![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 26, 2023, 9:19 PM IST
ನವದೆಹಲಿ:ಭಾರತದ ಮಹತ್ವಾಕಾಂಕ್ಷೆಯ “ಗಗನಯಾನ’ ಯೋಜನೆಯ ಭಾಗವಾಗಿ “ವ್ಯೋಮಮಿತ್ರ’ ಎಂಬ ಮಹಿಳಾ ರೊಬೋಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
ಶನಿವಾರ ಖಾಸಗಿ ಸುದ್ದಿವಾಹಿನಿಯೊಂದರ ಸಮಾವೇಶದಲ್ಲಿ ಮಾತನಾಡಿದ ಅವರು, ಅಕ್ಟೋಬರ್ ಮೊದಲ ಅಥವಾ ಎರಡನೇ ವಾರದಲ್ಲೇ ಬಾಹ್ಯಾಕಾಶನೌಕೆಯ ಪ್ರಯೋಗಿಕ ಉಡಾವಣೆ ನಡೆಯಲಿದೆ. ನಂತರದ ಪ್ರಯೋಗದಲ್ಲಿ ವ್ಯೋಮಮಿತ್ರ ರೊಬೋಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕಿನಿಂದಾಗಿ ಗಗನಯಾನ ಯೋಜನೆ ವಿಳಂಬವಾಯಿತು. ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದಷ್ಟೇ ಅಲ್ಲ, ವಾಪಸ್ ಕರೆತರುವುದೂ ಅಷ್ಟೇ ಮುಖ್ಯ. ಹೀಗಾಗಿ, ಎರಡನೇ ಆವೃತ್ತಿಯಲ್ಲಿ ಮಹಿಳಾ ರೊಬೋಟನ್ನು ಕಳುಹಿಸುತ್ತೇವೆ. ಆಕೆ ಮಾನವನು ನಡೆಸುವ ಎಲ್ಲ ಚಟುವಟಿಕೆಗಳನ್ನೂ ಅನುಸರಿಸುವ ಸಾಮರ್ಥ್ಯ ಹೊಂದಿದ್ದಾಳೆ. ಎಲ್ಲವೂ ಸಮರ್ಪಕವಾಗಿ ನಡೆದರೆ, ನಮ್ಮ ಮುಂದಿನ ಹೆಜ್ಜೆಯೂ ಸುಗಮವಾಗುತ್ತದೆ ಎಂದೂ ಸಚಿವ ಸಿಂಗ್ ಹೇಳಿದ್ದಾರೆ.
2020ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಬೆಂಗಳೂರಿನಲ್ಲಿ ವ್ಯೋಮಮಿತ್ರ ರೊಬೋಟ್ ಅನ್ನು ಅನಾವರಣಗೊಳಿಸಿತ್ತು.
ಕೈ-ಬಿಜೆಪಿ ಜಗಳ:
ಚಂದ್ರಯಾನ-3ರ ಲ್ಯಾಂಡರ್ ಚಂದ್ರನಲ್ಲಿ ಇಳಿದ ಸ್ಥಳಕ್ಕೆ ಶಿವಶಕ್ತಿ ಎಂದು ಹೆಸರು ನೀಡಲು ಪ್ರಧಾನಿ ಮೋದಿಯವರಿಗೆ ಅಧಿಕಾರ ನೀಡಿದ್ದು ಯಾರು ಎಂದು ಕಾಂಗ್ರೆಸ್ ನಾಯಕ ರಶೀದ್ ಅಳ್ವಿ ಪ್ರಶ್ನಿಸಿದ್ದಾರೆ. ಸುದ್ದಿವಾಹಿನಿಯ ಚರ್ಚೆಯ ವೇಳೆ ಅವರು ಬಗ್ಗೆ ಪ್ರಶ್ನೆಯನ್ನೆತ್ತಿದ್ದರು. “ಚಂದ್ರನ ಮೇಲಿನ ಸ್ಥಳಕ್ಕೆ ಪ್ರಧಾನಿ ಹೆಸರು ಇರಿಸುವುದು ಎಂದರೆ ಅದು ಹಾಸ್ಯಾಸ್ಪದ. ಅವರಿಗೆ ಅಂಥ ಅಧಿಕಾರ ಕೊಟ್ಟವರು ಯಾರು? ಈ ವಿಚಾರ ಕೇಳಿದ ಜಗತ್ತಿನ ಜನರು ನಮ್ಮನ್ನು ನೋಡಿ ಲೇವಡಿ ಮಾಡಲಿದ್ದಾರೆ. ಚಂದ್ರನ ದಕ್ಷಿಣ ಭಾಗದಲ್ಲಿ ಇಳಿದದ್ದು ನಮ್ಮ ಸಾಧನೆಯನ್ನು ಒಪ್ಪಿಕೊಳ್ಳೋಣ’ ಎಂದು ಹೇಳಿದ್ದಾರೆ.
