Press Conference ನಾನು ವಿಪಕ್ಷಗಳ ಮಿತ್ರ: ಸ್ಪೀಕರ್‌ ಯು.ಟಿ. ಖಾದರ್‌


Team Udayavani, Aug 9, 2023, 6:45 AM IST

Press Conference ನಾನು ವಿಪಕ್ಷಗಳ ಮಿತ್ರ: ಸ್ಪೀಕರ್‌ ಯು.ಟಿ. ಖಾದರ್‌

ಬೆಂಗಳೂರು: ನಾನು ವಿಪಕ್ಷಗಳ ಮಿತ್ರ. ಹಾಗಿದ್ದರೂ ನನ್ನ ಮೇಲೆ ವಿಪಕ್ಷಗಳಿಗೆ ಅನುಮಾನ ಹೆಚ್ಚಿರುತ್ತದೆ. ನಾನು ವಿಪಕ್ಷಗಳು ಚರ್ಚೆಯಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಅವಕಾಶ ನೀಡುತ್ತೇನೆ. ಏಕೆಂದರೆ ವಿಪಕ್ಷಗಳು ಸಕ್ರಿಯವಾಗಿ ಪಾಲ್ಗೊಂಡರೆ ಸರಕಾರದ ಆಡಳಿತ ಉತ್ತಮಗೊಳ್ಳುತ್ತದೆ. ಸರಕಾರ ರೂಪಿಸುವ ಕಾಯ್ದೆಗಳಲ್ಲಿನ ನ್ಯೂನತೆ ಪರಿಹಾರಗೊಳ್ಳುತ್ತದೆ ಆದರೆ ಮಸೂದೆ ಮಂಡನೆ ಪ್ರಕ್ರಿಯೆ ಸಂದರ್ಭದಲ್ಲಿ ಸರಕಾರದ ಪರ ಇರುವುದು ಅನಿವಾರ್ಯ ಎಂದು ವಿಧಾನಸಭೆಯ ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದರು.

ಮಂಗಳವಾರ ಬೆಂಗಳೂರು ಪ್ರಸ್‌ಕ್ಲಬ್‌ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನನಗೆ ಸಂವಿಧಾನ ಮತ್ತು ಸದನ ನಡೆಸುವ ನೀತಿ ನಿಯಮಗಳು ಮುಖ್ಯ. ನಾನು ಅದರಂತೆ ಕಾರ್ಯನಿರ್ವಹಿಸುತ್ತೇನೆ. ಆದರೆ ಕೆಲವು ಸಂದರ್ಭದಲ್ಲಿ ನೀತಿ ಮತ್ತು ಸಂಪ್ರದಾಯಗಳ ಮಧ್ಯೆ ತಾಕಲಾಟ ನಡೆಯುತ್ತದೆ. ಕಲಾಪದ ಸಂದರ್ಭದಲ್ಲಿ ಪ್ಲೇ ಕಾರ್ಡ್‌ಗಳನ್ನು ಪ್ರದರ್ಶಿಸುವ ಹಾಗಿಲ್ಲ. ಆದರೂ ಹಿಂದಿನಿಂದಲೂ ಪ್ಲೇ ಕಾರ್ಡ್‌ಗಳನ್ನು ತೆಗೆದುಕೊಂಡು ಧರಣಿ ನಡೆಸುವ ಸಂಪ್ರದಾಯವಿದೆ ಎಂದು ಹೇಳಿದರು.

ಕಳೆದ ಅಧಿವೇಶನದಲ್ಲಿ ನಡೆದ ಶಾಸಕರ ಅಮಾನತು ಪ್ರಕರಣ ಈಗ ಮುಗಿದುಹೋಗಿರುವ ವಿಚಾರ. ಶಾಸಕರನ್ನು ಅಮಾನತು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಸೂಚನೆ ಅಥವಾ ಸನ್ನೆಯನ್ನು ಮಾಡಿಲ್ಲ. ಇದು ನನ್ನದೇ ತೀರ್ಮಾನ ಎಂದು ಖಾದರ್‌ ಹೇಳಿದರು.

ಜನರೊಂದಿಗಿನ ಒಡನಾಟ ಮತ್ತು ಸ್ಪೀಕರ್‌ ಸ್ಥಾನದಲ್ಲಿ ಯಾವುದು ಎಂಬ ಆಯ್ಕೆ ನೀಡಿದರೆ ನಾನು ಜನರೊಂದಿಗಿನ ಒಡನಾಟವನ್ನು ಆಯ್ದುಕೊಳ್ಳುತ್ತೇನೆ, ಸ್ಪೀಕರ್‌ ಆದ ಬಳಿಕ ಜನರೊಂದಿಗಿನ ಒಡನಾಟ ಶೇ. 20ರಷ್ಟು ಕಡಿಮೆಯಾಗಿದೆ. ಆದರೂ ನಾನು ಶಿಷ್ಟಾಚಾರದೊಳಗೆ ಬಂಧಿಯಾಗದೆ ಈಗಲೂ ನನ್ನ ಕ್ಷೇತ್ರ ಉಳ್ಳಾಲದಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದೇನೆ. ಸ್ಪೀಕರ್‌ ಹುದ್ದೆಯ ಅಧಿಕಾರವನ್ನು ನಾನು ಸದನದೊಳಗೆ ಮಾತ್ರ ಬಳಸುತ್ತಿದ್ದೇನೆ ಎಂದರು.

