![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 18, 2023, 12:18 AM IST
ಬೆಂಗಳೂರು: “ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20′ ಪಂದ್ಯಾವಳಿಯಲ್ಲಿ ಶಿವಮೊಗ್ಗ ಲಯನ್ಸ್ ಹ್ಯಾಟ್ರಿಕ್ ಜಯದೊಂದಿಗೆ ಘರ್ಜಿಸಿದೆ. ಗುರುವಾರದ ಮೊದಲ ಪಂದ್ಯದಲ್ಲಿ ಅದು ಹಾಲಿ ಚಾಂಪಿಯನ್ ಗುಲ್ಬರ್ಗ ಮಿಸ್ಟಿಕ್ಸ್ಗೆ 3 ವಿಕೆಟ್ಗಳ ಸೋಲುಣಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ವಿಜಯ್ ಕುಮಾರ್ ವೈಶಾಖ್ ಸಾರಥ್ಯದ ಗುಲ್ಬರ್ಗ 6 ವಿಕೆಟಿಗೆ 175 ರನ್ನುಗಳ ಬೃಹತ್ ಮೊತ್ತವನ್ನೇ ಪೇರಿಸಿತ್ತು. ಶಿವಮೊಗ್ಗ ತೀವ್ರ ಕುಸಿತದ ಬಳಿಕವೂ ದಿಟ್ಟ ಹೋರಾಟ ನಡೆಸಿ 19.5 ಓವರ್ಗಳಲ್ಲಿ 7 ವಿಕೆಟಿಗೆ 179 ರನ್ ಬಾರಿಸಿತು. ಇದು ಗುಲ್ಬರ್ಗಕ್ಕೆ ಎದುರಾದ ಹ್ಯಾಟ್ರಿಕ್ ಸೋಲಿನ ಆಘಾತ.
ಚೇಸಿಂಗ್ ವೇಳೆ ಶಿವಮೊಗ್ಗ 4.3 ಓವರ್ಗಳಾಗುವಷ್ಟರಲ್ಲಿ 39 ರನ್ನಿಗೆ 5 ವಿಕೆಟ್ ಉದುರಿಸಿ ಕೊಂಡಿತ್ತು. ಸೋಲು ಖಚಿತವಾಗಿತ್ತು. ಆದರೆ ನಾಯಕ ಶ್ರೇಯಸ್ ಗೋಪಾಲ್ (52), ಅಭಿನವ್ ಮನೋಹರ್ (28), ಎಸ್. ಶಿವರಾಜ್ (ಔಟಾಗದೆ 27) ಮತ್ತು ಎಸ್.ಎಸ್. ಶರತ್ (ಔಟಾಗದೆ 31) ಅವರ ಅಮೋಘ ಬ್ಯಾಟಿಂಗ್ ಸಾಹಸದಿಂದ ಗುಲ್ಬರ್ಗ ಮೇಲೆ ತಿರುಗಿ ಬಿತ್ತು.
ಶಿವರಾಜ್-ಶರತ್ ಮುರಿಯದ 8ನೇ ವಿಕೆಟಿಗೆ 2.4 ಓವರ್ಗಳಿಂದ 39 ರನ್ ಸೂರೆಗೈದು ತಂಡಕ್ಕೆ ಅಮೋಘ ಜಯವನ್ನು ತಂದಿತ್ತರು. ಶರತ್ ಅವರಂತೂ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 11 ಎಸೆತಗಳಿಂದ 31 ರನ್ ಸಿಡಿಸಿದರು (2 ಬೌಂಡರಿ, 3 ಸಿಕ್ಸರ್). ಗುಲ್ಬರ್ಗ ಪರ ಆರಂಭಕಾರ ಆದರ್ಶ್ ಪ್ರಜ್ವಲ್ ಸರ್ವಾಧಿಕ 43, ಸ್ಮರಣ್ ಆರ್. 40 ರನ್ ಹೊಡೆದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.