![ನನ್ನ ಮೇಲೆ ಮಾಡಿರುವ ಪ್ರತಿಯೊಂದು ಆರೋಪವೂ ಸುಳ್ಳು..ಏನೇ ಎದುರಾದರೂ ಹೆದರುವುದಿಲ್ಲ: ಶ್ರೀದೇವಿ](https://www.udayavani.com/wp-content/uploads/2024/07/8-3-415x249.jpg)
Chandrayaan 3; ಭಾರತವು ಚಂದ್ರನ ಮೇಲಿದೆ: ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹರ್ಷ
Team Udayavani, Aug 23, 2023, 7:15 PM IST
![1-wqewq](https://www.udayavani.com/wp-content/uploads/2023/08/1-wqewq-620x393.jpg)
ಬೆಂಗಳೂರು: ಚಂದ್ರಯಾನ 3 ಲ್ಯಾಂಡರ್ ಮಾಡ್ಯೂಲ್ ವಿಕ್ರಮ್ ಚಂದ್ರನ ಮೇಲೆ ಸುರಕ್ಷಿತವಾಗಿ ಮತ್ತು ಮೃದುವಾಗಿ ಇಳಿದ ಸಂಭ್ರಮದಲ್ಲಿ ‘ಭಾರತವು ಚಂದ್ರನ ಮೇಲಿದೆ’ ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.
“ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು.ನಮ್ಮ ವೈಫಲ್ಯದಿಂದ ನಾವು ಬಹಳಷ್ಟು ಕಲಿತಿದ್ದೇವೆ ಮತ್ತು ಇಂದು ನಾವು ಯಶಸ್ವಿಯಾಗಿದ್ದೇವೆ. ಚಂದ್ರಯಾನ-3 ಗಾಗಿ ನಾವು ಇಂದಿನಿಂದ ಮುಂದಿನ 14 ದಿನಗಳನ್ನು ಎದುರು ನೋಡುತ್ತಿದ್ದೇವೆ” ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ ನಿಂದ ಚಂದ್ರಯಾನ-3 ಯಶಸ್ಸಿನ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಎಸ್. ಸೋಮನಾಥ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದರು.ನಿಮ್ಮ ಹೆಸರೇ ಸೋಮನಾಥ, ಅದರ ಅರ್ಥ ಚಂದ್ರ ಎಂದರು.
ಚಂದ್ರನ ದಕ್ಷಿಣ ಧ್ರುವದ ಬಳಿ ಹೋದ ಮೊದಲ ದೇಶ ಭಾರತ ಎಂದು ಚಂದ್ರಯಾನ 3 ಮಿಷನ್ನ ಯೋಜನಾ ನಿರ್ದೇಶಕ ಪಿ. ವೀರಮುತ್ತುವೆಲ್ ಸಂಭ್ರಮ ವ್ಯಕ್ತಪಡಿಸಿದರು.
“ನನಗೆ ಮತ್ತು ನನ್ನ ತಂಡಕ್ಕೆ ಇದು ಅತ್ಯಂತ ಸ್ಮರಣೀಯ ಕ್ಷಣವಾಗಿದೆ. ಕಳೆದ ಹಲವು ವರ್ಷಗಳಿಂದ ನಾವು ಶ್ರಮಿಸಿದ್ದೇವೆ. ನಾವು ನಮ್ಮ ಗುರಿಯನ್ನು ಸಾಧಿಸಿದ್ದೇವೆ” ಎಂದು ಚಂದ್ರಯಾನ 3 ಮಿಷನ್ನ ಸಹಾಯಕ ಯೋಜನಾ ನಿರ್ದೇಶಕಿ ಕಲ್ಪನಾ ಹೇಳಿದ್ದಾರೆ.
ಬೆಂಗಳೂರಿನ ಇಸ್ರೋ ಮಿಷನ್ ಕಂಟ್ರೋಲ್ ಸೆಂಟರ್ ನಲ್ಲಿ ಚಂದ್ರಯಾನ-3 ಮಿಷನ್ ಚಂದ್ರನ ಮೇಲ್ಮೈಗೆ ಇಳಿಯುತ್ತಿದ್ದಂತೆ ಸಂಭ್ರಮಾಚರಣೆ ಆರಂಭವಾಯಿತು. ‘ವಂದೇ ಮಾತರಂ’ ಘೋಷಣೆಗಳಿಂದ ತುಂಬಿತ್ತು. ಎಲ್ಲರೂ ಗೆಲುವಿನ ಕೇಕೆ ಹಾಕಿದರು.
