ಹುಡುಗರನ್ನು ಆಟವಾಡಿಸಿ ಗೆದ್ದ ನಿತಿನ್ ಕೃಷ್ಣಮೂರ್ತಿ
Team Udayavani, Aug 4, 2023, 12:01 PM IST
“ಒಂದೇ ಒಂದು ಹಿಟ್ ಕೊಡುವವರು ಯಾರೂ ಇಲ್ವ… ಇನ್ನೆಷ್ಟು ತಿಂಗಳು ಈ “ಬರಗಾಲ’ವನ್ನು ಸಹಿಸಿಕೊಳ್ಳಬೇಕು….’ ಎಂದು ಕನ್ನಡ ಚಿತ್ರರಂಗ ಹಾಗೂ ಸಿನಿಮಾ ಪ್ರೇಮಿಗಳು ತಲೆಮೇಲೆ ಕೈ ಇಟ್ಟುಕೊಂಡಾಗ ಧುತ್ತನೇ ಬಂದು “ತಗೊಳಿ, ಇನ್ನುಂದೆ ಈ ಹುಡುಗರ ಹಾವಳಿ ನಿಮಗಿರಲಿ… ಗೆಲುವು ನಮ್ಮದಾಗಿರಲಿ’ ಎಂದು ಹುಡುಗರನ್ನು ಅಖಾಡಕ್ಕೆ ಬಿಟ್ಟು, ಅವರೊಂದಿಗೆ ಆಟವಾಡಿದ ವ್ಯಕ್ತಿಯ ಹೆಸರು ನಿತಿನ್ ಕೃಷ್ಣಮೂರ್ತಿ. ಯಾರು ಈ ನಿತಿನ್ ಎಂದು ನೀವು ಕೇಳಿದರೆ ಸದ್ಯಕ್ಕೆ “ಹಾಸ್ಟೆಲ್ ಹುಡುಗರತ್ತ’ ಬೆರಳು ತೋರಿಸಬೇಕು.
ಹೌದು, ಸದ್ಯ ಭರ್ಜರಿ ಹಿಟ್ ಆಗಿ, ಎಲ್ಲರ ಬಾಯಲ್ಲೂ ನಲಿದಾಡುತ್ತಿರುವ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ನಿರ್ದೇಶಕ ಕಂ ನಟ. ಆರು ತಿಂಗಳಿನಿಂದ ಒಂದೇ ಒಂದು ಗೆಲುವಿಗಾಗಿ ಎದುರು ನೋಡುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಗೆಲುವು ತಂದುಕೊಟ್ಟ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು, ನಟಿಸಿ ನಿರ್ದೇಶಿಸಿರುವ ನಿತಿನ್ಗೆ ಎರಡೂ ಹೊಸದು. ಈ ಹಿಂದೆ ಖಾಸಗಿ ವಾಹಿನಿಯೊಂದರಲ್ಲಿ ಕೆಲಸ ಮಾಡಿದ ಹಾಗೂ “ಲೂಸಿಯಾ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ನಿತಿನ್ಗಿತ್ತು. ಆ ಅನುಭವದೊಂದಿಗೆ ಒಂದೊಳ್ಳೆಯ ಕಥೆ ಹಾಗೂ ತಂಡವನ್ನು ಕಟ್ಟಿಕೊಂಡು ಅಖಾಡಕ್ಕಿಳಿದ ನಿತಿನ್, ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದಾರೆ. ಅದರ ಪರಿಣಾಮ ಈಗ ಇಡೀ ಚಿತ್ರರಂಗದ ಮೇಲಾಗಿದೆ.
ಸಿನಿಮಾ ಎಂದರೆ ಗ್ಲಾಮರ್ ಬೇಕು, ಕಲರ್ಫುಲ್ ಸಾಂಗ್ಸ್ ಇರಬೇಕು, ಯಾರಾದರೂ ಒಬ್ಬ ಹೀರೋ ಇರಲೇ ಬೇಕು, ಸೆಂಟಿಮೆಂಟ್ ಅಲ್ಲಲ್ಲಿ “ಜಿನುಗು’ತ್ತಿರ ಬೇಕು ಎಂಬ ಸಿದ್ಧಸೂತ್ರಗಳನ್ನು ಸಾರಸಗಟಾಗಿ ಬದಿಗೊತ್ತಿ, “ನಗುವೊಂದೇ ಶಾಶ್ವತ’ ಎಂಬ ಫಾರ್ಮುಲಾದೊಂದಿಗೆ ಮಾಡಿದ ಸಿನಿಮಾ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ನಿತಿನ್ ಅವರ ಈ ಫಾರ್ಮುಲಾ ವರ್ಕ್ ಆಗಿದೆ. “ಒಂದು ಸಿನಿಮಾ ಹಿಟ್ ಆದ ಕೂಡಲೇ ಮುಂದಿನ ಸಿನಿಮಾದ ಗೆಲುವು ಸುಲಭ ಎನ್ನುವಂತಿಲ್ಲ. ಆ ಸಿನಿಮಾಕ್ಕೆ ಮತ್ತೆ ಹೊಸದಾಗಿ ಅಷ್ಟೇ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಮಾಡಲೇಬೇಕು’ ಎನ್ನುವ ಸಿದ್ಧಾಂತ ನಿತಿನ್ ಅವರದು.
ನಟನೆಗಿಂತ ನಿರ್ದೇಶನದ ಒಲವಿರುವ ನಿತಿನ್ ಸದ್ಯ “ಹಾಸ್ಟೆಲ್ ಹುಡುಗರು’ ಗೆಲುವನ್ನು ಎಂಜಾಯ್ ಮಾಡುತ್ತಿದ್ದು, ನಿತಿನ್ ಮತ್ತೆ ಹೊಸ ಸಿನಿಮಾಕ್ಕೆ ಅಣಿಯಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Test Cricket : ಮೆಂಡಿಸ್ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ
Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ
Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.