Desi Swara: Palm Jumeirah island-ವಿಸ್ಮಯದ ಪಾಮ್‌ ಜುಮೇರಾ ದ್ವೀಪ

ವಿಶಿಷ್ಟ ವಿನ್ಯಾಸದಿಂದ ತನ್ನತ್ತ ಸೆಳೆಯುವ ಸುಂದರ ನಗರ

Team Udayavani, Aug 14, 2023, 12:57 PM IST

Desi Swara: Palm Jumeirah island-ವಿಸ್ಮಯದ ಪಾಮ್‌ ಜುಮೇರಾ ದ್ವೀಪ

ವಿಸ್ತಾರವಾದ ಭೂಮಿಯಲ್ಲಿ ಹರಡಿಕೊಂಡಿರುವುದು ಬರೀ ಮರಳೆ. ಈ ಮರಳಿನಲ್ಲಿ ಏನು ಮಾಡಲು ಸಾಧ್ಯ ಎಂದು ಅಂದುಕೊಳ್ಳುವವರಿಗೆ ಅಚ್ಚರಿಯಾಗಿ ಕಾಣುವುದು ದುಬೈನ ನಗರಗಳು. ಮರಳು ಭೂಮಿಯಲ್ಲೇ ಗಗನಚುಂಬಿ ಕಟ್ಟಡಗಳು ಇಲ್ಲಿ ತಲೆಯೆತ್ತಿವೆ. ಈ ಕಟ್ಟಡಗಳು ತಮ್ಮ ವಿನ್ಯಾಸಕ್ಕೆ ಹೆಸರುವಾಸಿ. ಎಲ್ಲರೂ ಹುಬ್ಬೇರಿಸಿ ನೋಡುವಂತಹ ವಿಭಿನ್ನ, ವಿಶೇಷ ವಿನ್ಯಾಸಗಳನ್ನು ಹೊಂದಿವೆ. ಅಂತಹದ್ದೇ ಅಚ್ಚರಿಯ ವಿನ್ಯಾಸ ದುಬೈನ ಮಾನವ ನಿರ್ಮಿತ ದ್ವೀಪ ಪಾಮ್‌ ಜುಮೇರಾ.

ಅರಬ್‌ ಸಂಯುಕ್ತ ಸಂಸ್ಥಾನದ ವಾಣಿಜ್ಯ ನಗರ ದುಬೈ ಗಿನ್ನೆಸ್‌ ದಾಖಲೆಗಳ ಸರಮಾಲೆಯನ್ನೇ ಧರಿಸಿರುವ ನಗರ. ದುಬೈ ಎಂದರೆ ತನ್ನದೇ ವಿಶಿಷ್ಟ ವಾಸ್ತುಶಿಲ್ಪಗಳಿಗೆ ಹೆಸರುವಾಸಿ. ಗಗನ ಚುಂಬಿ ಕಟ್ಟಡ ಸಮೂಹ, ವಿಶಾಲ ಸ್ವತ್ಛ ಕಡಲತೀರ, ಬೃಹತ್‌ ಬಂದರು, ನಯನ ಮನೋಹರ ಉದ್ಯಾನವನಗಳು. ಸಾಂಪ್ರದಾಯಿಕ ವಾಸ್ತು ಶಿಲ್ಪಗಳ ಶ್ರೀಮಂತಿಕೆಯಿಂದ ಕೂಡಿರುವ ನಗರದಲ್ಲಿ 250 ವಿವಿಧ ದೇಶದ ವಾಸಿಗಳು ಅನಿವಾಸಿ ಪ್ರಜೆಗಳಾಗಿ ನೆಲೆಸಿದ್ದಾರೆ.

ಸಾಹಸಿ ಪ್ರವೃತ್ತಿಯ ದುಬೈ ಹಲವು ದಾಖಲೆಗಳನ್ನು ತನ್ನೊಡಲಿಗೆ ಸೇರಿಸಿಕೊಂಡಿದ್ದು ಇನ್ನಷ್ಟು ದಾಖಲೆಗಳನ್ನು ಮಾಡುವ ತವಕದಲ್ಲಿದೆ. ದುಬೈಗೆ ಹೋಗುವವರಿಗೆ ಇಲ್ಲಿ ಭೇಟಿ ನೀಡಲು ಹಲವು ಸ್ಥಳಗಳಿವೆ. ಅದರಲ್ಲೂ ಕೆಲವು ತಾಣಗಳಿಗೆ ಒಮ್ಮೆಯಾದರೂ ಹಾಜರಿ ಹಾಕಲೇಬೇಕು. ಅದರಲ್ಲೂ ಇಲ್ಲಿನ ಆಡಳಿತ ವ್ಯವಸ್ಥೆ ಮಾನವ ನಿರ್ಮಿತ ದ್ವೀಪ ಸಮೂಹವನ್ನು ನಿರ್ಮಿಸುವ ಸಾಹಸಕ್ಕೆ ಕೈ ಹಾಕಿತ್ತು.

