![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Aug 5, 2023, 6:54 PM IST
ಹೊಸದಿಲ್ಲಿ: ವಾರಾಣಸಿ ಯ ಜ್ಞಾನವಾಪಿ ಮಸೀದಿಯಲ್ಲಿ ನಡೆಯುತ್ತಿರುವ ಎಎಸ್ಐ ಸಮೀಕ್ಷೆ ನಡೆಯುತ್ತಿರುವ ವೇಳೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ತೀಕ್ಷ್ಣ ಹೇಳಿಕೆ ನೀಡಿದ್ದು ಹಲವರ ಗಮನ ಸೆಳೆದಿದೆ. ಡಿಸೆಂಬರ್ 23 ಅಥವಾ ಡಿಸೆಂಬರ್ 6 ರಂತಹ ದುರದೃಷ್ಟಕರ ಘಟನೆಗಳು ಪುನರಾವರ್ತನೆಯಾಗುವ ಭಯವಿದೆ ಎಂದು ಹೇಳಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಓವೈಸಿ, ಎಎಸ್ಐ ಸಮೀಕ್ಷೆಯ ನಂತರ ಬಿಜೆಪಿ ಹೊಂದಿಸಬಹುದಾದ ಸಂಭಾವ್ಯ ನಿರೂಪಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.ಸಮೀಕ್ಷೆಯ ಪರಿಣಾಮಗಳು ಮತ್ತು ಮಸೀದಿಯ ಧಾರ್ಮಿಕ ಸ್ವರೂಪದ ಮೇಲೆ ಅದರ ಪರಿಣಾಮದ ಬಗ್ಗೆ ಚಿಂತಿತರಾಗಿದ್ದೇವೆ. ಬಾಬರಿ ಮಸೀದಿ ಧ್ವಂಸಕ್ಕೆ ಹೋಲುವ ಘಟನೆಗಳಿಗೆ ಸಾಕ್ಷಿಯಾಗಲು ಬಯಸುವುದಿಲ್ಲ ಎಂದು ಹೇಳಿದರು.
ಮಸೀದಿಯ ಧಾರ್ಮಿಕ ಮಹತ್ವ ಹಾಗೆಯೇ ಉಳಿಯುತ್ತದೆಯೇ ಅಥವಾ ಬದಲಾವಣೆಗೆ ಒಳಗಾಗುತ್ತದೆಯೇ ಎಂದು ಅವರು ಪ್ರಶ್ನಿಸಿದರು. ಇದಲ್ಲದೆ, ಮಸೀದಿಯಲ್ಲಿ ಪ್ರಾರ್ಥನೆಯನ್ನು ಸ್ಥಗಿತಗೊಳಿಸಲಾಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಾಲ್ಕು ವರ್ಷಗಳ ಬಗ್ಗೆ ಕೇಳಿದಾಗ “ನಮ್ಮ ಮೂವರು ಸೈನಿಕರನ್ನು ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ಹತ್ಯೆಗೈದಿದ್ದಾರೆ ಮತ್ತು ನೀವು ಪಾಕಿಸ್ತಾನ ದೊಂದಿಗೆ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ಆಡುತ್ತೀರಾ ಎಂದು ಪ್ರಶ್ನಿಸಿದರು.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ವಾರಾಣಸಿಯ ಐತಿಹಾಸಿಕ ಮಸೀದಿಯ ಆವರಣದಲ್ಲಿ ಸಮಗ್ರ ಸಮೀಕ್ಷೆಯನ್ನು ನಡೆಸುತ್ತಿದೆ. ಶುಕ್ರವಾರ ಆರಂಭವಾದ ಸಮೀಕ್ಷೆಯು ಮುಸ್ಲಿಂ ಕಡೆಯ ಅರ್ಜಿಯ ನಂತರ ಅದನ್ನು ನಿಲ್ಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಹೊರತಾಗಿಯೂ ಪ್ರಾರಂಭಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.