Panchaganga Express Train: ಹೆಚ್ಚುವರಿ ಬೋಗಿಗಿಂತ ಹೊಸ ರೈಲು ಸೂಕ್ತ


Team Udayavani, Aug 19, 2023, 11:41 PM IST

trainPanchaganga Express Train: ಹೆಚ್ಚುವರಿ ಬೋಗಿಗಿಂತ ಹೊಸ ರೈಲು ಸೂಕ್ತ

ಕುಂದಾಪುರ: ಯಶವಂತಪುರ-ಕಾರವಾರ ಮಧ್ಯೆ ಪ್ರತಿದಿನ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲು ಕರಾವಳಿಗರ ಜೀವನಾಡಿಯಾಗಿದ್ದು, ಅದಕ್ಕೆ ಹೆಚ್ಚುವರಿ ಬೋಗಿ ಅಳವಡಿಸಿದರೆ ನಿಧಾನಗತಿಯ ಸಂಚಾರದಿಂದ ವಿಳಂಬವಾಗಲಿದೆ. ಅದಕ್ಕಿಂತ ಹೊಸ ರೈಲೇ ಸೂಕ್ತ ಎನ್ನುವ ಈ ಹಿಂದಿನ ಬೇಡಿಕೆಯನ್ನು ಕುಂದಾಪುರ ಹಾಗೂ ಉತ್ತರ ಕನ್ನಡ ಭಾಗದ ರೈಲು ಪ್ರಯಾಣಿಕರ ಸಮಿತಿ ಪುನರುಚ್ಚರಿಸಿದೆ.

ಬೆಂಗಳೂರಿನಿಂದ ತಡವಾಗಿ ಹೊರಟು ಬೇಗನೆ ಕರಾವಳಿ ತಲುಪುವ ಹೆಚ್ಚುವರಿ ರೈಲಿಗಾಗಿ ನಿರಂತರ ಆಗ್ರಹಿಸಲಾಗುತ್ತಿದ್ದು, ಈಗಿರುವ ಬೆಂಗಳೂರು – ಮೈಸೂರು – ಮಂಗಳೂರು ರೈಲನ್ನು ಸುರತ್ಕಲ್‌, ಉಡುಪಿ, ಮುಡೇìಶ್ವರದವರೆಗೆ ವಿಸ್ತರಣೆ ಮಾಡಿ ಅಥವಾ ವಿಶೇಷ ರೈಲನ್ನೇ ಖಾಯಂ ಮಾಡಿ ಎನ್ನುವ ಬೇಡಿಕೆ ಬಲವಾಗಿ ಕೇಳಿ ಬಂದಿದೆ.

ಸಮಸ್ಯೆಯೇನು?
14 ಬೋಗಿಗಳಿರುವ ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ಬೋಗಿ ಅಳವಡಿಸಿದರೆ ಘಾಟಿ ಪ್ರದೇಶದಲ್ಲಿ ತೀರಾ ನಿಧಾನಗತಿಯಲ್ಲಿ ಸಂಚರಿಸು ವಂತಾಗಲಿದೆ. ಘಾಟಿಯ ಕ್ರಾಸಿಂಗ್‌ನಲ್ಲಿ ಸಾಧ್ಯವಿರುವ ಅತ್ಯುತ್ತಮ ಸಮಯದಲ್ಲಿ ಬೆಂಗಳೂರು – ಕರಾವಳಿಯ ರೈಲುಗಳು ಓಡುತ್ತಿದ್ದು, ಹೆಚ್ಚುವರಿಯಾಗಿ ಕೋಚ್‌ ಹಾಕಿದರೆ ಘಾಟ್‌ ಕ್ರಾಸಿಂಗ್‌ ಸಂಪೂರ್ಣ ಹಾಳಾಗಲಿದೆ. ಅಲ್ಲಿಂದ ರೈಲುಗಳು ಕನಿಷ್ಠ 2-3 ಗಂಟೆ ಬೇಗ ಹೊರಡಬೇಕಾಗುತ್ತದೆ. ಇದಲ್ಲದೆ ಇಲ್ಲಿಂದ ಹೊರಟ ರೈಲು ಬೆಂಗಳೂರಿಗೆ ಬೆಳಗ್ಗೆ ವಿಳಂಬವಾಗಿ ತಲುಪಲಿದೆ. ಇದರಿಂದ ಊರಿನಿಂದ ಹೊರಟು ಮರು ದಿನ ಕಚೇರಿ ಕೆಲಸಕ್ಕೆ ಹೋಗುವವರಿಗೆ ಸಮಸ್ಯೆಯಾಗಲಿದೆ ಎನ್ನುವ ವಾದ ಕುಂದಾಪುರ ರೈಲು ಪ್ರಯಾಣಿಕರ ಸಮಿತಿಯದ್ದು.