ಸುಮಾರು 520 ಕಿ.ಮೀ. ಉದ್ದದ ಅರೆಬಿಯನ್‌ ಗಲ್ಫ್ ಕಡಲ ತೀರದಲ್ಲಿ ಸಮುದ್ರದ ನಡುವಿನಲ್ಲಿ ಪಾಮ್‌ ಜುಮೇರಾ ಎನ್ನುವ ದ್ವೀಪವನ್ನು ನಿರ್ಮಿಸಿದೆ. 2001ರಲ್ಲಿ ಆರಂಭವಾದ ಇದರ ನಿರ್ಮಾಣ 2006ರಲ್ಲಿ ಪೂರ್ಣಗೊಂಡಿತ್ತು. ಈ ದ್ವೀಪವನ್ನು ಕಂಡರೆ ಇದು ಮಾನವ ನಿರ್ಮಿತವೇ ಎಂದು ಉದ್ಘಾರಿಸಬೇಕಾಗುತ್ತದೆ. ಅಷ್ಟು ನೈಪುಣ್ಯತೆಯಿಂದ ನಿಸರ್ಗ ನಿರ್ಮಿತವಾದಂತೆ ಇದನ್ನು ಕಟ್ಟಲಾಗಿದೆ. ದುಬೈನ ಪ್ರಸಿದ್ಧ ನಕೀಲ್‌ ಕಂಪೆನಿಯ ವಿನ್ಯಾಸ ಹಾಗೂ ಡಚ್‌ ಕಂಪೆನಿಗಳಾದ ವ್ಯಾನ್‌ ಊಡ್‌ರ್‌ ಮತ್ತು ಬಾಸ್ಕೈಲ್‌ ಕಂಪೆನಿಗಳ ಸಹಕಾರದೊಂದಿಗೆ ನಿರ್ಮಿಸಲಾಗಿದೆ. ಈ ದ್ವೀಪದ ವಿನ್ಯಾಸವೇ ವಿಶೇಷವಾದದ್ದು. ಖರ್ಜೂರದ ಆಕೃತಿಯ ಕಲಾಕೃತಿಯನ್ನು ಬೃಹತ್‌ ಶಿಲಾಬಂಡೆ ಕಲ್ಲುಗಳನ್ನು ಹಾಗೂ ಮರಳುಗಳನ್ನು ಉಪಯೋಗಿಸಿ ನಿರ್ಮಿಸಲಾಗಿದೆ.

ಸ್ಟೀಲ್‌ ಮತ್ತು ಸಿಮೆಂಟ್‌ ಕಾಂಕ್ರೀಟ್‌ನ್ನು ಇಲ್ಲಿ ಬಳಸಲಾಗಿಲ್ಲ. ಖರ್ಜೂರದ ಆಕೃತಿಯಲ್ಲಿರುವ ಕಾರಣ ಇದಕ್ಕೆ ಪಾಮ್‌ ದ್ವೀಪ ಎಂದು ಹೆಸರಿಸಲಾಗಿದೆ. ಸುಮಾರು 1380 ಎಕ್ರೆಯಷ್ಟು ಜಾಗದಲ್ಲಿ ಈ ದ್ವೀಪವಿದೆ. ಪಾಮ್‌ ಮರದ ಆಕೃತಿಯ ವಿನ್ಯಾಸದ ಸುತ್ತಳತೆ ಹದಿನೇಳು ಕಿ.ಮೀ. ಉದ್ದವಿದ್ದು ಐದು ಕಿ.ಮೀ. ವ್ಯಾಸದಲ್ಲಿದೆ. ಅಂದರೆ ಆರುನೂರು ಫುಟ್‌ಬಾಲ್‌ ಮೈದಾನದಷ್ಟು ಇದೆ. 21ನೇ ಶತಮಾನದಲ್ಲಿ ಅತ್ಯಂತ ಹೆಚ್ಚು ಹಣ ವ್ಯಯಿಸಿರುವ ಯೋಜನೆ ಇದಾಗಿದೆ. ಮಾನವ ನಿರ್ಮಿತ ಪಾಮ್‌ ಜುಮೇರಾದಲ್ಲಿ 2009ರಲ್ಲಿ ಐನೂರು ಕುಟುಂಬಗಳು ಸ್ವಂತ ವಸತಿ ಬಂಗಲೆಯ ಮಾಲಕತ್ವವನ್ನು ಪಡೆದುಕೊಂಡರು. ಪ್ರಸ್ತುತ ಹತ್ತು ಸಾವಿರಕ್ಕಿಂತಲೂ ಹೆಚ್ಚು ಜನ ವಾಸವಾಗಿದ್ದಾರೆ.

