![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Aug 28, 2023, 3:49 PM IST
ಪಣಜಿ: ಕೆಫೆಮ್ನಲ್ಲಿರುವ ಸಾರ್ವಜನಿಕ ಗಣೇಶೋತ್ಸವ ಮಂಡಲದಲ್ಲಿ ಪ್ರತಿ ವರ್ಷದಂತೆ ಭಾನುವಾರವೂ ಲಾಟರಿ ಕೂಪನ್ ಮಾರಾಟ ಆರಂಭವಾಯಿತು. ಆದಾಗ್ಯೂ, ಕೂಪನ್ಗಳನ್ನು ಖರೀದಿಸಲು ಮತ್ತು ಲಕ್ಷಾಂತರ ಬಹುಮಾನಗಳನ್ನು ಗೆಲ್ಲಲು ನಾಗರಿಕರುಲಾಟರಿ ಖರೀದಿಸಲು ಮುಗಿಬಿದ್ದಿದ್ದು ಕಿಲೋಮೀಟರ್ ವರೆಗೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬರುತ್ತಿದೆ.
ಭಾನುವಾರ ಲಾಟರಿ ಕೂಪನ್ ಖರೀದಿಯ ವೇಳೆ ಜನರ ನೂಕುನುಗ್ಗಲು ಉಂಟಾಗಿ ಪೊಲೀಸರು ಮಧ್ಯಪ್ರವೇಶಿಸಿ ಮಾರಾಟವನ್ನು ನಿಲ್ಲಿಸಿ ಕಾಲ್ತುಳಿತ ತಡೆಯಬೇಕಾಯಿತು. ನಂತರ ಇಂದು ಸೋಮವಾರ (ಆ.28) ಕೆಫೆಮ್ ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ದೇಣಿಗೆ ಕೂಪನ್ಗಳ ಮಾರಾಟವನ್ನು ಬೆಳಗ್ಗೆ ಪ್ರಾರಂಭಿಸಲು ನಿರ್ಧರಿಸಲಾಯಿತು. ಮಂಡಳಿಯ ಅಧ್ಯಕ್ಷ ಇಚಿತ್ ಫಲ್ದೇಸಾಯಿ ಈ ಮಾಹಿತಿ ನೀಡಿದರು.ಸೋಮವಾರದ ಕೂಪನ್ ಖರೀದಿಗೆ ನಾಗರಿಕರು ಬೆಳಗ್ಗೆ 5 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಮಧ್ಯೆ, ದೇಣಿಗೆ ಕೂಪನ್ಗಳನ್ನು ಖರೀದಿಸಲು ನಾಗರಿಕರು ಭಾನುವಾರ ಬೆಳಗ್ಗೆ ಐದೂವರೆ ಗಂಟೆಯಿಂದಲೇ ಮುಗಿಬಿದ್ದರು. 15 ನಿಮಿಷಗಳಲ್ಲಿ ಉದ್ಘಾಟನಾ ಸಮಾರಂಭ ಮುಗಿದು ಕೂಪನ್ ಮಾರಾಟ ಆರಂಭಗೊಂಡರೂ ಜನಸಂದಣಿ ಹೆಚ್ಚಾಗುತ್ತಿತ್ತು. ಮುನ್ಸಿಪಲ್ ಪಾರ್ಕ್ ಆವರಣದಲ್ಲಿ ಈ ಕೂಪನ್ ಮಾರಾಟ ಆರಂಭವಾದಾಗ . ಈ ವೇಳೆ ಜನರು ಸರತಿ ಸಾಲಿನಲ್ಲಿ ನಿಲ್ಲದೆಯೇ ನೇರವಾಗಿ ಕೂಪನ್ ಮಾರಾಟ ಕೌಂಟರ್ ಗೆ ಓಡಿದ್ದರಿಂದ ಭಾನುವಾರ ನೂಕುನುಗ್ಗಲು ಉಂಟಾಗಿ ಕೌಂಟರ್ ಮುರಿದು ಬಿದ್ದಿತ್ತು.
ಈ ವೇಳೆ ಪೊಲೀಸರು ಹಾಗೂ ಸೆಕ್ಯುರಿಟಿ ಗಾರ್ಡ್ಗಳು ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ಪಟ್ಟರು. ಆದರೆ ಜನರ ನೂಕುನುಗ್ಗಲು ಹೆಚ್ಚಾದಂತೆ ಪ್ರಾಣಹಾನಿ ತಪ್ಪಿಸುವ ಉದ್ದೇಶದಿಂದ ಮಾರಾಟ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಕೂಪನ್ ಮಾರಾಟ ಆರಂಭಗೊಂಡಿದ್ದು, ಖರೀದಿಗೆ ಭಾರಿ ಸಂಖ್ಯೆಯಲ್ಲಿ ಜನರು ಮುಗಿ ಬೀಳುತ್ತಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.