![1-dee](https://www.udayavani.com/wp-content/uploads/2025/02/1-dee-1-415x221.jpg)
![1-dee](https://www.udayavani.com/wp-content/uploads/2025/02/1-dee-1-415x221.jpg)
Team Udayavani, Aug 21, 2023, 4:05 PM IST
ಬೆಂಗಳೂರು: ಪತಿ ಸ್ನಾನಕ್ಕೆಂದು ಬಾತ್ರೂಮ್ಗೆ ಹೋದಾಗ ಪತ್ನಿ ಮನೆಗೆ ಬೀಗ ಹಾಕಿಕೊಂಡು ಪ್ರಿಯಕರನ ಜತೆ ಪರಾರಿಯಾಗಿರುವ ಘಟನೆ ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ರಮೇಶ್ ಎಂಬವರು ಆರ್.ಆರ್.ನಗರ ಠಾಣೆಗೆ ದೂರು ನೀಡಿದ್ದಾರೆ. ದೂರುದಾರ ರಮೇಶ್ (31) ಎರಡು ತಿಂಗಳ ಹಿಂದಷ್ಟೇ ಅರ್ಪಿತಾ (25) ಎಂಬವರನ್ನು ವಿವಾಹವಾಗಿದ್ದರು. ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಅರ್ಪಿತಾ ಕೆಲಸ ಮಾಡುತ್ತಿದ್ದರು. ದಂಪತಿ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿದ್ದರು. ಈ ಮಧ್ಯೆ ಆ. 12ರಂದು ಬೆಳಗ್ಗೆ ರಮೇಶ್ ಸ್ನಾನಕ್ಕೆಂದು ಬಾತ್ರೂಮ್ಗೆ ಹೋಗಿದ್ದಾರೆ. ಆಗ ಅರ್ಪಿತಾ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.
ಬಾತ್ರೂಮ್ನಿಂದ ಹೊರಬಂದ ರಮೇಶ್ ಪತ್ನಿ ಕಾಣದಿದ್ದಾಗ ಗಾಬರಿಗೊಂಡು ಮನೆಯಲ್ಲಾ ಶೋಧಿಸಿದ್ದಾರೆ. ಬಳಿಕ ಮನೆ ಬಾಗಿಲು ತೆರೆಯಲು ಹೋದಾಗ ಹೊರಭಾಗದಿಂದ ಬೀಗ ಹಾಕಿಕೊಂಡಿರುವುದು ಗೊತ್ತಾಗಿದೆ. ಸ್ಥಳೀಯರ ಸಹಾಯದಿಂದ ಬಾಗಿಲು ಓಪನ್ ಮಾಡಿಸಿದ ರಮೇಶ್, ಕಾಣೆಯಾದ ಪತ್ನಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ, ಎಲ್ಲಿಯೂ ಪತ್ತೆಯಾಗಿಲ್ಲ. ಬಳಿಕ ಆಕೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಕಾರ್ತಿಕ್ ಎಂಬಾತನ ಜತೆ ಪರಿಚಯವಿತ್ತು ಎಂದು ತಿಳಿಸಿದ್ದು, ಬಳಿಕ ಆತನನ್ನು ಪ್ರಶ್ನಿಸಿದಾಗ ಆತ, ಅರ್ಪಿತಾ ಬಿಟಿಎಂ ಲೇಔಟ್ನಲ್ಲಿದ್ದಾರೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಹೋಗಿದ್ದಾನೆ. ಬಳಿಕ ಆತನ ಮೊಬೈಲ್ ನಂಬರ್ ಕೂಡ ಸ್ವಿಚ್x ಆಫ್ ಆಗಿದೆ. ಹೀಗಾಗಿ ರಮೇಶ್ ಕಾರ್ತಿಕ್ ವಿರುದ್ಧ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.