Football: ವನಿತಾ ವಿಶ್ವಕಪ್‌ ಫುಟ್‌ಬಾಲ್‌: ಸ್ವೀಡನ್‌ಗೆ ಆಘಾತ; ಸ್ಪೇನ್‌ ಫೈನಲಿಗೆ


Team Udayavani, Aug 15, 2023, 11:22 PM IST

football

ವೆಲ್ಲಿಂಗ್ಟನ್‌: ಕೊನೆ ಕ್ಷಣದಲ್ಲಿ ಒಲ್ಗಾ ಕಾರ್ಮೊನಾ ಅವರು ಹೊಡೆದ ಗೋಲಿನ ನೆರವಿನಿಂದ ಸ್ಪೇನ್‌ ತಂಡವು ಸ್ವೀಡನ್‌ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟದ ಫೈನಲ್‌ ಹಂತಕ್ಕೇರಿತು. ಸ್ಪೇನ್‌ ಫೈನಲ್‌ ಹಂತಕ್ಕೇರಿರುವುದು ಇದೇ ಮೊದಲ ಸಲವಾಗಿದೆ.

ರವಿವಾರ ನಡೆಯುವ ಫೈನಲ್‌ ಹೋರಾಟದಲ್ಲಿ ಸ್ಪೇನ್‌ ತಂಡವು ಸಹ ಆತಿಥ್ಯ ವಹಿಸಿರುವ ಆಸ್ಟ್ರೇಲಿಯ ಅಥವಾ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ. ಈ ಎರಡು ತಂಡಗಳ ನಡುವಣ ಸೆಮಿಫೈನಲ್‌ ಹೋರಾಟವು ಬುಧವಾರ ನಡೆಯಲಿದೆ. ಮುಂದಿನ ಶನಿವಾರ ಮೂರು ಮತ್ತು ನಾಲ್ಕನೇ ಸ್ಥಾನ ನಿರ್ಣಯ ಪಂದ್ಯ ನಡೆಯಲಿದೆ.
ಗೆಲ್ಲುವ ಉತ್ಸಾಹದಿಂದಲೇ ತೀವ್ರ ಪೈಪೋಟಿಯಿಂದ ಹೋರಾಡಿದ ಸ್ವೀಡನ್‌ ತಂಡ ಸೆಮಿಫೈನಲ್‌ನಲ್ಲಿ ಮತ್ತೆ ನಿರಾಶೆ ಅನುಭವಿಸಿತು. ಪೀಟರ್‌ ಗರ್ಹಾಡ್ಸìನ್‌ ಅವರ ನೇತೃತ್ವದ ಸ್ವೀಡನ್‌ ತಂಡ ನಾಲ್ಕು ವರ್ಷಗಳ ಹಿಂದೆ ಫ್ರಾನ್ಸ್‌ನಲ್ಲಿ ನಡೆದ ವಿಶ್ವಕಪ್‌ ಹಾಗೂ ಕಳೆದ ವರ್ಷದ ಯುರೋಪಿಯನ್‌ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ ಹಂತದಲ್ಲಿ ಮುಗ್ಗರಿಸಿತ್ತು.

81ನೇ ನಿಮಿಷದಲ್ಲಿ ಗೋಲು
ಇಲ್ಲಿನ ಈಡನ್‌ ಪಾರ್ಕ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಸ್ಪೇನ್‌ ಮತ್ತು ಸ್ವೀಡನ್‌ ಪ್ರಬಲ ಹೋರಾಟ ಸಂಘಟಿಸಿದ್ದವು. ಇದರಿಂದಾಗಿ 81 ನಿಮಿಷಗಳವರೆಗೆ ಗೋಲು ರಹಿತವಾಗಿ ಪಂದ್ಯ ಸಾಗಿತ್ತು. ಈ ಹಂತದಲ್ಲಿ ಸ್ಪೇನ್‌ನ ಹದಿ ಹರೆಯದ ಸಲ್ಮಾ ಪ್ಯಾರಾಲ್ಯುಲೊ ಅಮೋಘ ಗೋಲನ್ನು ಹೊಡೆದು ಪಂದ್ಯಕ್ಕೆ ಜೀವ ತುಂಬಿದರು. ನೆದರ್ಲೆಂಡ್ಸ್‌ ವಿರುದ್ಧ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿಯೂ ಸಲ್ಮಾ ಅಮೋಘ ಆಟದ ಪ್ರದರ್ಶನ ನೀಡಿದ್ದರು.