ಟಾಪ್ ನ್ಯೂಸ್
![ನನ್ನ ಮೇಲೆ ಮಾಡಿರುವ ಪ್ರತಿಯೊಂದು ಆರೋಪವೂ ಸುಳ್ಳು..ಏನೇ ಎದುರಾದರೂ ಹೆದರುವುದಿಲ್ಲ: ಶ್ರೀದೇವಿ](https://www.udayavani.com/wp-content/uploads/2024/07/8-3-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Thirthahalli: ಗಾಳಿ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಯಕ್ಷಗಾನ ಕಲಾವಿದನ ಮನೆ](https://www.udayavani.com/wp-content/uploads/2024/07/yakshagana-150x84.jpg)
Thirthahalli: ಗಾಳಿ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಯಕ್ಷಗಾನ ಕಲಾವಿದನ ಮನೆ
![Kumata: ಭಾರಿ ಮಳೆಗೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆ… ನೆರೆ ಭೀತಿ](https://www.udayavani.com/wp-content/uploads/2024/07/kumata-150x93.jpg)
Kumata: ಭಾರಿ ಮಳೆಗೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆ… ನೆರೆ ಭೀತಿ
![Naxal chandru- Naxal Chandru arrested after 19 years; What is the case?](https://www.udayavani.com/wp-content/uploads/2024/07/Naxal-150x86.jpg)
Naxal chandru-19 ವರ್ಷದ ಬಳಿಕ ನಕ್ಸಲ್ ಚಂದ್ರು ಸೆರೆ; ಏನಿದು ಪ್ರಕರಣ?
![PavithraGowda ದರ್ಶನ್ 2ನೇ ಪತ್ನಿಯಲ್ಲ:ವಿಜಯಲಕ್ಷ್ಮೀ-ಕಮಿಷನರ್ ಗೆ ಬರೆದ ಪತ್ರದಲ್ಲೇನಿದೆ?](https://www.udayavani.com/wp-content/uploads/2024/07/Darshan-150x94.jpg)
PavithraGowda ದರ್ಶನ್ 2ನೇ ಪತ್ನಿಯಲ್ಲ:ವಿಜಯಲಕ್ಷ್ಮೀ-ಕಮಿಷನರ್ ಗೆ ಬರೆದ ಪತ್ರದಲ್ಲೇನಿದೆ?
![Vijayapura: ಕೃಷ್ಣಾ ನದಿ ತೆಪ್ಪ ದುರಂತ… ರಫೀಕ್ ಶವ ಪತ್ತೆ, ರಕ್ಷಣಾ ಕಾರ್ಯಾಚರಣೆ ಮುಕ್ತಾಯ](https://www.udayavani.com/wp-content/uploads/2024/07/teppa-150x89.jpg)
Vijayapura: ಕೃಷ್ಣಾ ನದಿ ತೆಪ್ಪ ದುರಂತ… ರಫೀಕ್ ಶವ ಪತ್ತೆ, ರಕ್ಷಣಾ ಕಾರ್ಯಾಚರಣೆ ಮುಕ್ತಾಯ
MUST WATCH
ಹೊಸ ಸೇರ್ಪಡೆ
Shimoga; ಆರಿದ್ರಾ ಮಳೆ ಅಬ್ಬರ, ಮೈದುಂಬಿದ ತುಂಗೆ, ಶರಾವತಿ, ಭದ್ರೆ
![ನನ್ನ ಮೇಲೆ ಮಾಡಿರುವ ಪ್ರತಿಯೊಂದು ಆರೋಪವೂ ಸುಳ್ಳು..ಏನೇ ಎದುರಾದರೂ ಹೆದರುವುದಿಲ್ಲ: ಶ್ರೀದೇವಿ](https://www.udayavani.com/wp-content/uploads/2024/07/8-3-150x90.jpg)
ನನ್ನ ಮೇಲೆ ಮಾಡಿರುವ ಪ್ರತಿಯೊಂದು ಆರೋಪವೂ ಸುಳ್ಳು..ಏನೇ ಎದುರಾದರೂ ಹೆದರುವುದಿಲ್ಲ: ಶ್ರೀದೇವಿ
![Thirthahalli: ಗಾಳಿ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಯಕ್ಷಗಾನ ಕಲಾವಿದನ ಮನೆ](https://www.udayavani.com/wp-content/uploads/2024/07/yakshagana-150x84.jpg)
Thirthahalli: ಗಾಳಿ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಯಕ್ಷಗಾನ ಕಲಾವಿದನ ಮನೆ
![Karavali; ಕೋಣಗಳ ಮತ್ತೆ ಕುಳಿತ ಪ್ರಜ್ವಲ್; ಹೊಸ ಪೋಸ್ಟರ್ ಬಂತು](https://www.udayavani.com/wp-content/uploads/2024/07/karavali-150x83.jpg)
Karavali; ಕೋಣಗಳ ಮತ್ತೆ ಕುಳಿತ ಪ್ರಜ್ವಲ್; ಹೊಸ ಪೋಸ್ಟರ್ ಬಂತು
![Kumata: ಭಾರಿ ಮಳೆಗೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆ… ನೆರೆ ಭೀತಿ](https://www.udayavani.com/wp-content/uploads/2024/07/kumata-150x93.jpg)
Kumata: ಭಾರಿ ಮಳೆಗೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆ… ನೆರೆ ಭೀತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.