ದೇವಧರ್‌ ಟ್ರೋಫಿ: ರಿಯಾನ್‌ ಪರಾಗ್‌ ಅವರ ಮತ್ತೂಂದು ಸ್ಫೋಟಕ ಶತಕ


Team Udayavani, Aug 2, 2023, 12:47 AM IST

DEVDHAR

ಪುದುಚೇರಿ: ರಿಯಾನ್‌ ಪರಾಗ್‌ ಅವರ ಮತ್ತೂಂದು ಸ್ಫೋಟಕ ಶತಕ ಸಾಹಸದಿಂದ ಪಶ್ಚಿಮ ವಲ ಯವನ್ನು 157 ರನ್ನುಗಳ ಭಾರೀ ಅಂತ
ರದಿಂದ ಕೆಡವಿದ ಪೂರ್ವ ವಲಯ “ದೇವಧರ್‌ ಟ್ರೋಫಿ’ ಕ್ರಿಕೆಟ್‌ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆ ಹಾಕಿದೆ. ಗುರುವಾರ ನಡೆಯುವ ಪ್ರಶಸ್ತಿ ಸಮರದಲ್ಲಿ ದಕ್ಷಿಣ ವಲಯವನ್ನು ಎದುರಿಸಲಿದೆ.

ಸೆಮಿಫೈನಲ್‌ ಮಹತ್ವ ಪಡೆದಿದ್ದ ಮಂಗಳವಾರದ ಈ ಲೀಗ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪೂರ್ವ ವಲಯ 7 ವಿಕೆಟಿಗೆ 317 ರನ್‌ ಬಾರಿಸಿ ಸವಾಲೊಡ್ಡಿತು. ಪಶ್ಚಿಮ ವಲಯ 34 ಓವರ್‌ಗಳಲ್ಲಿ 162ಕ್ಕೆ ಕುಸಿಯಿತು.

ಮಣಿಶಂಕರ್‌ ಮುರಸಿಂಗ್‌ ಮತ್ತು ಆಲ್‌ರೌಂಡರ್‌ ಉತ್ಕರ್ಷ್‌ ಸಿಂಗ್‌ ಘಾತಕ ಬೌಲಿಂಗ್‌ ದಾಳಿ ಮೂಲಕ ಪಶ್ಚಿಮ ವಲಯವನ್ನು ಪರದಾಡುವಂತೆ ಮಾಡಿದರು. ಮಣಿ ಶಂಕರ್‌ 5 ವಿಕೆಟ್‌ ಹಾಗೂ ಉತ್ಕರ್ಷ್‌ 3 ವಿಕೆಟ್‌ ಕಿತ್ತರು. ನಾಯಕ ಹಾಗೂ ಆರಂಭಕಾರ ಹಾರ್ವಿಕ್‌ ದೇಸಾಯಿ ಏಕಾಂಗಿಯಾಗಿ ಹೋರಾಡಿ 92 ರನ್‌ ಬಾರಿಸಿದ್ದೊಂದೇ ಪಶ್ಚಿಮ ವಲಯದ ಗಮ ನಾರ್ಹ ಸಾಧನೆ. ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ದೇಸಾಯಿ ಮಾತ್ರ ಕ್ರೀಸಿಗೆ ಅಂಟಿ ಕೊಂಡು ನಿಂತರು. ಕೊನೆಯವರಾಗಿ ಪೆವಿಲಿಯನ್‌ ಸೇರಿಕೊಂಡರು.

ಪರಾಗ್‌ ಮತ್ತೂಂದು ಶತಕ
ಪೂರ್ವ ವಲಯದ ಮಧ್ಯಮ ಕ್ರಮಾಂಕದ ಡ್ಯಾಶಿಂಗ್‌ ಬ್ಯಾಟರ್‌ ರಿಯಾನ್‌ ಪರಾಗ್‌ 68 ಎಸೆತಗಳಿಂದ 102 ರನ್‌ ಬಾರಿಸಿ ತಂಡದ ಮೊತ್ತವನ್ನು ಮುನ್ನೂರರಾಚೆ ವಿಸ್ತರಿಸಿದರು. ಈ ಬ್ಯಾಟಿಂಗ್‌ ಅಬ್ಬರದ ವೇಳೆ 6 ಬೌಂಡರಿ ಹಾಗೂ 5 ಸಿಕ್ಸರ್‌ ಸಿಡಿಸಿದರು. ಉತ್ತರ ವಲಯ ವಿರುದ್ಧವೂ ಸಿಡಿದು ನಿಂತಿದ್ದ ಪರಾಗ್‌ 131 ರನ್‌ ಬಾರಿಸಿದ್ದನ್ನು ನೆನಪಿಸಿಕೊಳ್ಳಬಹುದು.

