ವಾರಾಹಿ ನೀರಾವರಿ ಯೋಜನೆ ವೇಗ ಆಮೆಗತಿ

ಬಗೆಹರಿಯದ 12.74 ಕಿ.ಮೀ. ಡೀಮ್ಡ್ ಫಾರೆಸ್ಟ್‌ ಸಮಸ್ಯೆ

Team Udayavani, Aug 6, 2023, 12:49 AM IST

dam

ಉಡುಪಿ: ವಾರಾಹಿ ನೀರಾವರಿ ಯೋಜನೆಯ ಗಾತ್ರ ವರ್ಷದಿಂದ ವರ್ಷಕ್ಕೆ ಹಿಗ್ಗುತ್ತ ಹೋಗುತ್ತಿದ್ದು, ಇದುವರೆಗಿನ ಸರಕಾರ ಗಳು ಯೋಜನೆಯಲ್ಲಿನ ರಕ್ಷಿತಾರಣ್ಯ/ಡೀಮ್ಡ್ ಫಾರೆಸ್ಟ್‌ ಸಮಸ್ಯೆಯನ್ನು ಇತ್ಯರ್ಥಪಡಿಸಲು ಹೆಚ್ಚಿನ ಆಸಕ್ತಿ ವಹಿಸದ ಕಾರಣ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ.

ರಕ್ಷಿತಾರಣ್ಯ/ಡೀಮ್ಡ್ ಫಾರೆಸ್ಟ್‌ ಪ್ರದೇಶದಲ್ಲಿ ಕಾಮಗಾರಿ ನಡೆಸಲು ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಪ್ರಸ್ತಾವನೆ ಕೂಡ ಅರಣ್ಯ ಇಲಾಖೆಯ ಕೇಂದ್ರ ಕಚೇರಿಯಲ್ಲೇ ಉಳಿದುಕೊಂಡಿದೆ.

ವಾರಾಹಿ ಮುಖ್ಯ ಕಾಲುವೆ, ಎರಡು ಉಪಕಾಲುವೆಯಲ್ಲಿ 12.74 ಕಿ.ಮೀ. ದೂರದ ಕಾಮಗಾರಿ ಡೀಮ್ಡ್ ಫಾರೆಸ್ಟ್‌/ ರಕ್ಷಿತಾರಣ್ಯದ ಕಾರಣದಿಂದ ಬಾಕಿಯಾಗಿದೆ. ಸರಕಾರ ಮಧ್ಯಪ್ರವೇಶಿಸಿ ಅರಣ್ಯ, ಕಂದಾಯ ಹಾಗೂ ನೀರಾವರಿ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕಿದೆ. ಈಗಾಗಲೇ ಯೋಜನೆಯ ಗಾತ್ರ 9 ಕೋ.ರೂ.ಗಳಿಂದ 1302 ಕೋ.ರೂ.ಗಳಿಗೆ ದಾಟಿದೆ.

ಯೋಜನೆಯಡಿ ಈವರೆಗೆ 6,110 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಸೃಷ್ಟಿಸಲಾಗಿದೆ. ಆವಶ್ಯವಿರುವ 2,388 ಎಕ್ರೆ ಜಮೀನಿನಲ್ಲಿ 1,745 ಎಕ್ರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ವಾರಾಹಿ ಏತನೀರಾವರಿ ಯೋಜನೆಯಡಿ ಜಾಕ್‌ವೆಲ್‌, ಪಂಪ್‌ಹೌಸ್‌, ಡೆಲಿವರಿ ಛೇಂಬರ್‌, ಸಬ್‌ಸ್ಟೇಷನ್‌ ಮತ್ತು ವಿದ್ಯುತ್‌ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. 9.63 ಮುಖ್ಯ ಕಾಲುವೆಯಲ್ಲಿ 2.22 ಕಿ.ಮೀ. ಪೂರ್ಣಗೊಂಡಿದ್ದು 7.41 ಬಾಕಿಯಿದೆ. 10.50 ಕಿ.ಮೀ ದೂರದ ಉಪ ಕಾಲುವೆ -1ರಲ್ಲಿ 6.82 ಕಿ.ಮೀ. ಪೂರ್ಣಗೊಂಡಿದ್ದು 3.68 ಕಿ.ಮೀ ಬಾಕಿಯಿದೆ. 6.64 ಕಿ.ಮೀ. ದೂರದ ಉಪಕಾಲುವೆ-2ರಲ್ಲಿ 4.99 ಕಿ.ಮೀ. ಪೂರ್ಣಗೊಂಡಿದ್ದು 1.65 ಕಾಮಗಾರಿ ಬಾಕಿಯಿದೆ. ರಕ್ಷಿತಾರಣ್ಯ/ ಡೀಮ್ಡ್ ಪ್ರದೇಶದ ವ್ಯಾಪ್ತಿಯಲ್ಲಿ ಭೂಮಿ ಕುರಿತು ಅರಣ್ಯ ಇಲಾಖೆಗೆ ಪ್ರಸ್ತಾವನೆ ಹೋಗಿದೆ. ಅಲ್ಲಿಂದ ಅನುಮತಿ ಇನ್ನೂ ಬಂದಿಲ್ಲ.

