Maharaja Trophy ಕ್ರಿಕೆಟ್: ಹುಬ್ಬಳ್ಳಿಗೆ ಅಗ್ರಸ್ಥಾನದ ಗೌರವ
Team Udayavani, Aug 26, 2023, 11:50 PM IST
ಬೆಂಗಳೂರು: ಹುಬ್ಬಳ್ಳಿ ಟೈಗರ್ ಅಗ್ರಸ್ಥಾನದ ಗೌರವದೊಂದಿಗೆ “ಮಹಾರಾಜ ಟ್ರೋಫಿ’ ಕೆಎಸ್ಸಿಎ ಟಿ20 ಪಂದ್ಯಾವಳಿಯ ಸೆಮಿಫೈನಲ್ಗೆ ಲಗ್ಗೆ ಇರಿಸಿದೆ. ಶನಿವಾರದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಅದು ಮಂಗಳೂರು ಡ್ರ್ಯಾಗನ್ಸ್ ವಿರುದ್ಧ 5 ವಿಕೆಟ್ಗಳ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಮಂಗಳೂರು ಡ್ರ್ಯಾಗನ್ಸ್ 9 ವಿಕೆಟಿಗೆ 167 ರನ್ ಹೊಡೆದರೆ, ಹುಬ್ಬಳ್ಳಿ ಟೈಗರ್ 18.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 170 ರನ್ ಬಾರಿಸಿತು. ಇದು 10 ಪಂದ್ಯಗಳಲ್ಲಿ ಹುಬ್ಬಳ್ಳಿ ಸಾಧಿಸಿದ 8ನೇ ಗೆಲುವು. ಮಂಗಳೂರು 9 ಪಂದ್ಯಗಳಲ್ಲಿ 5ನೇ ಸೋಲನುಭವಿಸಿ 4ನೇ ಸ್ಥಾನದಲ್ಲಿದೆ.
ಚೇಸಿಂಗ್ ವೇಳೆ ಹುಬ್ಬಳ್ಳಿ ಸರದಿಯಲ್ಲಿ ಮಿಂಚಿದವರೆಂದರೆ ಆರಂಭಕಾರ ಮೊಹಮ್ಮದ್ ತಾಹಾ ಮತ್ತು ನಾಯಕ ಮನೀಷ್ ಪಾಂಡೆ. ಇಬ್ಬರೂ ಅರ್ಧ ಶತಕ ಬಾರಿಸಿದರು. ತಾಹಾ ಗಳಿಕೆ 23 ಎಸೆತಗಳಿಂದ 51 ರನ್ (6 ಬೌಂಡರಿ, 3 ಸಿಕ್ಸರ್). ಪಾಂಡೆ 33 ಎಸೆತ ಎದುರಿಸಿ ಅಜೇಯ 56 ರನ್ ಬಾರಿಸಿದರು (1 ಬೌಂಡರಿ, 5 ಸಿಕ್ಸರ್).
ಮಂಗಳೂರು ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಉತ್ತಮ ಮಟ್ಟದಲ್ಲಿತ್ತು. ಆದರೆ ಇನ್ನಷ್ಟು ಬಿರುಸು ಪಡೆಯಬೇಕಿತ್ತು. ಶರತ್ ಬಿ.ಆರ್. 40, ರೋಹನ್ ಪಾಟೀಲ್ 34, ಸಿದ್ಧಾರ್ಥ್ 53 ರನ್ ಕೊಡುಗೆಯಿತ್ತರು. 17 ಓವರ್ ಮುಕ್ತಾಯಕ್ಕೆ ಸ್ಕೋರ್ 2ಕ್ಕೆ 151 ರನ್ ಆಗಿತ್ತು. ಹುಬ್ಬಳ್ಳಿ ತಂಡದ ಮಧ್ಯಮ ವೇಗಿ ಮನ್ವಂತ್ ಕುಮಾರ್ 5 ವಿಕೆಟ್ ಉಡಾಯಿಸಿ ಮೆರೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Blind Chess World C’ships: ವಿಶ್ವ ಅಂಧರ ಚೆಸ್: ಪ್ರಶಸ್ತಿ ಸನಿಹಕ್ಕೆ ಲುಬೋವ್
Women’s T20 World Cup: ಆಸೀಸ್ಗೆ ಸುಲಭದ ತುತ್ತಾದ ಲಂಕಾ
Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ
ISSF Junior World Championship: ಕಿರಿಯರ ಶೂಟಿಂಗ್; ಭಾರತಕ್ಕೆ ಸಮಗ್ರ ಪ್ರಶಸ್ತಿ
ಗ್ವಾಲಿಯರ್ ಮಸೀದಿಗೆ ಭೇಟಿ ನೀಡದೆ ಹೋಟೆಲ್ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.