Anantnag; ಅನಂತ ಕೋಪ: ಪತಿಯ ಕೋಪದ ಬಗ್ಗೆ ಹೇಳಿದ ಗಾಯತ್ರಿ ಅನಂತ್ನಾಗ್
Team Udayavani, Aug 15, 2023, 2:31 PM IST
“ಅವರ ಕೋಪನಾ ನೀವು ನೋಡಿಲ್ಲ, ಅದೊಂಥರ ಜ್ವಾಲಾಮುಖೀ ಇದ್ದಂತೆ. ಯಾವಾಗ ಸ್ಫೋಟವಾಗುತ್ತೋ ಗೊತ್ತಾಗಲ್ಲ…’ – ಅನಂತ್ ನಾಗ್ ಅವರಿಗೆ ಕೋಪ ಬರಲ್ವಾ ಎಂಬ ಪ್ರಶ್ನೆ ಎದುರಾಗುತ್ತಿದ್ದಂತೆ ಅವರ ಪತ್ನಿ ಗಾಯತ್ರಿ ಅನಂತ್ನಾಗ್ ತಮ್ಮ ಪತಿಯ ಕೋಪದ ಬಗ್ಗೆ ಹೀಗೆ ಹೇಳಿದರು.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಿರೂಪಕರು ಅನಂತ್ನಾಗ್ ಅವರನ್ನು, “ನಿಮಗೆ ಕೋಪ ಬರಲ್ವಾ’ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದು ಅನಂತ್ನಾಗ್ ಪತ್ನಿ ಗಾಯತ್ರಿ. “ಅವರಿಗೆ ಸಿಕ್ಕಾ ಪಟ್ಟೆ ಕೋಪ ಬರುತ್ತೆ. ಯಾವುದಕ್ಕೆ ಕೋಪ ಬರುತ್ತೆ ಎಂದು ಹೇಳುವಂತಿಲ್ಲ. ಅಡುಗೆ ಸರಿಯಾಗಿಲ್ಲಂದ್ರೂ ಕೋಪ ಬರುತ್ತೆ, ಅವರಿಟ್ಟ ಪುಸ್ತಕ ಆಚೀಚೆ ಆದರೂ ಕೋಪ ಬರುತ್ತೆ, ಮನೆಯ ವಸ್ತುಗಳು ಅಸ್ತವ್ಯಸ್ತ ಇದ್ದರೂ ಕೋಪಬರುತ್ತೆ… ಅವರ ಕೋಪ ಒಂಥರಾ ಜ್ವಾಲಾಮುಖೀ ತರಹ.. ಯಾವಾಗ ಸ್ಫೋಟವಾಗುತ್ತೋ ಗೊತ್ತಾಗಲ್ಲ’ ಎನ್ನುತ್ತಾ ಅನಂತ್ ನಾಗ್ ಕೋಪಕ್ಕೆ ಸಂಬಂಧಿಸಿದ ಘಟನೆಯೊಂದನ್ನು ವಿವರಿಸಿದರು.
“ಅವರಿಗೆ ಮನೆಯಲ್ಲಷ್ಟೇ ಅಲ್ಲ, ಕೆಲವೊಮ್ಮೆ ಹೊರಗಡೆಯೂ ಸಿಟ್ಟು ಬರುತ್ತದೆ. ಒಮ್ಮೆ ನಾವು ಊಟಕ್ಕೆಂದು ಹೋಟೆಲ್ಗೆ ಹೋದೆವು. ಅಲ್ಲಿ ಇವರು ಸೌತ್ ಇಂಡಿಯನ್ ಥಾಲಿ ಆರ್ಡರ್ ಮಾಡಿದರು. ಆದರೆ, ಆ ಹೋಟೆಲ್ನವನು ಸೌತ್ ಇಂಡಿಯನ್ ಥಾಲಿ ಇಲ್ಲ ಎಂದ. ಇವರಿಗೆ ಆಗ ಕೋಪ ಬಂದು, “ಕರ್ನಾಟಕದಲ್ಲಿದ್ದು ಸೌತ್ ಇಂಡಿಯನ್ ಥಾಲಿ ಇಲ್ಲಾಂದ್ರೆ ಏನ್ ಅರ್ಥ’ ಎಂದು ಅವರ ಮೇಲೆ ರೇಗಿದರು’ ಎನ್ನುತ್ತಾ ಅನಂತ್ ನಾಗ್ ಕೋಪದ ವಿವರಿಸಿದರು ಗಾಯತ್ರಿ.
ವೇದಿಕೆ ಮೇಲಿದ್ದ ಅನಂತ್ ನಾಗ್, “ನಗುತ್ತಾ ಪ್ರೀತಿ ಎಲ್ಲಿರುತ್ತೋ ಅಲ್ಲಿ ಕೋಪವೂ ಇರುತ್ತದೆ’ ಎಂದಾಗ ಸಭೆಯಲ್ಲಿ ನಗೆಬುಗ್ಗೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Royal; ಟಾಂಗ್ ಕೊಡಲು ವಿರಾಟ್ ರೆಡಿ: ದಿನಕರ್ ನಿರ್ದೇಶನದ ಸಿನಿಮಾ
Billa Ranga Baashaa: ಬಿಆರ್ಬಿಗೆ ಕಿಚ್ಚ ರೆಡಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…
Anish Tejeshwar: ‘ಮುಂದೆ ಹೇಗೋ ಏನೋ..’: ಆರಾಮ್ ಅರವಿಂದ ಸ್ವಾಮಿ ಹಾಡು ಹಬ್ಬ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.