ಮೊಹಲ್ಲಾ ಕ್ಲಿನಿಕ್ ಶ್ಲಾಘಿಸಿ ಕೂಡಲೇ ಯು-ಟರ್ನ್ ಹೊಡೆದ ದಿನೇಶ್ ಗುಂಡೂರಾವ್
ಆಪ್ ಶಾಸಕನಿಂದ ತಿರುಗೇಟು..
Team Udayavani, Aug 4, 2023, 10:32 PM IST
ಹೊಸದಿಲ್ಲಿ:ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಮ್ ಆದ್ಮಿ ಸರ್ಕಾರದ ಮೊಹಲ್ಲಾ ಕ್ಲಿನಿಕ್ ಉಪಕ್ರಮವನ್ನು ಶುಕ್ರವಾರ ಶ್ಲಾಘಿಸಿದ ಕೆಲವೇ ಗಂಟೆಗಳ ನಂತರ ಇದು “ಅತಿಯಾದ ಪ್ರಚಾರ” ಎಂದು ಹೇಳಿದ್ದಾರೆ. ಒಂದು ಮೊಹಲ್ಲಾ ಕ್ಲಿನಿಕ್ ಗೆ ಭೇಟಿ ನೀಡಿದ ನಂತರ ನಾನು ನಿರಾಶೆಗೊಂಡೆ ಎಂದು ಹೇಳಿದ್ದಾರೆ.
ಸಚಿವ ಗುಂಡೂರಾವ್ ಅವರ ಹೇಳಿಕೆ ಬದಲಾವಣೆಗೆ ”ಬೆಳಗ್ಗೆ ಮೊಹಲ್ಲಾ ಕ್ಲಿನಿಕ್ನಲ್ಲಿದ್ದಾಗ ಬಡಾಯಿ ಕೊಚ್ಚಿಕೊಂಡ ನೀವು ಕರ್ನಾಟಕ ಭವನ ತಲುಪಿದ ಕೂಡಲೇ ಬಿಜೆಪಿ ಮಟ್ಟದ ರಾಜಕೀಯಕ್ಕೆ ಇಳಿದಿದ್ದೀರಲ್ಲ”ಎಂದು ಆಪ್ ಶಾಸಕ ನರೇಶ್ ಬಲ್ಯಾನ್ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ವಿರೋಧ ಪಕ್ಷಗಳ ಒಕ್ಕೂಟ INDIAದ ಸದಸ್ಯರಾಗಿದ್ದಾರೆ.
ಶುಕ್ರವಾರ ಪಂಚಶೀಲ್ ಪಾರ್ಕ್ನಲ್ಲಿರುವ ‘ಆಮ್ ಆದ್ಮಿ ಮೊಹಲ್ಲಾ ಕ್ಲಿನಿಕ್’ಗೆ ಭೇಟಿ ನೀಡಿದ್ದರು. ಅಧಿಕೃತ ಹೇಳಿಕೆಯ ಪ್ರಕಾರ ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಮತ್ತು ಕರ್ನಾಟಕ ಭವನದ ವೈದ್ಯಕೀಯ ಅಧಿಕಾರಿ ಕಾರ್ತಿಕ್ ಅವರೊಂದಿಗೆ ಇದ್ದರು.
ಮೊಹಲ್ಲಾ ಕ್ಲಿನಿಕ್ ಉಪಕ್ರಮವನ್ನು ಹೊಗಳಿದ ಸುಮಾರು ನಾಲ್ಕು ಗಂಟೆಗಳ ನಂತರ, ಗುಂಡೂ ರಾವ್ ಯು-ಟರ್ನ್ ಹೊಡೆದು ”ದೆಹಲಿಯ ಮೊಹಲ್ಲಾ ಕ್ಲಿನಿಕ್ ನಲ್ಲಿ ಯಾವುದೇ ಜನರಿರಲಿಲ್ಲ. ಕರ್ನಾಟಕದಲ್ಲಿರುವ ನಮ್ಮ ಕ್ಲಿನಿಕ್ಗಳು ರೋಗಿಗಳಿಗೆ ತಕ್ಷಣದ ಪರೀಕ್ಷೆಗಳನ್ನು ಮಾಡಲು ಪ್ರಯೋಗಾಲಯ ಸೇರಿದಂತೆ ಹೆಚ್ಚಿನ ಸೌಲಭ್ಯಗಳನ್ನು ಹೊಂದಿವೆ. ಇದು ಅತಿಯಾಗಿ ಪ್ರಚಾರಗೊಂಡಿದೆ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ನಿರಾಶೆಯಿಂದ ಹಿಂತಿರುಗಿದೆ”ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ
ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು
Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್: ಅಶ್ವಿನಿ ವೈಷ್ಣವ್
ಕಾಂಗ್ರೆಸ್ ನಾಯಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ…: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ
One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ
Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ
Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?
BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.