Manipur ಅಫೀಮು, ವಲಸಿಗರ ಕುಮ್ಮಕ್ಕಿನಲ್ಲಿ ದಾಳಿ

ಮಣಿಪುರದ ಹಿಂದಿನ ಕಥೆ, ವಾಸ್ತವದ ವ್ಯಥೆ ಸಂವಾದದಲ್ಲಿ ಮೇ| ಮೋತಿಮಾಲಾ

Team Udayavani, Aug 18, 2023, 10:57 PM IST

manipurManipur ಅಫೀಮು, ವಲಸಿಗರ ಕುಮ್ಮಕ್ಕಿನಲ್ಲಿ ದಾಳಿ

ಮಂಗಳೂರು: ಮೈತೇಯಿ ಸಮುದಾಯದ ಮೇಲೆ ಕುಕಿಗಳು ನಿರಂತರ ಹಲ್ಲೆ, ಅತ್ಯಾಚಾರ ನಡೆಸು ತ್ತಿದ್ದಾರೆ, ಇನ್ನೊಂದೆಡೆ ಮಣಿಪುರದ ಗುಡ್ಡಗಾಡು ಪ್ರದೇಶವನ್ನು ಅಫೀಮಿಗೆ ಬೇಕಾಗುವ ಪೋಪ್ಪಿ ಎನ್ನುವ ಗಿಡ ಬೆಳೆಸುವುದಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಇದನ್ನು ವಿದೇಶಗಳಿಗೆ ಕಳ್ಳಸಾಗಾಟ ಮಾಡಲಾಗುತ್ತಿದೆ, ಯುವಜನತೆ ಅದಕ್ಕೆ ದಾಸರಾಗುತ್ತಿದ್ದಾರೆ ಎಂದು ಮಣಿಪುರದ ಪ್ರಥಮ ರಕ್ಷಾ ಮಂತ್ರಿ ಮೇಜರ್‌ ಮೋತಿಮಾಲಾ ಗ್ಯಾಂಗೋಮ್‌ ಹೇಳಿದರು.

ನಮೋ ಬ್ರಿಗೇಡ್‌ 2.0 ವತಿಯಿಂದ ಡೊಂಗರ ಕೇರಿಯಲ್ಲಿರುವ ಭುವನೇಂದ್ರ ಸಭಾಂಗಣದಲ್ಲಿ ನಡೆದ “ಮಣಿಪುರದ ಹಿಂದಿನ ಕಥೆ, ವಾಸ್ತವದ ವ್ಯಥೆ’ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮೈತೇಯಿ ಸಮುದಾಯದ ಸಂಪ್ರದಾಯ ಮತ್ತು ಸಂಸ್ಕೃತಿಗಳ ಮೇಲೆ ಕೂಡ ದಾಳಿ ಮಾಡಲಾ ಗುತ್ತಿದೆ. ಮಣಿಪುರವು ಮ್ಯಾನ್ಮಾರ್‌ ದೇಶ ದೊಂದಿಗೆ ಗಡಿ ಹಂಚಿಕೊಂಡಿದೆ. ಅಲ್ಲಿನವರೂ ಸುಲಭವಾಗಿ ಗಡಿ ಯೊಳಗೆ ಅತಿಕ್ರಮಣ ಮಾಡಿ ಬಂದು ಕುಕಿಗಳ ಜತೆ ಸೇರಿ ಮಣಿಪುರದ ಮೂಲ ನಿವಾಸಿಗಳಾದ ಮೈತೇಯಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದರು.