ಸ್ಪೇನ್‌ ಮುನ್ನಡೆ ಸಾಧಿಸಿದ ಬಳಿಕ ಸ್ವೀಡನ್‌ ಆಟಗಾರ್ತಿಯರು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಸಮಬಲ ಸಾಧಿಸಲು ಹಲವು ಬಾರಿ ಪ್ರಯತ್ನ ಮಾಡಿದರು. 88ನೇ ನಿಮಿಷದಲ್ಲಿ ರೆಬೆಕಾ ಬ್ಲೋಮ್‌ಕ್ವಿಸ್ಟ್‌ ಗೋಲನ್ನು ಹೊಡೆದು ಸಮಬಲ ತಂದರು. ಆದರೆ ಈ ಉತ್ಸಾಹ ಹೆಚ್ಚು ಹೊತ್ತು ಇರಲಿಲ್ಲ. ಎರಡು ನಿಮಿಷ ಮುಗಿಯುವಷ್ಟರಲ್ಲಿ ಒಲ್ಗಾ ಕಾರ್ಮೊನಾ ಅದ್ಭುತ ಗೋಲು ಹೊಡೆದು ಸ್ಪೇನ್‌ಗೆ ಮತ್ತೆ ಮುನ್ನಡೆ ಒದಗಿಸಿದರಲ್ಲದೇ ಪಂದ್ಯ ಗೆಲ್ಲಲು ನೆರವಾದರು.

ಸರಿಯಾಗಿ ವರ್ಷದ ಹಿಂದೆ ತಂಡದ ಕೋಚ್‌ ಜಾರ್ಗ್‌ ವಿಲ್ಡಾ ಅವರನ್ನು ವಜಾಗೊಳಿಸುವಂತೆ ಸ್ಪೇನ್‌ ತಂಡದ 15 ಆಟಗಾರರು ಬೆದರಿಕೆ ಹಾಕಿದ್ದರು. ಆದರೆ ತಂಡ ವ್ಯವಸ್ಥಾಪಕರು ವಿಲ್ಡಾ ಅವರನ್ನು ಕೋಚ್‌ ಆಗಿ ಉಳಿಸಿಕೊಂಡಿದ್ದರು. ಅವರಿಂದು ಪಂದ್ಯ ಆರಂಭಗೊಳ್ಳಲು ಒಂದು ತಾಸು ಇರುವಾಗ ಅಲೆಕ್ಸಿಯಾ ಪುಟೆಲ್ಲಾಸ್‌ ಅವರ ಬದಲಿಗೆ ಪ್ಯಾರಾಲ್ಯುಲೊ ಅವರನ್ನು ಆಟವಾಡುವ ಬಳಗಕ್ಕೆ ಸೇರಿಸಿದ್ದರು. ಅವರ ಈ ನಿರ್ಧಾರದಿಂದ ಸ್ಪೇನ್‌ ಮೇಲುಗೈ ಸಾಧಿಸಿತಲ್ಲದೇ ಪ್ರಶಸ್ತಿ ಗೆಲ್ಲುವ ಸುವರ್ಣಾವಕಾಶವನ್ನು ಪಡೆದಿದೆ.

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

1-eee

International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು

ENGvsAUS: ಏಕದಿನ ಸರಣಿಗೂ ಬಟ್ಲರ್‌ ಅಲಭ್ಯ; ಎಸ್‌ಆರ್‌ಎಚ್ ಆಟಗಾರನಿಗೆ ನಾಯಕತ್ವ

ENGvsAUS: ಏಕದಿನ ಸರಣಿಗೂ ಬಟ್ಲರ್‌ ಅಲಭ್ಯ; ಎಸ್‌ಆರ್‌ಎಚ್ ಆಟಗಾರನಿಗೆ ನಾಯಕತ್ವ

ಈತನೇ ಭಾರತದ ಮುಂದಿನ ಸೂಪರ್‌ ಸ್ಟಾರ್‌ ಎಂದ ಸ್ಟೀವ್‌ ಸ್ಮಿತ್‌, ಸ್ಟಾರ್ಕ್‌

B–G Trophy: ಈತನೇ ಭಾರತದ ಮುಂದಿನ ಸೂಪರ್‌ ಸ್ಟಾರ್‌ ಎಂದ ಸ್ಟೀವ್‌ ಸ್ಮಿತ್‌, ಸ್ಟಾರ್ಕ್‌

1-trrr

Asian Champions Trophy ಸೆಮಿಫೈನಲ್‌ : ಕೊರಿಯಾ ವಿರುದ್ಧ ಭಾರತ ಫೇವರಿಟ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.