿರ್ಮಾಪಕನ ಬೇಡಿಕೆಗಳನ್ನು ನೀಡಲು ನಿರಾಕರಿಸಿದಾಗ ನಿರ್ಮಾಪಕ ಆಕೆಯ ವಿರುದ್ದ ಅಪ್ರಚಾರ ಮಾಡಲು ಆಕೆಯ ಅರಿವಿಗೆ ಬಾರದೆ ತೆಗೆದ ಖಾಸಗಿ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿದ್ದಾರೆ ಎಂದು ಆರೋಪಿಸಿ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಬಂಧದಲ್ಲಿರುವಾಗ ನಟಿಯನ್ನು ಆರೋಪಿ ಭಾವನಾತ್ಮಕವಾಗಿ ಬಳಸಿಕೊಂಡಿದ್ದಾರೆ. ನಿರ್ಮಾಪಕನ ಈ ವರ್ತನೆಯಿಂದ ನಟಿಯ ವೃತ್ತಿಜೀವನದ ಮೇಲೆ ಪರಿಣಾಮ ಬೀರುವುದಲ್ಲದೆ ಭಾವನಾತ್ಮಕವಾಗಿ ಆಕೆಯನ್ನು ಕುಗ್ಗುವಂತೆ ಮಾಡಿದೆ. ಈ ಘಟನೆ ಮನರಂಜನಾ ಉದ್ಯಮದ ಕರಾಳ ಮುಖವನ್ನು ಬೆಳಕಿಗೆ ತಂದಿದೆ ಎಂದು ನಟಿಯ ಪರ ವಕೀಲ ಸೌಮ್ಯಜಿತ್ ಬಿಸ್ವಾಲ್ ಹೇಳಿದ್ದಾರೆ.
ಈ ವಿಚಾರದ ಬಗ್ಗೆ ನಟಿ ಶೀತಲ್ ಅವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ನಿರ್ಮಾಪಕನ ಹೆಸರನ್ನು ಕೂಡ ಉಲ್ಲೇಖ ಮಾಡಿದ್ದಾರೆ. ಈ ವಿಚಾರ ಬೆಳಕಿಗೆ ಬಂದ ಬಳಿಕ ನಟಿಯ ಪರವಾಗಿ ಹಲವು ಕಲಾವಿದರು ಅವರ ಜೊತೆ ನಿಂತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?
Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್ ಬಾಸ್ʼ ಖ್ಯಾತಿಯ ಅಬ್ದು ವಿವಾಹ
National Cinema Day: ಈ ದಿನ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
Tumbbad 2: ಪ್ರಳಯ್ ಆಯೇಗಾ.. ಹಾರಾರ್ ಥ್ರಿಲ್ಲರ್ ‘ತುಂಬಾಡ್ʼ ಸೀಕ್ವೆಲ್ ಅನೌನ್ಸ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
Contractors Association ಅಧ್ಯಕ್ಷ ಕೆಂಪಣ್ಣ ವಿಧಿವಶ; ಗಣ್ಯರ ಸಂತಾಪ
Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Sep.20: ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಕಾಲೇಜು ಘಟಿಕೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.