Tamannaah Bhatia: ಓಡೋಡಿ ಬಂದು ನಟಿ ತಮನ್ನಾರನ್ನು ಮುಟ್ಟಿದ ಅಭಿಮಾನಿ; ಮುಂದೆ ಆದದ್ದು..
Team Udayavani, Aug 9, 2023, 1:40 PM IST
ಮುಂಬಯಿ: ಮಿಲ್ಕಿ ಬ್ಯೂಟಿ ತಮನ್ನಾ ಅವರಿಗೆ ಸೌತ್ ನಲ್ಲಿ ಮಾತ್ರವಲ್ಲದೆ, ಉತ್ತರ ಭಾರತದಲ್ಲೂ ದೊಡ್ಡ ಅಭಿಮಾನಿಗಳ ವರ್ಗವಿದೆ. ಇತ್ತೀಚೆಗೆ ತಮನ್ನಾ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.
ತಮನ್ನಾ ʼ ಲಸ್ಟ್ ಸ್ಟೋರೀಸ್ 2ʼ ನಲ್ಲಿನ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ಇತ್ತೀಚೆಗೆ ರಿಲೀಸ್ ಆಗಿರುವ ʼಜೈಲರ್-2ʼ ಚಿತ್ರದ ʼ ಕಾವಾಲಯ್ಯʼ ಹಾಡಿನಲ್ಲಿ ಮೈ ಚಳಿ ಬಿಟ್ಟು ಹೆಜ್ಜೆ ಹಾಕಿರುವುದು ಪಡ್ಡೆ ಹುಡುಗರ ಗಮನ ಸೆಳೆದಿದೆ.
ಸಿನಿಮಾ ತಾರೆರೊಂದಿಗೆ ಅಲ್ಲಲ್ಲಿ ಅಭಿಮಾನಿಗಳು ಸೆಲ್ಫಿ ಹಾಗೂ ಫೋಟೋಗಳನ್ನು ತೆಗೆಸಿಕೊಳ್ಳಲು ಮುಗಿಬೀಳುತ್ತಾರೆ. ಕೆಲ ಕಲಾವಿದರು ಇದಕ್ಕೆ ಕೂಲ್ ಆಗಿಯೇ ಪೋಸ್ಟ್ ಕೊಟ್ಟು, ಅಭಿಮಾನಿಗಳನ್ನು ಖುಷಿಯಾಗಿಸುತ್ತಾರೆ. ಆದರೆ ಕೆಲವರು ಮಾತ್ರ ಉಡಾಫೆಯಾಗಿ ಮಾತನಾಡುವುದು ಅಥವಾ ಯಾವ ಪ್ರತಿಕ್ರಿಯೆಯನ್ನೂ ನೀಡದೆ ಇರುವುದನ್ನು ನೋಡಿದ್ದೇವೆ.
ಇತ್ತೀಚೆಗೆ ನಟಿ ತಮನ್ನಾ ಅವರ ಅಭಿಮಾನಿಯೊಬ್ಬ ಓವರ್ ಎಕ್ಸೈಟ್ ಆಗಿ ವರ್ತಿಸಿದ ರೀತಿಯನ್ನು ನೋಡಿ ತಮನ್ನಾ ಆ ಸ್ಥಿತಿಯನ್ನು ಕೂಲ್ ಆಗಿಯೇ ಹ್ಯಾಂಡಲ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಭಿಮಾನಿಗಳು ತನ್ನ ಮೆಚ್ಚಿನ ನಟ- ನಟಿಯರನ್ನು ಮುಖತಃ ನೋಡಿ ಅವರೊಂದಿಗೆ ಫೋಟೋ ಕ್ಲಿಕ್ಕಿಸುವಾಗ ಕೆಲವೊಮ್ಮೆ ಅತೀ ಆನಂದಗೊಳ್ಳುತ್ತಾರೆ. ಇದು ಕೆಲವೊಮ್ಮೆ ಕಲಾವಿದರನ್ನು ಪೇಚಿಗೆ ಸಿಲುಕಿಸುತ್ತದೆ. ಇಂಥದ್ದೇ ಸನ್ನಿವೇಶ ತಮನ್ನಾ ಅವರೊಂದಿಗೆ ಇತ್ತೀಚೆಗೆ ನಡೆದಿದೆ.
