Desi Swara: “ಸರ್ವತೋಮುಖ ಬೆಳವಣಿಗೆಗೆ ನಾಟ್ಯಶಾಸ್ತ್ರ ಪೂರಕ’

ಸಂಸ್ಕೃತಿ ಸೆಂಟರ್‌ ಫಾರ್‌ ಕಲ್ಚರಲ್‌ ಎಕ್ಸೆಲೆನ್ಸ್‌

Team Udayavani, Aug 5, 2023, 10:20 AM IST

Natyashastra, Development, London, NRI News, Udayavani news, ನಾಟ್ಯಶಾಸ್ತ್ರ, ಬೃಹತ್‌ ಗ್ರಂಥ, ಸಂಸ್ಕೃತಿ, ಆಧುನಿಕ ಜಗತ್ತು

ಲಂಡನ್: ಇಲ್ಲಿನ ಸಂಸ್ಕೃತಿ ಸೆಂಟರ್‌ ಫಾರ್‌ ಕಲ್ಚರಲ್‌ ಎಕ್ಸೆಲೆನ್ಸ್‌ ವತಿಯಿಂದ ಜು.31ರಂದು “ಆಧುನಿಕ ಜಗತ್ತಿನಲ್ಲಿ ನಾಟ್ಯಶಾಸ್ತ್ರದ ಪ್ರಾಮುಖ್ಯತೆ’ ಕಾರ್ಯಕ್ರಮವು ನೆಹರು ಸೆಂಟರ್‌ ಹೈ ಕಮಿಶನ್ಸ್‌ ಆಫ್ ಇಂಡಿಯಾದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಟ್ಯಶಾಸ್ತ್ರ ಕೃತಿಯನ್ನು ಮೊದಲ ಬಾರಿಗೆ ಇಂಗ್ಲಿಷ್‌ನಲ್ಲಿ ಅನುವಾದ ಮಾಡಿದ ಸಂಸ್ಕೃತ ವಿದ್ವಾಂಸರಾದ ಪ್ರೊ| ರಾಧಾವಲ್ಲಭ ತ್ರಿಪಾಠಿ “ಆಧುನಿಕ ಜಗತ್ತಿನಲ್ಲಿ ನಾಟ್ಯಶಾಸ್ತ್ರದ ಪ್ರಾಮುಖ್ಯತೆ ‘ ಎಂಬ ವಿಷಯದ ಕುರಿತು ಮಾತನಾಡುತ್ತಾ, “ಭರತನಾಟ್ಯ ಅಥವಾ ಯಾವುದೇ ಭಾರತೀಯ ಶಾಸ್ತ್ರೀಯ ನೃತ್ಯ ಕಲಿಯುವಾಗ ಭರತಮುನಿಯ “ನಾಟ್ಯಶಾಸ್ತ್ರದ’ ಪ್ರಸ್ತಾವವೂ ಖಂಡಿತ ಬರುತ್ತದೆ.

ನಾಟ್ಯಶಾಸ್ತ್ರದಂತಹ ಬೃಹತ್‌ ಗ್ರಂಥದ ಪರಿಚಯವೇ ಅನೇಕರಿಗಿಲ್ಲ. ಅದಲ್ಲದೇ ನಾಟಕ, ನೃತ್ಯ ಹಾಗೂ ಸಂಗೀತದ ಬಗ್ಗೆ ತಿಳಿದವರು ಕೂಡ ಇದರ ಬಗ್ಗೆ ಪ್ರಚಾರ ಕೊಡುವುದಿಲ್ಲ. ಬ್ರಿಟನ್‌ನಲ್ಲಿ ಶೇಕ್ಸ್‌ ಪೀಯರ್‌ ವಿವರಣೆ ಮಾದರಿಯ ರಂಗವೇದಿಕೆಯಿದೆ. ಹಾಗೇ ಬಹಳಷ್ಟು ದೇಶಗಳಲ್ಲಿ ನಮ್ಮ ಸಂಸ್ಕೃತಿ ಎತ್ತಿ ಹಿಡಿಯುವ ಸಂಗ್ರಹಾಲಯಗಳನ್ನು ನಿರ್ಮಿಸಲಾಗಿದೆ. ಅದೇ ಭಾರತದಲ್ಲಿ ಭರತಮುನಿ ಉಲ್ಲೇಖಿಸಿದಂತಹ ರಂಗಮಂಚವು ಸೃಷ್ಟಿಯಾಗಬೇಕಿದೆ. ನಾಟ್ಯಶಾಸ್ತ್ರ ಕೇವಲ ನೃತ್ಯಕ್ಕೆ ಸಂಬಂಧಿ ಸಿದ್ದಲ್ಲ, ಅದರಲ್ಲಿ ವೇದಗಳ ಉಲ್ಲೇಖವು ಇದೆ. ಒಬ್ಬ ವ್ಯಕ್ತಿಯ ಸರ್ವತೋ ಮುಖ ಬೆಳವಣಿಗೆಗೆ ಅದು ಪೂರಕವಾಗಿದೆ ‘ ಎಂದರು.

