![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 27, 2023, 6:50 AM IST
“ಕಾಲದ ಕರೆಯಾಗಿ ಸ್ವೀಕರಿಸದ ಕಲೆ ಕಾಲಗರ್ಭವನ್ನು ಸೇರುತ್ತದೆ. ಯಕ್ಷಗಾನ ಆರಂಭವಾಗಿದ್ದೇ ಕಾಲಮಿತಿಯಲ್ಲಿ, 11-14ನೇ ಶತಮಾನದ ಮಧ್ಯೆ ಇದೊಂದು ಸಂಜೆ ಬೆಳಕಿನ ಸೇವೆಯಾಗಿತ್ತು. ಬಳಿಕ ಉದ್ದ ಆಗಿ, ತಿರುಗಾಟವಾಗಿ ಈಗ ಮತ್ತೆ ವಾಪಸು ಬರುತ್ತಿದೆ. ಈಗಿನ ಕಾಲಮಿತಿಗೆ 80 ವರ್ಷಗಳ ಇತಿಹಾಸ ಇದೆ. ಯಕ್ಷಗಾನದ ಸ್ವರೂಪ, ಸಂಚಲನೆ, ವಿಚಲನೆಗೆ ಸಂಬಂಧಿಸಿದಂತೆ ಸಾಂಪ್ರದಾಯಿಕ ಚೌಕಟ್ಟಿದೆ. ಕಲೆಯಲ್ಲಿ ಯಾವುದೇ ವಸ್ತು ಸ್ವತಂತ್ರವಾಗಿರದು. ಹೊಸತನವನ್ನು ತರುವಾಗ ವಿಚಲನೆ ಉಂಟಾಗುವುದು ಸ್ವಾಭಾವಿಕ. ರಂಗದಲ್ಲಿ ಕಂಡದ್ದು, ಕಲೆಯಲ್ಲ. ಮನಸ್ಸಿನಲ್ಲಿ ಪೂರ್ಣ ಗೊಳಿಸುವುದೇ ಯಕ್ಷಗಾನ ಕಲೆ. ವಸ್ತುವನ್ನು ಯಕ್ಷಗಾನೀಕರಿಸಬೇಕು, ಹೊರತು ಯಕ್ಷಗಾನ ವನ್ನು ವಸ್ತುವನ್ನಾಗಿಸಬಾರದು.’- ಡಾ| ಎಂ. ಪ್ರಭಾಕರ ಜೋಷಿ.(2023ರ ಫೆ.11 ಮತ್ತು 12ರಂದು ನಡೆದ ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಮೊದಲ ಯಕ್ಷಗಾನ ಸಮ್ಮೇಳನದ ಅಧ್ಯಕ್ಷರಾಗಿ ಅವರು ಮಾಡಿದ ಮಾತುಗಳಿವು.)
ಈ ಸಮ್ಮೇಳನ ನಡೆಯುವ ಮೊದಲು ಮತ್ತು ಬಳಿಕವೂ ಯಕ್ಷಗಾನಕ್ಕೆ ಕಾಲಮಿತಿ ಬೇಕೇ, ಬೇಡವೇ? ಎಂಬ ಬಗ್ಗೆ ಸುದೀರ್ಘ ಚರ್ಚೆಗಳು ನಡೆಯುತ್ತಲೇ ಇವೆ. ಸಮ್ಮೇಳನ ದಲ್ಲೂ ಈ ಬಗ್ಗೆ ವಿಸ್ತೃತ ಚರ್ಚೆಯಾಗಿದೆ. ಆದರೆ ತಾರ್ಕಿಕವಾಗಿ ಯಾವುದೇ ನಿರ್ಣಯ ಅಥವಾ ಫಲಿತಾಂಶ ಹೊರಬಿದ್ದಿಲ್ಲ. ಕಾಲಮಿತಿ ವಿಧಿಸಬೇಕು. ಆದರೆ ಯಕ್ಷಗಾನದ ಮೂಲ ಸತ್ವ ಮತ್ತು ಆಚರಣೆಗೆ ಚ್ಯುತಿ ಬರಬಾರದು ಎನ್ನುವುದು ಕೆಲವರ ವಾದ.
ಕಾಲಮಿತಿ ವಿಧಿಸದೇ ಪೂರ್ಣಪ್ರಸಂಗ ಪ್ರದರ್ಶನ ನಡೆಯಬೇಕು. ಆಗ ಮಾತ್ರ ಯಕ್ಷಗಾನದ ಪೂರ್ಣ ಸೌಂದರ್ಯ ಉಳಿಸಿ ಕೊಳ್ಳಲು ಸಾಧ್ಯ. ಪ್ರಸಂಗಳು ಕಾಲಮಿತಿಗೆ ಕಡಿತ ಮಾಡಿದಲ್ಲಿ ಮೂಲ ಸತ್ವಕ್ಕೆ ಧಕ್ಕೆಯಾಗು ತ್ತದೆ ಎಂಬುದು ಇನ್ನೊಂದು ವರ್ಗದ ವಾದ. ಇದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಈ ಮಧ್ಯೆ ಕಾಲಮಿತಿಯ ಯಕ್ಷಗಾನ ಪ್ರದರ್ಶನವೂ ಆಗುತ್ತಿದೆ.