ಆರಂಭಕಾರ ಉತ್ಕರ್ಷ್‌ ಸಿಂಗ್‌ 50 ರನ್‌ ಕೊಡುಗೆ ಸಲ್ಲಿಸಿದರು. ಅಭಿಮನ್ಯು ಈಶ್ವರನ್‌ 38, ವಿರಾಟ್‌ ಸಿಂಗ್‌ 42, ಕುಮಾರ ಕುಶಾಗ್ರ 53 ರನ್‌ ಬಾರಿಸಿದರು. ಪರಾಗ್‌-ಕುಶಾಗ್ರ ಜೋಡಿ 17.4 ಓವರ್‌ಗಳಿಂದ 6ನೇ ವಿಕೆಟಿಗೆ ಭರ್ತಿ 150 ರನ್‌ ಪೇರಿಸಿ ಪಶ್ಚಿಮ ವಲಯದ ಬೌಲರ್‌ಗಳಿಗೆ ಬೆವರಿಳಿಸಿದರು. ಇವರು ತಂಡದ ಮೊತ್ತವನ್ನು 157ರಿಂದ 307ಕ್ಕೆ ತಂದು ನಿಲ್ಲಿಸಿದರು.

ಸಂಕ್ಷಿಪ್ತ ಸ್ಕೋರ್‌: ಪೂರ್ವ ವಲಯ- 7 ವಿಕೆಟಿಗೆ 319 (ರಿಯಾನ್‌ ಪರಾಗ್‌ ಔಟಾಗದೆ 102, ಕುಮಾರ ಕುಶಾಗ್ರ 53, ಉತ್ಕರ್ಷ್‌ ಸಿಂಗ್‌ 50, ವಿರಾಟ್‌ ಸಿಂಗ್‌ 42, ಶಮ್ಸ್‌ ಮುಲಾನಿ 45ಕ್ಕೆ 3). ಪ. ವಲಯ-34 ಓವರ್‌ಗಳಲ್ಲಿ 162 (ಹಾರ್ವಿಕ್‌ ದೇಸಾಯಿ 92, ಅತೀತ್‌ ಶೇs… 18, ಮಣಿಶಂಕರ್‌ ಮುರಸಿಂಗ್‌ 28ಕ್ಕೆ 5, ಉತ್ಕರ್ಷ್‌ ಸಿಂಗ್‌ 16ಕ್ಕೆ 3).

ಐದೂ ಪಂದ್ಯ ಗೆದ್ದ ದಕ್ಷಿಣ ವಲಯ
ಪುದುಚೇರಿ: ನೆಚ್ಚಿನ ತಂಡವಾಗಿರುವ ದಕ್ಷಿಣ ವಲಯ ಲೀಗ್‌ ಹಂತದ ಎಲ್ಲ 5 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್‌ಗೆ ಲಗ್ಗೆ ಹಾಕಿದೆ. ಮಂಗಳವಾರದ ಅಂತಿಮ ಪಂದ್ಯದಲ್ಲಿ ಮಾಯಾಂಕ್‌ ಅಗರ್ವಾಲ್‌ ಬಳಗ 7 ವಿಕೆಟ್‌ಗಳಿಂದ ಮಧ್ಯ ವಲಯವನ್ನು ಪರಾಭವಗೊಳಿಸಿತು. ಸಾಯಿ ಸುದರ್ಶನ್‌ ಅವರ ಆಕರ್ಷಕ ಶತಕ ದಕ್ಷಿಣ ವಲಯದ ಯಶಸ್ವಿ ಚೇಸಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಮಧ್ಯ ವಲಯ 9 ವಿಕೆಟಿಗೆ 261 ರನ್‌ ಪೇರಿಸಿದರೆ, ದಕ್ಷಿಣ ವಲಯ 48.2 ಓವರ್‌ಗಳಲ್ಲಿ 3 ವಿಕೆಟಿಗೆ 262 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.
ಮಾಯಾಂಕ್‌ ಅಗರ್ವಾಲ್‌ ಬ್ಯಾಟಿಂಗ್‌ ಆರಂಭಿಸುವ ಮೊದಲೇ ಗಾಯಾಳಾಗಿ ನಿರ್ಗಮಿಸಿದ ಬಳಿಕ ಸಾಯಿ ಸುದರ್ಶನ್‌ ಬ್ಯಾಟಿಂಗ್‌ ಹೊಣೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದರು. 136 ಎಸೆತಗಳಿಂದ ಅಜೇಯ 132 ರನ್‌ ಬಾರಿಸಿ ತಂಡವನ್ನು ದಡ ಸೇರಿಸಿದರು. ಈ ಪಂದ್ಯಶ್ರೇಷ್ಠ ಆಟದಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿತ್ತು.