ಏತ ನೀರಾವರಿ
ವಾರಾಹಿ ಯೋಜನೆಯಡಿ ಐದು ಏತ ನೀರಾವರಿ ಯೋಜನೆಗಳು ಬರುತ್ತವೆ. ಅದರಲ್ಲಿ 3 ಪೂರ್ಣಗೊಂಡಿದ್ದು ಎರಡು ಟೆಂಡರ್‌ ಅನುಮೋದನೆ ಹಂತದಲ್ಲಿದೆ. 1,730 ಹೆಕ್ಟೇರ್‌ ಪ್ರದೇಶಕ್ಕೆ ನೀರು ಪೂರೈಸುವ ಸೌಪರ್ಣಿಕ ನೀರಾವರಿ ಯೋಜನೆ 64.65 ಕೋ.ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. 1,350 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುವ ಸೌಕೂರು ಏತ ನೀರಾವರಿ ಯೋಜನೆ 73.71 ಕೋ.ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. 1,500 ಹೆಕ್ಟೇರ್‌ ಪ್ರದೇಶಕ್ಕೆ ನೀರು ಪೂರೈಸುವ ಎಣ್ಣೆಹೊಳೆ ಏತ ನೀರಾವರಿ ಯೋಜನೆ 108 ಕೋ.ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. 1,200 ಹೆಕ್ಟೇರ್‌ ಪ್ರದೇಶಕ್ಕೆ ನೀರು ಒದಗಿಸುವ ಸಿದ್ದಾಪುರ ಏತ ನೀರಾವರಿ ಯೋಜನೆಗೆ 190 ಕೋ.ರೂ. ಅಂದಾಜುಪಟ್ಟಿ ಹಾಗೂ 1,100 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುವ ಸ್ವರ್ಣಾ ಏತ ನೀರಾವರಿ ಯೋಜನೆಗೆ 188 ಕೋ.ರೂ. ಅಂದಾಜುಪಟ್ಟಿ ಸಿದ್ಧಪಡಿಸಿ, ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಎರಡು ಏತ ನೀರಾವರಿ ಯೋಜನೆ ಸದ್ಯ ಟೆಂಡರ್‌ ಅನುಮೋದನೆ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.

15,702 ಹೆಕ್ಟೇರ್‌ನಲ್ಲಿ 120 ಕಿ.ಮೀ. ವಾರಾಹಿ ಅಚ್ಚುಕಟ್ಟು
ಬಲದಂಡೆ ಸಾಮಾನ್ಯ ನಾಲೆ ಒಟ್ಟು 42.73 ಕಿ.ಮೀ. ಉದ್ದವಿದ್ದು 1,992 ಹೆಕ್ಟೇರ್‌ ಪ್ರದೇಶ ಒಳಗೊಳ್ಳಲಿದೆ. ಎಡದಂಡೆ ನಾಲೆ 44.35 ಕಿ.ಮೀ. ಉದ್ದವಿದ್ದು 10,987 ಹೆಕ್ಟೇರ್‌ ಹಾಗೂ ಏತ ನೀರಾವರಿ ಕಾಲುವೆ 33 ಕಿ.ಮೀ. 2,723 ಹೆಕ್ಟೇರ್‌ ಪ್ರದೇಶವನ್ನು ಒಳಗೊಳ್ಳಲಿದೆ. ಒಟ್ಟಾರೆಯಾಗಿ 120 ಕಿ.ಮೀ. ನಾಲೆ/ ಕಾಲುವೆಯು 15,702 ಹೆಕ್ಟೇರ್‌ ಪ್ರದೇಶವನ್ನು ಒಳಗೊಳ್ಳಲಿದೆ.

ವಾರಾಹಿ ಬಲದಂಡೆ ಸಾಮಾನ್ಯ ನಾಲೆಯ 18.72 ಕಿ.ಮೀ ಉದ್ದದ ಕಾಲುವೆ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದೆ. ಆದರೆ 24.05 ಕಿ.ಮೀ. ಉದ್ದದ ಕಾಲುವೆ ನಿರ್ಮಾಣ ಕಾಮಗಾರಿ ಇನ್ನು ಆರಂಭವಾಗಿಲ್ಲ. ವಾರಾಹಿ ಎಡದಂಡೆಯ 43.45 ಕಿ.ಮೀಃ ಉದ್ದದ ಕಾಲುವೆ ಹಾಗೂ 147 ಕಿ.ಮೀ ಇದ್ದದ ವಿತರಣ ನಾಲೆಯಲ್ಲಿ 20.35 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. 52.95 ಕಿ.ಮೀ. ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಕ ಹಂತದಲ್ಲಿ ಬಾಕಿಯಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ವಾರಾಹಿ ಯೋಜನೆ ಸಂಬಂಧ ಸಮಗ್ರ ಮಾಹಿತಿ ಎಂಜಿನಿಯರ್‌ಗಳ ಮೂಲಕ ಪಡೆಯಲಾಗಿದೆ. ರಕ್ಷಿತಾರಣ್ಯ/ಡೀಮ್ಡ್ ಫಾರೆಸ್ಟ್‌ಗಳಲ್ಲಿ ಕಾಮಗಾರಿ ನಡೆಸಲು ಅನುಮತಿ ಕೋರಿ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಆದಷ್ಟು ಬೇಗ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು.
– ಡಾ| ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ, ಉಡುಪಿ

 ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

PM-Modi-Myizzu

Relationship Build: ರಾಜಧಾನಿ ಬೆಂಗಳೂರಲ್ಲಿ ಮಾಲ್ದೀವ್ಸ್‌ ದೂತಾವಾಸ ಕಚೇರಿ ಶೀಘ್ರ ಸ್ಥಾಪನೆ

Hebri1

Hebri Cloud Burst: ಇಂಥ ದುರಂತ, ಪ್ರವಾಹ ಈ ಹಿಂದೆ ಆಗಿದ್ದೇ ನೆನಪಿಲ್ಲವೆಂದ ಹಿರಿಯರು

Horoscope: ನಯವಂಚಕರ ಕುತಂತ್ರಕ್ಕೆ ಸೋಲು ಆಗಲಿದೆ

Horoscope: ನಯವಂಚಕರ ಕುತಂತ್ರಕ್ಕೆ ಸೋಲು ಆಗಲಿದೆ

Kanaka-Durga

Famous Goddess Temple: ಅಭಯಪ್ರದಾಯಿನಿ ಶಕ್ತಿಮಾತೆ ಕನಕದುರ್ಗಾ ದೇವಾಲಯ

1-tirr

Tirupati; ಹೆಚ್ಚುವರಿ 250 ಟನ್‌ ನಂದಿನಿ ತುಪ್ಪಕ್ಕೆ ಟಿಟಿಡಿ ಬೇಡಿಕೆ!

Court-Symbol

Manjeshwara: ಚುನಾವಣ ತಕರಾರು; ಕೆ. ಸುರೇಂದ್ರನ್‌ ಸಹಿತ 6 ಮಂದಿ ದೋಷಮುಕ್ತ

IPL 2

IPL-2025;ಹರಾಜು ಯುಎಇ ಬದಲಿಗೆ ಬೇರೊಂದು ಅರಬ್ ರಾಷ್ಟ್ರದಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hebri1

Hebri Cloud Burst: ಇಂಥ ದುರಂತ, ಪ್ರವಾಹ ಈ ಹಿಂದೆ ಆಗಿದ್ದೇ ನೆನಪಿಲ್ಲವೆಂದ ಹಿರಿಯರು

Kaup

Ucchila Dasara: ಕರಾವಳಿಯ 108 ವೀಣಾವಾದಕರಿಂದ ಶತವೀಣಾವಲ್ಲರಿ

Manipal-Rain

Heavy Rain: ಅನಿರೀಕ್ಷಿತ ಸಿಡಿಲು ಮಳೆಗೆ ದಂಗಾದ ಉಡುಪಿ

MGM-govinda-Bhat

Udupi: ʼಯಕ್ಷಗಾನ ಕಲಾವಿದನಾಗಿ ಪ್ರತಿಹಂತದಲ್ಲಿ ಕಲಿವ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದೆʼ

puttige-2

Udupi; ಗೀತಾರ್ಥ ಚಿಂತನೆ 58-ಒಳ್ಳೆಯ ಕೆಲಸ, ಕೆಟ್ಟ ಕೆಲಸ: ಸಜ್ಜನ, ದುರ್ಜನ ಲಕ್ಷಣ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

PM-Modi-Myizzu

Relationship Build: ರಾಜಧಾನಿ ಬೆಂಗಳೂರಲ್ಲಿ ಮಾಲ್ದೀವ್ಸ್‌ ದೂತಾವಾಸ ಕಚೇರಿ ಶೀಘ್ರ ಸ್ಥಾಪನೆ

Hebri1

Hebri Cloud Burst: ಇಂಥ ದುರಂತ, ಪ್ರವಾಹ ಈ ಹಿಂದೆ ಆಗಿದ್ದೇ ನೆನಪಿಲ್ಲವೆಂದ ಹಿರಿಯರು

Horoscope: ನಯವಂಚಕರ ಕುತಂತ್ರಕ್ಕೆ ಸೋಲು ಆಗಲಿದೆ

Horoscope: ನಯವಂಚಕರ ಕುತಂತ್ರಕ್ಕೆ ಸೋಲು ಆಗಲಿದೆ

Kanaka-Durga

Famous Goddess Temple: ಅಭಯಪ್ರದಾಯಿನಿ ಶಕ್ತಿಮಾತೆ ಕನಕದುರ್ಗಾ ದೇವಾಲಯ

1-tirr

Tirupati; ಹೆಚ್ಚುವರಿ 250 ಟನ್‌ ನಂದಿನಿ ತುಪ್ಪಕ್ಕೆ ಟಿಟಿಡಿ ಬೇಡಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.