ವಿಧಾನ ಸೌಧ ಪ್ರವೇಶಕ್ಕೆ ನೂತನ ವ್ಯವಸ್ಥೆ
ವಿಧಾನ ಸೌಧದೊಳಗೆ ಪ್ರವೇಶ ವ್ಯವಸ್ಥೆಗೆ ಕಾಯಕಲ್ಪ ನೀಡಲಾಗುವುದು. ಈ ಬಗ್ಗೆ ಈಗಾಗಲೇ ವಿಧಾನ ಸಭೆ ಸಚಿವಾಲಯ, ಗೃಹ ಇಲಾಖೆಯ ಜತೆ ಸಮಾಲೋಚನೆ ನಡೆಸುತ್ತೇನೆ. ಒಬ್ಬ ವ್ಯಕ್ತಿ ಎಷ್ಟು ಗಂಟೆಗೆ ವಿಧಾನ ಸೌಧ ಪ್ರವೇಶಿಸಿದ, ಎಷ್ಟು ಗಂಟೆಗೆ ಹೊರ ಹೋದ ಎಂಬ ಮಾಹಿತಿ ಲಭ್ಯವಾಗುವ ರೀತಿಯಲ್ಲಿ ಹಾಗೆಯೇ ಜನಸಾಮಾನ್ಯರಿಗೆ ಹೊರೆ ಆಗದಂತೆ ನೂತನ ವ್ಯವಸ್ಥೆ ಜಾರಿಗೊಳಿಸುವುದಾಗಿ ಖಾದರ್‌ ಅವರು ಭರವಸೆ ನೀಡಿದರು.

ಟ್ರೋಲ್‌ಗೆ ಹೆದರದೇ ಕನ್ನಡ ಪರಿಪಕ್ವಗೊಳಿಸುವೆ
ನನ್ನ ಕನ್ನಡ ಭಾಷೆಯ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡಿದ್ದರು. ನಮ್ಮದು ಪುಸ್ತಕದಲ್ಲಿರುವ ಕನ್ನಡ. ನಾನು ಶಾಲೆಯಲ್ಲಿ ಮಾತ್ರ ಕನ್ನಡ ಬಳಸುತ್ತಿದ್ದೆ. ನಮ್ಮೂರಿನಲ್ಲಿ ಹಿಂದೂಗಳು ತುಳು, ಮುಸಲ್ಮಾನರು ಬ್ಯಾರಿ, ಕ್ರಿಶ್ಚಿಯನ್ನರು ಕೊಂಕಣಿ ಮಾತನಾಡುತ್ತಾರೆ. ಆದರೆ ವ್ಯವಹಾರಿಕವಾಗಿ ಎಲ್ಲರೂ ತುಳುವನ್ನು ಬಳಸುತ್ತಾರೆ. ತುಳುವರು ಎಲ್ಲಿ ಹೋದರೂ ತುಳುವಲ್ಲೇ ಮಾತನಾಡುತ್ತಾರೆ. ನನ್ನ ಕನ್ನಡದ ಉಚ್ಚರಣೆಯಲ್ಲಿ ಸಮಸ್ಯೆ ಇರಬಹುದು. ಆದರೆ ಟ್ರೋಲ್‌ಗ‌ಳನ್ನು ಸವಾಲನ್ನಾಗಿ ತೆಗೆದುಕೊಂಡು ನನ್ನ ಕನ್ನಡವನ್ನು ಪರಿಪಕ್ವಗೊಳಿಸುತ್ತೇನೆ ಎಂದು ಖಾದರ್‌ ಹೇಳಿದರು.

 

ಟಾಪ್ ನ್ಯೂಸ್

1-frr

Munirathna ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರಕಾರ

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

1-dsad

Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್‌ನಲ್ಲಿ ಸಿಲುಕಿಕೊಂಡ ಮಹಿಳೆ!!

CHandrababu-Naidu

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-frr

Munirathna ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರಕಾರ

1-weewqe

Road roller ಅಡಿಯಲ್ಲಿ ಸಿಲುಕಿ ಇಬ್ಬರು ದಾರುಣ ಸಾ*ವು

yatnal

BJP; ರಮೇಶ ಜಾರಕಿಹೊಳಿ ಸಿಟ್ಟು ಕಡಿಮೆಯಾಗಿಲ್ಲ,ಅವರ ನಿರ್ಧಾರಕ್ಕೆ ಬದ್ಧ: ಯತ್ನಾಳ್

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್

crime (2)

Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-bcci

INDvBAN Day 3: 515 ರನ್ ಚೇಸ್ ; ಬಾಂಗ್ಲಾ 4 ವಿಕೆಟ್ ನಷ್ಟಕ್ಕೆ 158 ರನ್

Bantwal: ನೇಣು ಬಿಗಿದು ಆತ್ಮಹತ್ಯೆ

Bantwal: ನೇಣು ಬಿಗಿದು ಆತ್ಮಹತ್ಯೆ

9

Uppur: ಮೃತದೇಹ ಪತ್ತೆ

8

Bantwal: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

1-adsdasd

America; ಮಕ್ಕಳ ಆಸ್ಪತ್ರೆಗಾಗಿ ನಿಧಿ ಸಂಗ್ರಹಕ್ಕೆ ನಾಟ್ಯ ಸೇವಾ ಕಾರ್ಯಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.