ರಾಜ್ಯದ ಉಳಿದೆಡೆಗಳಿಂದ ರಾತ್ರಿ 10ಕ್ಕೆ ಹೊರಟು ಬೆಳಗ್ಗೆ 5.30ರ ವೇಳೆಗೆ ಬೆಂಗಳೂರಿಗೆ ತಲುಪುತ್ತವೆ. ಆದರೆ ಕರಾವಳಿಯ 3 ಜಿಲ್ಲೆಗಳಿಂದ ಮಾತ್ರ ಸಂಜೆ 6ಕ್ಕೆ ಹೊರಟು, ಮರು ದಿನ ಬೆಳಗ್ಗೆ 7 ಗಂಟೆಗೆ ಸುದೀರ್ಘ‌ ಪ್ರಯಾಣದ ಮೂಲಕ ತಲುಪುವ ಅನಿವಾರ್ಯ ಇದೆ. ಈಗ ಹೊಸ ಬೋಗಿ ಅಳವಡಿಸಿದರೆ ಇನ್ನೂ ವಿಳಂಬವಾಗಲಿದೆ. ಬೇಡಿಕೆ ಹೆಚ್ಚಿದ್ದರೆ ಹೊಸ ರೈಲು ಓಡಿಸಲಿ. ಇಲ್ಲದಿದ್ದರೆ ಘಾಟಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿ.
– ರಾಜೀವ್‌ ಗಾಂವ್ಕರ್‌,ಅಧ್ಯಕ್ಷರು, ಉತ್ತರ ಕನ್ನಡ ರೈಲ್ವೇ ಸೇವಾ ಸಮಿತಿ

ಪಂಚಗಂಗಾ ರೈಲು ಜನಪ್ರಿಯ ಆಗಿರುವುದೇ ಸೂಕ್ತ ವೇಳಾಪಟ್ಟಿಯ ಕಾರಣಕ್ಕೆ. ಹೆಚ್ಚುವರಿ ಕೋಚ್‌ ಹಾಕಿ, ಈಗಿನ ಸಮಯಕ್ಕೆ ಓಡಿಸಿದರೆ ಸ್ವಾಗತ. ಆದರೆ ಅದರಿಂದ 2-3 ಗಂಟೆ ವಿಳಂಬ ಸಂಚರಿಸುವಂತಾದರೆ ಖಂಡಿತ ವಿರೋಧವಿದೆ. ಜನದಟ್ಟಣೆ ಹೆಚ್ಚಿರುವುದರಿಂದ ಹೊಸ ರೈಲು ಆರಂಭಿಸುವುದೇ ಸೂಕ್ತ.
– ಗಣೇಶ್‌ ಪುತ್ರನ್‌,
ಅಧ್ಯಕ್ಷರು, ಕುಂದಾಪುರ ರೈಲು ಪ್ರಯಾಣಿಕರ ಸಮಿತಿ

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BUS driver

Bus ticket; ದೀಪಾವಳಿ ಸಂಭ್ರಮಕ್ಕೆ ಬಸ್‌ ಟಿಕೆಟ್‌ ದರ ತಣ್ಣೀರು

1-mahe

MAHE-Mangalore University ಒಡಂಬಡಿಕೆ : ಮೂಳೆ ಅಲೋಗ್ರಾಫ್ಟ್‌ಗಳ ಗಾಮಾ ವಿಕಿರಣ

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

1-ottin

Baindur; ಒತ್ತಿನೆಣೆ ತಿರುವಿನಲ್ಲಿ ಗುಡ್ಡ ಕುಸಿತ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.