![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Aug 6, 2023, 5:52 PM IST
ಜೂಜು ಮತ್ತು ಬೆಟ್ಟಿಂಗ್ ಮಾಫಿಯಾ ಯುವ ಜನರನ್ನು ಹೇಗೆ ಹಾಳು ಮಾಡುತ್ತದೆ. ಅದರ ಹಿಂದೆ ಬಿದ್ದವರು ಮುಂದೆ ಏನೆಲ್ಲಾ ತೊಂದರೆ ಅನುಭವಿಸುತ್ತಾರೆ ಎಂಬ ಅಂಶದೊಂದಿಗೆ ಈ ವಾರ ತೆರೆಗೆ ಬಂದಿರುವ ಚಿತ್ರ “ಈ ಪಟ್ಟಣಕ್ಕೆ ಏನಾಗಿದೆ’.
ಇಲ್ಲಿನ ನಾಯಕ ರಾತ್ರೋರಾತ್ರಿ ಶ್ರೀಮಂತನಾಗುತ್ತಾನೆ, ಮೋಜು-ಮಸ್ತಿ, ಶೋಕಿ ಜೀವನ ನಡೆಸುತ್ತಾನೆ. ಇದಕ್ಕೆಲ್ಲಾ ಕಾರಣ ಏನು, ಮುಂದೆ ಅವನ ಲೈಫ್ನಲ್ಲಿ ಏನೇನು ತಿರುವುಗಳು ಬರುತ್ತವೆ ಎಂಬ ಅಂಶದೊಂದಿಗೆ ಈ ಚಿತ್ರ ಸಾಗುತ್ತದೆ. ರವಿ ಸುಬ್ಬರಾವ್ ಚಿತ್ರವನ್ನು ನಿರ್ದೇಶಿಸಿ, ನಟಿಸಿದ್ದಾರೆ.
ಇಡೀ ಸಿನಿಮಾವನ್ನು ನೈಜವಾಗಿ ಕಟ್ಟಿಕೊಡಬೇಕೆಂಬ ಅವರ “ಹಂಬಲ’ ತೆರೆಮೇಲೆ ಎದ್ದು ಕಾಣುತ್ತದೆ. ಅದರ ಪರಿಣಾಮವಾಗಿಯೇ ಸಿನಿಮಾದಲ್ಲಿ ಅತಿರೇಕದ, ಫ್ಯಾಮಿಲಿ ಆಡಿಯನ್ಸ್ಗೆ ಮುಜುಗರ ತರುವ ಸಾಕಷ್ಟು ದೃಶ್ಯಗಳಿವೆ. ಅತಿಯಾದ ಹಸಿಬಿಸಿ ದೃಶ್ಯ, ಸಂಭಾಷಣೆ, ಪಾತ್ರಧಾರಿಗಳ ವರ್ತನೆ… ಬೇಸರ ತರಿಸದೇ ಇರದು. ಸಿನಿಮಾವನ್ನು ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಟ್ಟಿಕೊಡಬೇಕೆಂಬ ನಿರ್ದೇಶಕ ರವಿ ಅವರ “ಉದ್ದೇಶ’ವೇ ಇದಕ್ಕೆ ಕಾರಣ.
ಇನ್ನು, ಬೆಂಗಳೂರಿನಿಂದ ಆರಂಭವಾಗುವ ಬೆಟ್ಟಿಂಗ್ ದಂಧೆ, ಮುಂಬೈ, ಕೋಲ್ಕತ್ತಾ ದುಬೈವರೆಗೂ ಸಾಗುತ್ತದೆ.ಇಲ್ಲಿನ ಒಂದಷ್ಟು ರೋಚಕ ದೃಶ್ಯಗಳನ್ನು ಸಿನಿಮಾದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಇನ್ನು, ಚಿತ್ರದಲ್ಲಿ ನಟಿಸಿರುವ ರವಿ ಸುಬ್ಬರಾವ್, ರಾಧಿಕಾ ರಾಮ್, ರಿತೇಶ್, ಸತೀಶ್ ಶೆಟ್ಟಿ ಪ್ರತಿಯೊಬ್ಬರು ನೈಜವಾಗಿ ನಟಿಸಲು ಪ್ರಯತ್ನಿಸಿದ್ದಾರೆ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.