ನಟಿ ತಮನ್ನಾ ಗ್ರೀನ್ ಸೀರೆಯಲ್ಲಿ ಬಂದು, ನೆರೆದಿದದ್ದ ಅಭಿಮಾನಿಗಳತ್ತ ಕೈ ಮಾಡಿದ್ದಾರೆ. ಇದೇ ವೇಳೆ ಒಬ್ಬ ಅಭಿಮಾನಿ ಹಾಕಿದ ಬ್ಯಾರಿಕೇಡ್ ನ್ನು ದೂಡಿಕೊಂಡು ಓಡಿ ಬಂದು ನೇರವಾಗಿ ತಮನ್ನಾ ಅವರ ಕೈಯನ್ನೇ ಹಿಡಿದಿದ್ದಾನೆ. ತಮನ್ನಾ ಅವರು ಅಭಿಮಾನಿಯ ಓವರ್ ಎಕ್ಸೈಟ್ ಮೆಂಟ್ ನ್ನು ನೋಡಿ ವಿಚಲಿತರಾಗದೆ ಕೂಲ್ ಆಗಿಯೇ ಆತನೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಸೆಕ್ಯೂರಿಟಿಗಳನ್ನು ಅಭಿಮಾನಿಯನ್ನು ಬದಿ ತಂದಿದ್ದಾರೆ.
ಕೊನೆಗೆ ತಮನ್ನಾ ಅವರು ಆ ಅಭಿಮಾನಿಯೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟು ಆತನನ್ನು ಖುಷಿಯಾಗಿಸಿದ್ದಾರೆ. ತಮನ್ನಾ ಅವರ ಈ ವರ್ತನೆಗೆ ನೆಟ್ಟಿಗರು ಶ್ಲಾಫಿಸಿದ್ದಾರೆ.
ಅಭಿಮಾನಿಗಳನ್ನು ನೋಡಿ ಕೆಲ ಬಿಟೌನ್ ಸ್ಟಾರ್ ಗಳು ಪೇಚಿಗೆ ಸಿಲುಕಿದ್ದುಂಟು. ಮಲೈಕಾ ಆರೋರಾ ಅವರು ಮುಂಬಯಿ ಏರ್ ಪೋರ್ಟ್ ನಲ್ಲಿ ಅಭಿಮಾನಿಯೊಬ್ಬರಿಂದ ಪೇಚಿಗೆ ಸಿಲುಕಿದ್ದರು. ಇನ್ನು ನಟ ಆದಿತ್ಯ ರಾಯ್ ಕಪೂರ್ ಅವರಿಗೆ ಯುವತಿಯೊಬ್ಬಳು ಮುತ್ತು ನೀಡಲು ಬಂದಿದ್ದಾಗ, ಅವರು ಪೇಚಿಗೆ ಸಿಲುಕಿದ್ದ ಸನ್ನಿವೇಶ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Govinda: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಡಿಸ್ಚಾರ್ಜ್
Border 2: ಸನ್ನಿ ಡಿಯೋಲ್ ʼಬಾರ್ಡರ್-2ʼಗೆ ʼಫೌಜಿʼಯಾಗಿ ಬಂದ ಸುನಿಲ್ ಶೆಟ್ಟಿ ಪುತ್ರ
Bollywood Actor Govinda: ಬಾಲಿವುಡ್ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು
‘Emergency’ ದೃಶ್ಯ ಕಡಿತಕ್ಕೆ ಕಂಗನಾ ಸಮ್ಮತಿ: CBFC
Tusshar Kapoor: ʼಗೋಲ್ ಮಾಲ್ʼ ನಟ ತುಷಾರ್ ಕಪೂರ್ ಫೇಸ್ಬುಕ್ ಖಾತೆ ಹ್ಯಾಕ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ
Bengaluru: ಕುಡಿದು ಜಗಳ ಮಾಡಿದ ಸ್ನೇಹಿತನ ಕತ್ತು ಹಿಸುಕಿ ಹತ್ಯೆ
Bengaluru: ಮೆಡಿಕಲ್ ಸೀಟು ಕೊಡಿಸುವುದಾಗಿ 1.57 ಕೋಟಿ ರೂ. ವಂಚನೆ!
ಕೇಂದ್ರದಿಂದ ರಾಜ್ಯ ಸರ್ಕಾರದ ಅಸ್ಥಿರ ಪ್ರಯತ್ನ ಎಂಬುದು ಕಾಂಗ್ರೆಸ್ ನ ಭ್ರಮೆ: ಸಂಸದ ಜಿಗಜಿಣಗಿ
Bengaluru: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ದೋಷಾರೋಪ ಪಟ್ಟಿ ಸಲ್ಲಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.