ತೋಟದ ಶೆಡ್ ಮೇಲೆ ಪೊಲೀಸರ ಮಿಂಚಿನ ದಾಳಿ: 269 ಸಿಲಿಂಡರ್ ಗಳು ವಶ
ಬೊಲೆರೋ ವಾಹನ ವಶ : ಆರೋಪಿ ಪರಾರಿ
Team Udayavani, Aug 1, 2023, 6:51 PM IST
ಕುಣಿಗಲ್ : ಆಟೋ ರಿಕ್ಷಾ ಕಿಟ್ಗಳಿಗೆ ರೀಫಿಲಿಂಗ್ ಮಾಡಲು ಆಕ್ರಮವಾಗಿ ಸಂಗ್ರಹಿಸಿ ಇಟ್ಟಿದ ಗ್ಯಾಸ್ ಸಿಲಿಂಡರ್ ಶೆಡ್ ಮೇಲೆ ಮಿಂಚಿನ ದಾಳಿ ನೆಡೆಸಿದ ಕುಣಿಗಲ್ ಪೊಲೀಸರು ವಿವಿಧ ಇಂಧನ ಕಂಪನಿಗೆ ಸೇರಿದ ಲಕ್ಷಾಂತರೂ ಮೌಲ್ಯದ 269 ಸಿಲಿಂಡರ್, ರೀಫಿಲಿಂಗ್ ಸಾಮಾಗ್ರಿ, ಬೊಲೆರೋ ವಾಹನವನ್ನು ವಶಕ್ಕೆ ಪಡೆದ, ಘಟನೆ ತಾಲೂಕಿನ ಕಸಬಾ ಹೋಬಳಿ ಬೋರಲಿಂಗನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಬೋರಲಿಂಗನಪಾಳ್ಯ ಗ್ರಾಮದ ಕುಮಾರ್ ಎಂಬುವರು ಆಟೋ ರಿಕ್ಷಾ ಕಿಟ್ಗಳಿಗೆ ರೀಫಿಲಿಂಗ್ ಮಾಡಲು ಬೋರಲಿಂಗನಪಾಳ್ಯ ಗ್ರಾಮದ ನೇರಳೆ ಮಾರಮ್ಮನ ದೇವಸ್ಥಾನದ ಹಿಂಭಾಗದ ಲೇಔಟ್ ಬಳಿಯ ತೆಂಗಿನ ತೋಟದ ಶೆಡ್ನಲ್ಲಿ ಆಕ್ರಮವಾಗಿ ಸಿಲಿಂಡರ್ಗಳನ್ನು ಶೇಖರಣೆ ಮಾಡಿ ಇಟ್ಟಿದ್ದರು, ಖಚಿತ ಮಾಹಿತಿ ಮೇರೆಗೆ ಕುಣಿಗಲ್ ವೃತ್ತ ನಿರೀಕ್ಷಕ ವಿ.ಎಂ.ಗುರುಪ್ರಸಾದ್ ಅವರ ನೇತೃತ್ವದಲ್ಲಿ ಪೊಲೀಸರು ಕಳೆದ ರಾತ್ರಿ ದಾಳಿ ನಡೆಸಲು ಮುಂದಾದರು ಪೊಲೀಸರ ವಾಹನ ಬರುವುದನ್ನು ಗಮನಿಸಿದ ಆರೋಪಿ ಕುಮಾರ್, ಶೆಡ್ಗೆ ಬೀಗ ಹಾಕಿ ಅಲ್ಲಿಂದ ಪರಾರಿಯಾದನ್ನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಳಿಕ ಪೊಲೀಸರು ಶೆಡ್ ಬೀಗವನ್ನು ತೆಗೆದಾಗ ಶೆಡ್ ಒಳಗೆ ಗೋ ಗ್ಯಾಸ್ ಕಂಪನಿಯ ತುಂಬಿದ ಡೋಮಾಸ್ಟಿಕ್ ಸಿಲಿಂಡರ್ 160 ಖಾಲಿ ಸಿಲಿಂಡರ್ 20 ಹೆಚ್.ಪಿ ಕಂಪನಿಯ ತುಂಬಿದ ವಾಣಿಜ್ಯ ಸಿಲಿಂಡರ್ 18, ಖಾಲಿ ಸಿಲಿಂಡರ್ ೫೮, ಇಂಡಿಯನ್ ವಾಣಿಜ್ಯ ಸಿಲಿಂಡರ್ 2, ಮಿನಿ ಖಾಲಿ ಸಿಲಿಂಡರ್ 10, ಆಟೋ ಕಿಟ್ ಖಾಲಿ ಸಿಲಿಂಡರ್ 1 ಸೇರಿದಂತೆ ಒಟ್ಟು 269 ಸಿಲಿಂಡರ್ ಹಾಗೂ ಸಿಲಿಂಡರ್ ರೀಫಿಲಿಂಗ್ ಸಾಮಾಗ್ರಿಗಳು, ಸಿಲಿಂಡರ್ ಸಾಗಾಣೆ ಮಾಡುವ ಬೋಲೇರೋ ಗಾಡಿಯನ್ನು ವಶಕ್ಕೆ ಪಡೆದರು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
ದಾಳಿಯಲ್ಲಿ ಕಾನ್ಸ್ಟೇಬಲ್ಗಳಾದ ಮಲ್ಲಿಕಾರ್ಜುನ್, ಪುಟ್ಟರಾಜು, ಷಡಕ್ಷರಿ ಮತ್ತಿತರರು ಪಾಲ್ಗೊಂಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ಆಂಬ್ಯುಲೆನ್ಸ್ ಸಿಗದೆ ವೃದ್ದ ಮೃತದೇಹವನ್ನು ಬೈಕ್ ನಲ್ಲಿಯೇ ಕೊಂಡೊಯ್ದ ಮಕ್ಕಳು
Minister V. Somanna ಹಾಲಿನ ದರ ಏರಿಕೆ ಗ್ಯಾರಂಟಿಗೆ ಬಳಸಿದ್ರೆ ವಿರೋಧ
Tumkur ಕೊಟ್ಟಿಗೆಗೆ ನುಗ್ಗಿದ 5 ಚಿರತೆಗಳು: 32 ಕುರಿಗಳ ಸಾವು
BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ
Kunigal: ಹಿಂದೂ ಮುಸ್ಲಿಂ ಭಾವೈಕ್ಯತೆ, ಸಂಗಮಕ್ಕೆ ಸಾಕ್ಷಿಯಾದ ಈದ್ ಮಿಲಾದ್ ಮೆರವಣಿಗೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.