![Transfer of 23 IAS officers including five District Collectors](https://www.udayavani.com/wp-content/uploads/2024/07/IAS-officer-415x229.jpg)
ಪೆದಮಲೆ: ಸಹಾಯಕ ಅರ್ಚಕ ನಾಪತ್ತೆ
Team Udayavani, Aug 4, 2023, 11:12 PM IST
![ಪೆದಮಲೆ: ಸಹಾಯಕ ಅರ್ಚಕ ನಾಪತ್ತೆ](https://www.udayavani.com/wp-content/uploads/2023/08/missing-aaa-620x349.jpg)
ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿರುವ ಕೃಷ್ಣ ಕೆ.ಬಿ.ಅವರ ಸಹೋದರ ಕೆ.ವಿ.ಜಗನ್ನಾಥ (43)ಅವರು ನಾಪತ್ತೆಯಾದವರು. ಅವರು ಕಳೆದ ವರ್ಷ ಅಕ್ಟೋಬರ್ ತಿಂಗಳ 15ನೇ ತಾರೀಖಿನಂದು ತಮ್ಮ ಸ್ವಂತ ಊರಾದ ಕಾಸರಗೊಡಿನ ಅಡ್ಕತ್ತಬೈಲು ಎಂಬಲ್ಲಿಗೆ ಹೋಗಿ ಬರುತ್ತೇವೆ ಎಂದು ಹೇಳಿ ಹೋಗಿರುತ್ತಾರೆ. ಆದರೆ ಅವರು ಮನೆಗೂ ಹೋಗದೆ ಇದ್ದು ಮನೆಯವರಲ್ಲಿ ವಿಚಾರಿಸಿದಾಗ ಬಂದಿರುವದಿಲ್ಲ ತಿಳಿಸಿದ್ದಾರೆ. ಅವರು ಈ ಹಿಂದೆಯೂ ಮನೆಯಲ್ಲಿ ಹೇಳದೆ ಹೋಗುವ ಅಭ್ಯಾಸದವಾಗಿದ್ದು, ಎಲ್ಲಿಯಾದರೂ ಹೋಗಿ ದೇವರ ಧ್ಯಾನ ಮಾಡುತ್ತಿದ್ದರು.
ಅಲ್ಲದೆ ಉತ್ತರಕಾಂಡದ ರುದ್ರ ಪ್ರಯಾಗ ಜಿಲ್ಲೆಯ ಕಾಳಿ ಮಠದ ಅಂಡೆಯ ಮನ್ನಣ್ಣ ಮಾಯಿ ದೇವಸ್ಥಾನದಲ್ಲಿ ಪೂಜೆ ಕೂಡಾ ಮಾಡುತ್ತಿದ್ದರು. ಅವಿವಾಹಿತರಾಗಿರುವ ಅವರು ಬಿಎಸ್ಸಿ, ಎಂಬಿಎ ಪಧವೀಧರರಾಗಿದ್ದಾರೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಇದುವರೆಗೂ ಅವರು ವಾಪಾಸು ಬಾರದಿರುವ ಕಾರಣ ಪತ್ತೆಗಾಗಿ ದೂರು ನೀಡಲಾಗಿದೆ.
ಟಾಪ್ ನ್ಯೂಸ್
![Transfer of 23 IAS officers including five District Collectors](https://www.udayavani.com/wp-content/uploads/2024/07/IAS-officer-415x229.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.