ಕಡಲ ಮಧ್ಯಭಾದಲ್ಲಿ ನಿರ್ಮಾಣವಾಗಿರುವ ಖರ್ಜೂರ ಮರದ ಮೇಲ್ಭಾಗದ ಆಕೃತಿಯು ಕಡಲ ತೀರದ ಮುಖ್ಯ ಭೂಭಾಗಕ್ಕೆ ಮರದ ಬುಡ ಸಂಪರ್ಕ ಕಲ್ಪಿಸಿದೆ. ಪಾಮ್‌ ಜುಮೇರಾಕ್ಕೆ ತಲುಪಲು ಮುಖ್ಯ ರಸ್ಥೆಯಲ್ಲಿ ಚಲಿಸುವ ವಾಹನಗಳು ಮರದ ಬುಡದ ಭೂ ಭಾಗದ ಕೆಳಗಿನ ಸುರಂಗ ಮಾರ್ಗದ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ದುಬೈನ ಹೃದಯ ಭಾಗದಿಂದ ಪಾಮ್‌ ಜುಮೇರಾಕ್ಕೆ ತಲುಪಲು ಮೋನೋ ರೈಲಿನ ವ್ಯವಸ್ಥೆಯಿದೆ. ನಗರದ ಮಧ್ಯಭಾಗದಲ್ಲಿ ಎತ್ತರವಾದ ಸೇತುವೆಯಲ್ಲಿ ಒಂದೇ ಹಳಿಗಳ ಮೇಲೆ ಚಲಿಸುವ ಈ ರೈಲು ಮಧ್ಯಪ್ರಾಚ್ಯಾದ ಪ್ರಥಮ ಮೋನೊ ರೈಲು ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಎಪ್ಪತ್ತು ಕಿ.ಮೀ. ಉದ್ದದಲ್ಲಿ ಪ್ರತೀ ಹದಿನೈದು ಇಪ್ಪತ್ತು ನಿಮಿಷದ ಅಂತರದಲ್ಲಿ ಅಟ್ಲಾಂಟಿಸ್‌ ಹೊಟೇಲ್‌ನ ವರೆಗೆ ಹೋಗಿ ಹಿಂತಿರುಗುತ್ತದೆ. ಪ್ರತಿದಿನ ಈ ರೈಲು ಅಂದಾಜು ಮೂರು ಸಾವಿರದಷ್ಟು ಪ್ರಯಾಣಿಕರನ್ನು ಸಾಗಿಸುತ್ತದೆ.

ಪಾಮ್‌ ಜುಮೇರಾ ಅತ್ಯಂತ ವೈಭವಪೂರಿತ ಅಟಾಂಟಿಸ್‌ ಮತ್ತು ರಾಯಲ್‌ ಅಟ್ಲಾಂಟಿಸ್‌ ಹೊಟೇಲ್‌, ವಿಶ್ವದ ಅತೀ ದೊಡ್ಡ ಅಕ್ವೆಂಚರ್‌ ವಾಟರ್‌ ಪಾರ್ಕ್‌, ಜಲಚರಗಳ ಅಕ್ವೇರಿಯಂ, ದಿ ಪಾಯಿಂಟಿ, ಪಾಮ್‌ ಫೌಂಟೆನ್‌ ಶೋ, ಪಾಮ್‌ ಅಬ್ಸರ್ವೇಶನ್‌ ಡೆಕ್‌, ಡಾಲ್ಫಿನ್‌ ಶೋ, ಡಾಲ್ಫಿನ್‌ಗಳ ಜತೆಗೆ ಈಜಾಡುವ ವ್ಯವಸ್ಥೆ, ವಾಕಿಂಗ್‌ ಟ್ರ್ಯಾಕ್‌, ಪಾಮ್‌ ಜುಮೇರಾದ ಬಾನಂಗಳದಲ್ಲಿ ಹೆಲಿಕಾಪ್ಟರ್‌ ಯಾನ, ಬೋಟ್‌ ಟ್ರಿಪ್‌, ಹಲವಾರು ಈಜುಕೊಳಗಳನ್ನು ಒಳಗೊಂಡಿದೆ.

ವಿಶ್ವದ ಲಕ್ಷುರಿ ಬೀಚ್‌ ರೆಸಾರ್ಟ್‌ಗಳು, ಐಷಾರಾಮಿ ಆಹಾರ ಮತ್ತು ಪಾನೀಯಗಳನ್ನು ಸವಿಯಲು ಖಾಸಗಿ ಬೀಚ್‌ ವ್ಯವಸ್ಥೆ, ಸೂರ್ಯೋದಯ, ಸೂರ್ಯಾಸ್ಥಮ ಸುಂದರ ದೃಶ್ಯ ಸೊಬಗನ್ನು ಸವಿಯಲು ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ. ದುಬೈನ ಶ್ರೀಮಂತ ತಾಣಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ.

*ಬಿ. ಕೆ. ಗಣೇಶ್‌ ರೈ, ದುಬೈ

ಟಾಪ್ ನ್ಯೂಸ್

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

1-aaaa

Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

IFFI: ನವೆಂಬರ್ 20 ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

1-aaaa

Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ

Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.