ವಿದೇಶಿ ಮಾಧ್ಯಮಗಳಿಂದ ಏಕಮುಖಿ ಸುದ್ದಿ
ಮಣಿಪುರ ಸಂಸ್ಕೃತಿ ವಿದ್ಯಾಲಯದ ಕಲಾ ಅಕಾಡೆಮಿ ಯುವ ಪ್ರತಿಭಾ ಪ್ರಶಸ್ತಿ ಪುರಸ್ಕೃತೆ ಡಾ|ಊರ್ಮಿಕಾ ಮಯ್ಬಾಮಾ ಅವರು ಮಾತನಾಡಿ ಮೈತೇಯಿ ಸಮುದಾಯದ ಬಳಿ ಹಣ, ಸಂಪತ್ತು ಇಲ್ಲ. 2011ರ ಜನಗಣತಿ ಆಧಾರದಲ್ಲಿ 30 ಲಕ್ಷ ಜನಸಂಖ್ಯೆ ಇತ್ತು. ಹತ್ತು ವರ್ಷಗಳಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಕುಕಿ ಸಮುದಾಯ ದವರು ದೊಡ್ಡ ಸಂಖ್ಯೆಯಲ್ಲಿ ವಲಸೆ ಬಂದಿದ್ದಾರೆ ಎಂದರು.

ಮೇ 3ರ ಮೊದಲೇ ಅಂತಾರಾಷ್ಟ್ರೀಯ ವರದಿಗಾರರು ಆಗಮಿಸಿದ್ದರು. ಮೊದಲೇ ಸರಕಾರಿ ಹುದ್ದೆಯಲ್ಲಿರುವ ಕುಕಿ ಅಧಿಕಾರಿಗಳು ರಜೆ ಮೇಲೆ ಹೋಗಿದ್ದಾರೆ. 10 ಕುಕಿ ಶಾಸಕರೂ ಮಿಜಾರಾಂಗೆ ಹೋಗಿ ಸೇರಿಕೊಂಡಿದ್ದರು. ಈ ಮೂಲಕ ಮೇ 3ರಂದು ನಡೆದ ಘಟನೆ, ಮೈತೇಯಿಗಳ ಮೇಲೆ ನಡೆದ ಹಲ್ಲೆ, ಸುವ್ಯವಸ್ಥಿತವಾಗಿ ರೂಪಿತವಾದದ್ದು, ಮಾಧ್ಯಮಗಳೂ ಏಕಪಕೀÒಯವಾಗಿ ವರದಿ ಮಾಡುತ್ತಿವೆ ಎಂದರು.

ಶೇ. 10ರಷ್ಟು ಬಯಲು ಪ್ರದೇಶದಲ್ಲಿ ಮಾತ್ರ ಮೈತೇಯಿಗಳು ಹಾಗೂ ಇತರ ಸಮುದಾಯ ನೆಲೆಸಿದ್ದರೆ ಮಣಿಪುರದ ಉಳಿದ ಶೇ. 90ರಷ್ಟು ಭೂಭಾಗವಾದ ಗುಡ್ಡಗಳಲ್ಲಿ ಕುಕಿಗಳಿದ್ದಾರೆ. ಭೂ ಸುಧಾರಣ ಕಾಯಿದೆಯ ಪ್ರಕಾರ ಮೈತೇಯಿಗಳು ಗುಡ್ಡಗಾಡು ಪ್ರದೇಶದಲ್ಲೆಲ್ಲೂ ನೆಲೆಸುವಂತಿಲ್ಲ, ಅಲ್ಲಿ ನೆಲೆಸಿದವರ ಮೇಲೆ ನಿರಂತರ ಹಲ್ಲೆ ನಡೆದಿದೆ ಎಂದರು.

ಭಾರತಿ ಸಂಜಯ್‌ ಪ್ರಭು ಸ್ವಾಗತಿಸಿ ಪ್ರಸ್ತಾವಿಸಿದರು. ಗೋಪಾಲಕೃಷ್ಣ ಭಟ್‌ ಪ್ರಾರ್ಥಿಸಿದರು. ಅರುಣ್‌ ಜಿ. ಶೇಟ್‌ ನಿರೂಪಿಸಿ ವಂದಿಸಿದರು.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.