ಕುಣಿಗಲ್ : ಹಾಡಹಗಲೇ ವ್ಯಕ್ತಿಯ ಮೇಲೆ ಲಾಂಗ್ನಿಂದ ಹಲ್ಲೆ
Team Udayavani, Aug 3, 2023, 11:29 PM IST
ಕುಣಿಗಲ್ : ಹಳೇ ದ್ವೇಷ ಹಿನ್ನಲೆಯಲ್ಲಿ ಗುಪೊಂದು ಲಾಂಗಿನಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಡಹಗಲೇ ಪಟ್ಟಣದ ಮಲ್ಲಾಘಟ್ಟ ಎಲ್ಐಸಿ ಆಫೀಸ್ ಮುಂಭಾಗದಲ್ಲಿ ಗುರುವಾರ ನಡೆದಿದೆ.
ತಾಲೂಕಿನ ಮೇಸ್ತ್ರಿಗೌಡನಪಾಳ್ಯ ಗ್ರಾಮದ ಜಗದೀಶ್ ಅಲಿಯಾಸ್ ಜಗ ಲಾಂಗ್ ನಿಂದ ಹಲ್ಲೆಗೆ ಒಳಗಾದ ವ್ಯಕ್ತಿ. ಗುರುವಾರ ಮಧ್ಯಾಹ್ನ ಸುಮಾರು 3.45 ರ ಸಮಯದಲ್ಲಿ ಕುಣಿಗಲ್ ಪಟ್ಟಣದ ಹಳೇಯ ರಾಷ್ಟ್ರೀಯ ಹೆದ್ದಾರಿ 48 ರ ಬಿ.ಎಂ ರಸ್ತೆ ಮಲ್ಲಾಘಟ್ಟದ ಎಲ್.ಐ.ಸಿ ಆಫೀಸ್ ಮುಂಭಾಗದಲ್ಲಿ ಎಸ್.ಕೆ.ಎನ್ ಬಾರ್ ಅಂಡ್ ರೆಸ್ಟೋರೆಂಟ್ ಸಮೀಪ ಜಗದೀಶ್, ಆತನ ಸ್ನೇಹಿತ ರೇಣುಕಾ ಕುಣಿಗಲ್ ಕಡೆಗೆ ನಡೆದುಕೊಂಡು ಹೋಗುತ್ತಿರಬೇಕಾದರೆ ಬೈಕ್ಗಳಲ್ಲಿ ಬಂದ ಕೂತರಹಳ್ಳಿ ಗ್ರಾಮದ ಆಕಾಶ್, ಹುಚ್ಚಲಕ್ಕಯ್ಯನಪಾಳ್ಯದ ಗ್ರಾಮದ ಚಿಕ್ಕಣ್ಣ, ಕುಣಿಗಲ್ ಪಟ್ಟಣದ ಆಶ್ರಯ ಕಾಲೋನಿಯ ಶ್ರೀನಿವಾಸ್ (ಸೀನ) ಮತ್ತು ಇತರೇ ಇಬ್ಬರು ಸೇರಿ ಏಕಾಏಕಿ ಅವಾಚ್ಯವಾದ ಶಬ್ದಗಳಿಂದ ಬೈದು, ಲಾಂಗ್ ನಿಂದ ಜಗದೀಶನ ತೊಡೆಯ ಮೇಲೆ ಹೊಡೆಯಲಾಗಿದೆ.
ಜಗದೀಶ ಕೆಳಗೆ ಬಿದ್ದಾಗ ಮತ್ತೆ ಆಕಾಶ ಲಾಂಗ್ ನಿಂದ ಜಗದೀಶನ ತಲೆಗೆ ಹೊಡೆದಿದ್ದಾನೆ ಎಂದು ರೇಣುಕಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.
ಘಟನಾ ಸ್ಥಳಕ್ಕೆ ಜನರು ಬರುತ್ತಿದಂತೆ ಆರೋಪಿಗಳು ಪರಾರಿಯಾಗಿದ್ದಾರೆ, ತೀವ್ರವಾಗಿ ಗಾಯಗೊಂಡ ಜಗದೀಶನನ್ನು ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದ್ಯೋಯಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rare occurrence: ಮಳೆಗಾಗಿ ಪ್ರಾರ್ಥಿಸಿ ಬಾಲಕರಿಬ್ಬರಿಗೆ ಮದುವೆ
Railway Development: ರಾಜ್ಯದಲ್ಲಿ ರೈಲ್ವೇ ಕ್ರಾಂತಿಗೆ ಬದ್ಧ: ಕೇಂದ್ರ ಸಚಿವ ಸೋಮಣ್ಣ
Kunigal; ಬೈಕ್ ಗೆ ಕ್ಯಾಂಟರ್ ಡಿಕ್ಕಿ:ಇಬ್ಬರು ಯುವಕರು ಸ್ಥಳದಲ್ಲೇ ಮೃ*ತ್ಯು
Tumkur:ಕೌಟುಂಬಿಕ ಕಲಹಕ್ಕೆ ಬೇಸತ್ತು ಇಬ್ಬರು ಮಕ್ಕಳೊಂದಿಗೆ ತಾಯಿ ಕೆರೆಗೆ ಬಿದ್ದು ಆತ್ಮಹತ್ಯೆ
Koratagere: ನರೇಗಾ ಕಾಮಗಾರಿ ಹಣ ದುರುಪಯೋಗ, ಗ್ರಾ.ಪಂ. ಪಿಡಿಓ ಅಮಾನತು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.