ಅದಕ್ಕೆ ತಿರುಗೇಟು ನೀಡಿದ ಬಿಜೆಪಿ ನಾಯಕ ಶೆಹಜಾದ್ ಪೂನಾವಾಲ “ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವುದನ್ನು ಮತ್ತೂಮ್ಮೆ ಸ್ಪಷ್ಟಪಡಿಸಿದೆ. ಹಿಂದೊಮ್ಮೆ ಆ ಪಕ್ಷ ರಾಮ ಇದ್ದದ್ದು ಹೌದೇ ಎಂದು ಪ್ರಶ್ನೆ ಮಾಡಿತ್ತು. ಶಿವಶಕ್ತಿ ಮತ್ತು ತಿರಂಗ ಎನ್ನುವ ಹೆಸರು ದೇಶಕ್ಕೆ ಸಂಬಂಧ ಇರುವ ಹೆಸರು. ಲ್ಯಾಂಡರ್ ವಿಕ್ರಮ ಹೆಸರನ್ನು ವಿಕ್ರಂ ಸಾರಾಭಾಯಿ ಹೆಸರಿನ ನೆನಪಿನಲ್ಲಿ ನೀಡಲಾಗಿದೆ. ಯುಪಿಎ ಅವಧಿಯಲ್ಲಿ ಆಗಿದ್ದರೆ ಚಂದ್ರಯಾನಕ್ಕೆ ಇಂದಿರಾ ಪಾಯಿಂಟ್, ರಾಜೀವ್ ಪಾಯಿಂಟ್’ ಎಂದು ಹೆಸರಿಸುತ್ತಿದ್ದರು ಎಂದು ಟೀಕಿಸಿದ್ದಾರೆ. 2008ರಲ್ಲಿ ಚಂದ್ರಯಾನ-2 ಇಳಿದಿದ್ದ ಸ್ಥಳಕ್ಕೆ “ಜವಾಹರ್ಪಾಯಿಂಟ್’ ಎಂಬ ಹೆಸರು ನೀಡಲಾಗಿತ್ತು.
ಶಿವಶಕ್ತಿ ಸುತ್ತ ರೋವರ್ ಪ್ರದಕ್ಷಿಣೆ
ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ಕುರಿತಾದ ನೂತನ ವಿಡಿಯೋ ಒಂದನ್ನು ಶನಿವಾರ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಹಂಚಿಕೊಂಡಿದ್ದು, ಅದರದಲ್ಲಿ ಚಂದ್ರನ ಮೇಲ್ಮೆ„ನಲ್ಲಿ ಲ್ಯಾಂಡರ್ ಇಳಿದಿರುವ ಜಾಗ “ಶಿವಶಕ್ತಿ’ಯ ಸುತ್ತಾ ಪ್ರಜ್ಞಾನ್ ರೋವರ್ ತಿರುಗುವುದನ್ನು ಸೆರೆ ಹಿಡಿಯಲಾಗಿದೆ. ಇಸ್ರೋದ ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ರೋವರ್ ಯಶಸ್ವಿಯಾಗಿ ಚಂದ್ರನ ರಹಸ್ಯಗಳನ್ನು ಅನ್ವೇಷಿಸುತ್ತಿರುವುದು ಕಂಡು ಬಂದಿದೆ.
ಮತ್ತೊಮ್ಮೆ ಪ್ರಶಂಸೆ:
ಭಾರತದ ಸಾಧನೆಯನ್ನು ನೆರೆ ರಾಷ್ಟ್ರ ಪಾಕಿಸ್ತಾನ ಪ್ರಶಂಸಿಸುವುದು ಮುಂದುವರಿಸಿದೆ. ಪಾಕಿಸ್ತಾನದ ವಿದೇಶಾಂಗ ಕಚೇರಿ ವ್ಯವಹಾರಗಳ ವಕ್ತಾರೆ ಮುಮ್ತಾಜ್ ಝಾರಾ ಬಲೂಚ್, ಶ್ರೀಮಂತ ರಾಷ್ಟ್ರಗಳು ಈ ವರೆಗೆ ಸಾಧಿಸಲು ಅಸಾಧ್ಯವಾದದ್ದನ್ನು ಭಾರತ ಕಡಿಮೆ ವೆಚ್ಚದಲ್ಲಿ ಸಾಧಿಸಿ ತೋರಿಸಿದೆ. ಚಂದ್ರಯಾನ-3 ಅತಿದೊಡ್ಡ ವೈಜ್ಞಾನಿಕ ಸಾಧನೆಯಾಗಿದ್ದು, ಅದರ ಸಂಪೂರ್ಣ ಶ್ರೇಯಸ್ಸು ಇಸ್ರೋ ವಿಜ್ಞಾನಿಗಳಿಗೆ ಸಲ್ಲಬೇಕು ಎಂದಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.