ಕರಾವಳಿ ಕರ್ನಾಟಕದ ಜನಪ್ರಿಯ ಕಲೆ ಗಳಲ್ಲಿ ಒಂದಾದ ಯಕ್ಷಗಾನ ಪ್ರಸ್ತುತ ವಿಶ್ವ ವ್ಯಾಪಿ. ಹೊರ ಜಿಲ್ಲೆ, ರಾಜ್ಯ, ದೇಶಗಳಲ್ಲೂ ಪ್ರದರ್ಶನ ಕಾಣುತ್ತಿದೆ.( ಅಲ್ಲಿನ ವ್ಯವಸ್ಥೆಗೆ ತಕ್ಕಂತೆ ಯಕ್ಷಗಾನ ಮಾರ್ಪಾಟಾಗುತ್ತಿದೆ. ಆ ಮಾರ್ಪಾಟುಗಳಲ್ಲಿ ಕಾಲಮಿತಿಯೂ ಸೇರಿದೆ). ಯಕ್ಷಗುರುಗಳು ವಿದೇಶಕ್ಕೂ ಹೋಗಿ ತರಬೇತಿ ನೀಡುತ್ತಿದ್ದಾರೆ. ಯಕ್ಷಗಾನ ಕಲಿಯಲು ವಿದೇಶ ದಿಂದಲೂ ಇಲ್ಲಿಗೆ ಬರುವವರಿದ್ದಾರೆ.
ಯಕ್ಷಗಾನವನ್ನು ಇಡೀ ರಾತ್ರಿ ಆಲಿಸಿ, ಅದರ ಸವಿಯನ್ನು ಕಂಡವರು, ಉಂಡವರು ಈಗ ಕಾಲಮಿತಿಗೆ ಒಗ್ಗಿಕೊಳ್ಳಲು ಸುಲಭದಲ್ಲಿ ಒಪ್ಪುವುದಿಲ್ಲ. ಒಪ್ಪಬೇಕು ಎಂಬ ನಿಯಮವೂ ಇಲ್ಲ. ರಾತ್ರಿ ಇಡೀ ಕುಳಿತು ನೋಡುವವರು ಕಡಿಮೆಯಾಗಿದ್ದಾರೆ ಎಂಬ ಸತ್ಯವೂ ಇದರಲ್ಲಿದೆ. ಆಧುನಿಕ ಅನಿವಾರ್ಯತೆಯು ಯಕ್ಷಗಾನವನ್ನು ಕಾಲಮಿತಿಗೆ ತಂದು ನಿಲ್ಲಿಸಿದೆ. ಕಾಲಮಿತಿ ವಿಧಿಸುವುದು ಸರಿಯಲ್ಲ ಎಂಬ ಹೋರಾಟ, ಆಗ್ರಹ ದಶಕಗಳಿಂದಲೂ ನಡೆಯುತ್ತಲೇ ಬಂದಿದೆ.
ದಶಕದ ಹಿಂದೆ(2013 ಆಗಸ್ಟ್) ಮಂದಾರ್ತಿಯಲ್ಲಿ ನಡೆದ ಯಕ್ಷಗಾನ ಚಿಂತನ ಸಭೆಯಲ್ಲಿ ಮಂದಾರ್ತಿ ದಶಾವತಾರ ಮೇಳದ ಹರಕೆ ಬಯಲಾಟಗಳಲ್ಲಿ ಕಾಲಮಿತಿ ಪ್ರಯೋಗ ಪ್ರಸ್ತುತತೆಯ ಸುದೀರ್ಘ ಚರ್ಚೆ ನಡೆದಿತ್ತು. ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಪ್ರದರ್ಶವನ್ನು ಕಾಲಮಿತಿಗೆ ಒಳಪಡಿಸುವ ನಿರ್ಧಾರಕ್ಕೆ 2022ರಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹೀಗೆ ಹಲವು ಮೇಳಗಳಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಕಾಲಮಿತಿ ಬೇಕು ಮತ್ತು ಬೇಡ ಎನ್ನುವ ವರ್ಗ ಎಲ್ಲ ಮೇಳಗಳಲ್ಲೂ ಇವೆ.
ಅನಿವಾರ್ಯತೆಗಳ ಮಧ್ಯೆ ಹಲವು ಪ್ರದರ್ಶನಗಳಿಗೆ ಈಗಾಗಲೇ ಕಾಲಮಿತಿ ನಿಗದಿಯಾಗಿದೆ. ಅದಕ್ಕೆ ತಕ್ಕಂತೆ ಪ್ರಸಂಗವನ್ನು ಟ್ರಿಮ್ ಮಾಡಲಾಗುತ್ತಿದೆ ಮತ್ತು ಕಾಲಮಿತಿಗೆ ಅನುಗುಣವಾಗಿಯೇ ಪ್ರಸಂಗದ ರಚನೆಯೂ ನಡೆಯುತ್ತಿದೆ.
ಮಹಾನಗರಗಳಿಗೆ ಸೀಮಿತವಾಗಿದ್ದ ಕಾಲಮಿತಿ ಯಕ್ಷಗಾನ ಪ್ರದರ್ಶನ ಈಗ ಹಳ್ಳಿಯೂ ತಲುಪಿದೆ. ರಾತ್ರಿ 12ರ ಅನಂತರ ಯಕ್ಷಗಾನವನ್ನು ನೋಡುವವರು ಇರುವುದಿಲ್ಲ ಎಂಬುದು ಮುಖ್ಯಕಾರಣ. ಇದಕ್ಕೆ ಹೊಂದಿಕೊಂಡು ಕಲಾವಿದರ ಆರೋಗ್ಯದ ದೃಷ್ಟಿಯಿಂದಲೂ ಕಲಾಮಿತಿ ಅಗತ್ಯ ಎಂಬುದು ಪ್ರಸ್ತುತ ಹೆಚ್ಚು ಚರ್ಚೆಯಲ್ಲಿರುವ ಸಂಗತಿ. ಅದು ಕಡೆಗಣಿಸುವಂಥದೂ ಅಲ್ಲ.
ರಾಜು ಖಾರ್ವಿ ಕೊಡೇರಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.