Gundlupete; ಓಣಂ ಆಚರಣೆ ಹಿನ್ನೆಲೆ ಕೇರಳ ಗಡಿಯಲ್ಲಿ ಅಬಕಾರಿ ಪೊಲೀಸರ ತಪಾಸಣೆ ಬಿಗಿ
Team Udayavani, Aug 25, 2023, 10:15 AM IST
ಗುಂಡ್ಲುಪೇಟೆ: ಆ.28ರಂದು ಕೇರಳದಲ್ಲಿ ಓಣಂ ಆಚರಣೆ ಹಿನ್ನಲೆ ಅಕ್ರಮ ಮದ್ಯ ಸೇರಿದಂತೆ ಇನ್ನಿತರ ಚಟುವಟಿಕೆ ಮೇಲೆ ತೀವ್ರ ನಿಗಾವಹಿಸುವ ಉದ್ದೇಶದಿಂದ ಕರ್ನಾಟಕ ಹಾಗೂ ಕೇರಳ ಅಬಕಾರಿ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿ, ಕೇರಳ ಗಡಿಯಲ್ಲಿ ವಾಹನ ತಪಾಸಣೆ ಬಿಗಿಗೊಳಿಸಿದ್ದಾರೆ.
ಬಿಸಿ ಮುಟ್ಟಿಸುತ್ತಿದ್ದಾರೆ: ಗುಂಡ್ಲುಪೇಟೆ ತಾಲೂಕಿನ ಗಡಿಗೆ ಹೊಂದಿಕೊಂಡತ್ತಿರುವ ಮುತ್ತಂಗ ಚೆಕ್ ಪೋಸ್ಟ್ನಲ್ಲಿ ಚಾಮರಾಜನಗರದ ಅಬಕಾರಿ ಪೊಲೀಸ್ ನಿರೀಕ್ಷಕರು ಹಾಗೂ ಕೇರಳದ ವೈನಾಡಿನ ಅಬಕಾರಿ ಪೊಲೀಸರು ಜಂಟಿ
ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಾರ್ಯಾಚರಣೆ ವೇಳೆ, ಕೇರಳ ಪ್ರವೇಶಿಸುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸಿ, ಅಕ್ರಮ ಮದ್ಯ ಸಾಗಾಟ ಸೇರಿದಂತೆ ಇನ್ನಿತರ ವಸ್ತು ಸಾಗಣೆ ಕಂಡು ಬಂದರೆ ಬಿಸಿ ಮುಟ್ಟಿಸುತ್ತಿದ್ದಾರೆ. ಆದರೆ, ತಪಾಸಣೆ ವೇಳೆ ಯಾವುದೇ ಮದ್ಯ ಸಾಗಾಟ ಕಂಡುಬಂದಿಲ್ಲ. ಆದರೂ, ಓಣಂ ಮುಗಿಯುವವರೆಗೆ ಹದ್ದಿನ ಕಣ್ಣಿಡಲಾಗಿದೆ ಎಂದು ಗುಂಡ್ಲುಪೇಟೆ ಅಬಕಾರಿ ನಿರೀಕ್ಷಕರಾದ ತನ್ವೀರ್ ಮಾಹಿತಿ ನೀಡಿದ್ದಾರೆ.
ಅಕ್ರಮ ಲಾಟರಿಗೂ ಕಡಿವಾಣ ಹಾಕಿ: ಕೇರಳ ಲಾಟರಿ ತಾಲೂಕಿನ ಗಡಿ ಮೂಲೆ ಹೊಳೆ ಚೆಕ್ ಪೋಸ್ಟ್ ಮೂಲಕ ಎಗ್ಗಿಲ್ಲದೆ
ಗುಂಡ್ಲುಪೇಟೆಗೆ ಬಂದು ಸೇರುತ್ತಿದೆ. ಇದರಿಂದ ಚಾಮರಾಜನಗರದಾದ್ಯಂತ ಕೇರಳ ಲಾಟರಿ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕರ್ನಾಟಕ ಪ್ರವೇಶ ಮಾಡುವ ಪ್ರತಿಯೊಂದು ವಾಹನಗಳನ್ನು ತಪಾಸಣೆಗೆ ಒಳಪಡಿಸಬೇಕೆಂದು ಪಟ್ಟಣದ ನಿವಾಸಿ ಶಿವಕುಮಾರ್ ಒತ್ತಾಯಿಸಿದ್ದಾರೆ.
*ಕೇರಳದಲ್ಲಿ ಆ.28ರಂದು ಓಣಂ ಆಚರಣೆ
*ಅಕ್ರಮ ಮದ್ಯ ಸೇರಿ ಇನ್ನಿತರ ಚಟುವಟಿಕೆ ಮೇಲೆ ತೀವ್ರ ನಿಗಾ
* ಕರ್ನಾಟಕ-ಕೇರಳ ಅಬಕಾರಿ ಜಂಟಿಯಾಗಿ ಕಾರ್ಯಾಚರಣೆ
*ಕೇರಳ ಗಡಿಯಲ್ಲಿ ವಾಹನ ತಪಾಸಣೆ ಬಿಗಿ
* ಗುಂಡ್ಲುಪೇಟೆ ಮುತ್ತಂಗ ಚೆಕ್ ಪೋಸ್ಟ್ನಲ್ಲಿ ತಪಾಸಣೆ
* ಚಾ.ನಗರ ಅಬಕಾರಿ ಪೊಲೀಸರು-ಕೇರಳ ವೈನಾಡಿನ ಅಬಕಾರಿ ಪೊಲೀಸರಿಂದ ಹೆಚ್ಚಿದ ಪರಿಶೀಲನೆ
*ಕೇರಳ ಪ್ರವೇಶಿಸುವ ಪ್ರತಿ ವಾಹನ ತಪಾಸಣೆ
*ಓಣಂ ಮುಗಿಯುವವರೆಗೆ ಪೊಲೀಸರಿಂದ ಹದ್ದಿನ ಕಣ್ಣು
* ಗುಂಡ್ಲುಪೇಟೆಗೆ ಸೇರುವ ಕೇರಳ ಲಾಟರಿ ನಿಷೇಧಕ್ಕೂ ಸ್ಥಳೀಯರಿಂದ ಹೆಚ್ಚಿದ ಆಗ್ರಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ
Cycle Ride: ಸಾಗುತ ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್ ಸವಾರಿ
Kamanur village: ದಾರಿ ತೋರುವ ಮಾದರಿ ಗ್ರಾಮ
Bigg Boss: ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.