ನೆಹರು ಸೆಂಟರ್‌ನ ನಿರ್ದೇಶಕರು ಹಾಗೂ ಪ್ರಸಿದ್ಧ ಲೇಖಕಾಗಿರುವ ಅಮಿಶ್‌ ತ್ರಿಪಾಠಿಯವರು ಮಾತ ನಾಡುತ್ತಾ, ಇದು ಒಂದು ಶೈಕ್ಷಣಿಕ ಹಾಗೂ ಸ್ಫೂರ್ತಿದಾಯಕ ಕಾರ್ಯ ಕ್ರಮ. ಇಂತಹ ವಿದ್ವಾಂಸರು ಇಲ್ಲಿ ಬಂದು ಮಾತನಾಡುವುದೇ ನಮ್ಮ ಸೌಭಾಗ್ಯದ ವಿಷಯ’ ಎಂದರು.

ಭವನದ ನಿರ್ದೇಕರಾದ ನಂದ ಕುಮಾರ ಮಾತನಾಡಿ ನಾವು ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಸಿದ್ಧ ಲೇಖಕ ಜಾನ್‌ ಫ್ಯಾರ್ಡೊನ್‌ ಪರಂಪರೆಯನ್ನು ಉಳಿಸುವ ಕುರಿತು ಮಾತನಾಡಿದರು.

ಇದೇ ವೇಳೆ 13ನೇ ಶತಮಾನದ “ಸಂಗೀತಚಂದ್ರ’ ಗ್ರಂಥವನ್ನು ಪ್ರಥಮ ಬಾರಿಗೆ ಇಂಗ್ಲಿಷ್‌ಗೆ ಅನುವಾದ ಮಾಡುವ ಪ್ರಯತ್ನವು ಸಂಸ್ಕೃತ ವಿದ್ವಾಂಸರಾದ ಡಾ| ರಾಘವೇಂದ್ರ ಹಾಗೂ ಸಂಸ್ಕೃತಿ ಸೆಂಟರ್‌ನ ನೇತೃತ್ವ ದಲ್ಲಿ ನಡೆದಿದ್ದು ಅದರ ಸುಮಾರು ನೂರಕ್ಕೂ ಹೆಚ್ಚು ಶ್ಲೋಕಗಳ ಅನುವಾದವನ್ನು ಲೋಕಾಪರ್ಣೆ ಮಾಡಲಾಯಿತು.

ಮಂಜು ಸುನಿಲ್‌ ಭರತನಾಟ್ಯ ಶೈಲಿಯಲ್ಲಿ ಪುಷ್ಪಾಂಜಲಿ, ಪ್ರಿಯಾ ಕುಶ್ವಾಹ ಕಥಕ್‌ ಶೈಲಿಯಲ್ಲಿ ಶಿವಸ್ತುತಿ ಹಾಗೂ ಡಾ| ಅಂಜಲಿ ಶರ್ಮಾ ತಿವಾರಿ ಅವರು ಜಾನಪದ ವಾದ್ಯಗಳನ್ನು ನುಡಿಸುವುದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ಆತ್ಮದೀಪ್‌ ಭಟ್ಟಾಚಾರ್ಜಿ ಅವರು ಪ್ರಾರ್ಥಿ  ಸಿ ದರು. ರಾಧಿಕಾ ಜೋಶಿ ನಿರೂಪಿಸಿ, ಸುಶೀಲ್‌ ರಾಪಾತ್ವಾರ್‌ ವಂದಿಸಿ  ದರು. ಸಂಸ್ಕೃತಿ ಸೆಂಟರ್‌ನ ಕಲ್ಚರಲ್‌ ಎಕ್ಸೆಲೆನ್ಸ್‌ನ ಸಂಸ್ಥಾಪಕಿ ರಾಗ ಸುಧಾ ವಿನಿಜಮೂರಿ ಕಾರ್ಯಕ್ರಮ ವನ್ನು ಸಂಯೋಜಿಸಿದ್ದರು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.