
KSCA Maharaja Trophy: ಪದಾರ್ಪಣೆ ಪಂದ್ಯದಲ್ಲಿ ಶಿವಮೊಗ್ಗ ತಂಡಕ್ಕೆ ಜಯ
ಮಂಗಳೂರು ಡ್ರ್ಯಾಗನ್ಸ್ ವಿರುದ್ಧ 9 ರನ್ ಜಯ
Team Udayavani, Aug 14, 2023, 11:14 PM IST

ಬೆಂಗಳೂರು: ಇದೇ ಮೊದಲ ಬಾರಿ ಕೆಎಸ್ಸಿಎ ಮಹಾರಾಜ ಟಿ20 ಟ್ರೋಫಿಯಲ್ಲಿ ಕಣಕ್ಕಿಳಿದ ಶಿವಮೊಗ್ಗ ಲಯನ್ಸ್- ಮಂಗ ಳೂರು ಡ್ರ್ಯಾಗನ್ಸ್ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದವು. ಇಬ್ಬರ ಪೈಕಿ ಗೆದ್ದಿದ್ದು ಶಿವಮೊಗ್ಗ ಲಯನ್ಸ್ ತಂಡ.
ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ 20 ಓವರ್ಗಳಲ್ಲಿ 5 ವಿಕೆಟ್ ಕಳೆದು ಕೊಂಡು 176 ರನ್ ಗಳಿಸಿತು. ಇದಕ್ಕೆ ಉತ್ತರ ನೀಡಲು ಹೊರಟ ಮಂಗಳೂರು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತು. ಶಿವಮೊಗ್ಗ 9 ರನ್ಗಳ ಜಯ ಸಾಧಿಸಿತು.
ಶಿವಮೊಗ್ಗ ಪರ ನಾಯಕ ಶ್ರೇಯಸ್ ಗೋಪಾಲ್ ಉತ್ತಮ ಬ್ಯಾಟಿಂಗ್ ನಡೆಸಿದರು. ಅಭಿನವ್ ಮನೋಹರ್ ಸ್ಫೋಟಕ ಆಟವಾಡಿದರು. ಶ್ರೇಯಸ್ 32 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ಸಹಿತ 46 ರನ್ ಗಳಿಸಿದರು. ಮನೋಹರ್ 25 ಎಸೆತಗಳಲ್ಲಿ 1 ಬೌಂಡರಿ, 5 ಸಿಕ್ಸರ್ ಸಿಡಿಸಿದರು. ಇಬ್ಬರ ಪೈಕಿ ಮನೋಹರ್ ಆಟ ಬಿರುಸಾಗಿತ್ತು. ಇದು ತಂಡದ ಮೊತ್ತವನ್ನು ಏರಿಸಲು ನೆರವಾಯಿತು. ರೋಹನ್ ಕದಮ್, ನಿಹಾಲ್ ಉಲ್ಲಾಳ್ ಕ್ರಮವಾಗಿ 27, 28 ರನ್ ಗಳಿಸಿದರು.
ಮಂಗಳೂರು ತಂಡದ ಮಧ್ಯಮ ವೇಗದ ಬೌಲರ್ ಎಂ.ಜಿ.ನವೀನ್ ಶಿವಮೊಗ್ಗವನ್ನು ನಿಯಂತ್ರಿಸಲು ಬಲವಾದ ಯತ್ನ ನಡೆಸಿದರು. ಕೇವಲ 19 ರನ್ನಿಗೆ 4 ವಿಕೆಟ್ ಪಡೆದ ಅವರು, ಕೊನೆಯ ಓವರ್ನಲ್ಲಿ 2 ವಿಕೆಟ್ ಕಿತ್ತರು. ಉಳಿದ ಬೌಲರ್ಗಳಿಗೆ ಯಶಸ್ಸು ಸಿಗಲಿಲ್ಲ.
ಇದಕ್ಕೆ ಉತ್ತರಿಸಲು ಹೊರಟ ಮಂಗಳೂರು ಪರ ಕೆ.ಸಿದ್ಧಾರ್ಥ 46, ಅನಿರುದ್ಧ ಜೋಷಿ 50 ರನ್ ಗಳಿಸಿದರು. ಇಬ್ಬರೂ ಉತ್ತಮವಾಗಿಯೇ ಆಡಿದರೂ, ಉಳಿದವರು ಆ ಮಟ್ಟದಲ್ಲಿ ಮಿಂಚಲಿಲ್ಲ. ಶಿವಮೊಗ್ಗ ಬೌಲಿಂಗ್ನಲ್ಲಿ ಸಂಘಟಿತ ಯಶಸ್ಸು ಸಾಧಿಸಿತು.
ಹುಬ್ಬಳ್ಳಿಗೆ 7 ವಿಕೆಟ್ ಜಯ
ಸೋಮವಾರ ನಡೆದ 2ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ 7 ವಿಕೆಟ್ಗಳಿಂದ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗ 19.3 ಓವರ್ಗಳಲ್ಲಿ 138 ರನ್ನಿಗೆ ಆಲೌಟಾಯಿತು. ಹುಬ್ಬಳ್ಳಿ ಪರ ಮನ್ವಂತ್ ಕುಮಾರ್ (3), ಕೆ. ವಿದ್ವತ್ (2), ಲಾವಿಶ್ ಕೌಶಲ್ (2) ಉತ್ತಮ ಬೌಲಿಂಗ್ ನಡೆಸಿದರು. ಇದನ್ನು ಬೆನ್ನತ್ತಿದ ಹುಬ್ಬಳ್ಳಿ 15.2 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿತು. ತಂಡದ ಪರ ಲವ್ನಿàತ್ ಸಿಸೋಡಿಯ 61, ಕೃಷ್ಣನ್ ಶ್ರೀಜಿತ್ 47 ರನ್ ಸಿಡಿಸಿದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!

WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ

R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ಹೊಸ ಸೇರ್ಪಡೆ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.