ಆರಂಭಕಾರ ರೋಹನ್‌ ಕುನ್ನುಮ್ಮಾಳ್‌ 24, ಎನ್‌. ಜಗದೀಶನ್‌ 19, ರೋಹಿತ್‌ ರಾಯುಡು 37 ಮತ್ತು ವಾಷಿಂಗ್ಟನ್‌ ಸುಂದರ್‌ ಔಟಾಗದೆ 43 ರನ್‌ ಹೊಡೆದರು.
ಮಧ್ಯ ವಲಯ ಸರದಿಯಲ್ಲಿ ಮಿಂಚಿದವರು ಯಶ್‌ ದುಬೆ. ಅವರು ಸರ್ವಾಧಿಕ 77 ರನ್‌ ಹೊಡೆದರು. 38 ರನ್‌ ಗಳಿಸಿದ ಶಿವಂ ಮಾವಿ ಅವರದು ಅನಂತರದ ಹೆಚ್ಚಿನ ಗಳಿಕೆ. ಮೋಹಿತ್‌ ರೇಡ್ಕರ್‌ 51ಕ್ಕೆ 3 ವಿಕೆಟ್‌, ಅರ್ಜುನ್‌ ತೆಂಡುಲ್ಕರ್‌ ಮತ್ತು ವಿ. ಕೌಶಿಕ್‌ ತಲಾ 2 ವಿಕೆಟ್‌ ಉರುಳಿಸಿದರು.

ಟಾಪ್ ನ್ಯೂಸ್

6

Nag Ashwin: ‘ಕಲ್ಕಿ’ ಡೈರೆಕ್ಟರ್ ನಾಗ್ ಅಶ್ವಿನ್‌ಗೆ ಕೃಷ್ಣನೂರು ಉಡುಪಿಯ ನಂಟು

1-maya

K Armstrong; ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ: ಮಾಯಾವತಿ ಆಕ್ರೋಶ

1hatharas

Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್‌ಗಳನ್ನು ತಂದಿದ್ದರೆ?

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ

Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

INDvsZIM: ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ; ತಂಡದಲ್ಲಿ ಒಂದು ಬದಲಾವಣೆ

INDvsZIM: ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ; ತಂಡದಲ್ಲಿ ಒಂದು ಬದಲಾವಣೆ

Potchefstroom ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬೋಳ ಅಕ್ಷತಾ ಪೂಜಾರಿ

Potchefstroom ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬೋಳ ಅಕ್ಷತಾ ಪೂಜಾರಿ

john-cena

John Cena; ರಸ್ಲಿಂಗ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ WWE ಸೂಪರ್ ಸ್ಟಾರ್ ಜಾನ್ ಸೀನ

India W vs Sa W: ಗೆಲ್ಲಬೇಕಾದ ಒತ್ತಡದಲ್ಲಿ ಕೌರ್‌ ಬಳಗ

India W vs Sa W: ಗೆಲ್ಲಬೇಕಾದ ಒತ್ತಡದಲ್ಲಿ ಕೌರ್‌ ಬಳಗ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

6

Nag Ashwin: ‘ಕಲ್ಕಿ’ ಡೈರೆಕ್ಟರ್ ನಾಗ್ ಅಶ್ವಿನ್‌ಗೆ ಕೃಷ್ಣನೂರು ಉಡುಪಿಯ ನಂಟು

1-maya

K Armstrong; ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ: ಮಾಯಾವತಿ ಆಕ್ರೋಶ

1hatharas

Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್‌ಗಳನ್ನು ತಂದಿದ್ದರೆ?

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.