ISRO ಆದಿತ್ಯನ ಪ್ರಯಾಣಕ್ಕೆ ಸಮಯ ನಿಗದಿ: ಏನಿದು ಯೋಜನೆ?


Team Udayavani, Aug 29, 2023, 6:45 AM IST

aditya

ನವದೆಹಲಿ/ಬೆಂಗಳೂರು: ಚಂದ್ರನ ದಕ್ಷಿಣ ಭಾಗಕ್ಕೆ ಯಶಸ್ವಿಯಾಗಿ ಇಳಿದು ಇಸ್ರೋದ ರೋವರ್‌ ಅಧ್ಯಯನ ನಡೆಸುತ್ತಿದೆ. ಅದರ ನಡುವೆಯೇ ಈಗಾಗಲೇ ಘೋಷಣೆ ಆಗಿರುವ ಸೌರ ಮಂಡಲದ ಹೊರಪದರದ ಅಧ್ಯಯನ ನೌಕೆ ಆದಿತ್ಯ ಎಲ್‌1ರ ಉಡಾವಣೆ ಸಮಯ ಘೋಷಣೆಯಾಗಿದೆ. ಸೆ.2ರಂದು ಬೆಳಗ್ಗೆ 11.50ರಂದು ನಭಕ್ಕೆ ಕಳುಹಿಸಿ ಕೊಡಲಾಗುತ್ತದೆ ಎಂದು ಇಸ್ರೋ ಸೋಮವಾರ ಟ್ವೀಟ್‌ ಮಾಡಿದೆ.

ಏನಿದು ಯೋಜನೆ?
– ಸೌರ ಮಂಡಲದ ಅತ್ಯಂತ ಹೊರಪದರದಲ್ಲಿರುವ ಜ್ವಾಲೆ, ಸೂರ್ಯ ಮತ್ತು ಭೂಮಿಯ ನಡುವಿನ ಕೇಂದ್ರದ ನಡುವಿನ ಪ್ರದೇಶದ ಗಾಳಿಯ ಅಧ್ಯಯನ (ಎಲ್‌1 ಪಾಯಿಂಟ್‌)
– ಇಸ್ರೋ ವತಿಯಿಂದ ಕೈಗೊಳ್ಳಲಾಗುವ ಮೊದಲ ಸೂರ್ಯನ ಅಧ್ಯಯನ.
– ಉಡಾವಣೆಗೊಂಡ ಆದಿತ್ಯ ಎಲ್‌1 ಪಾಯಿಂಟ್‌ನಲ್ಲಿ ಸಂಚಾರ.

ಆದಿತ್ಯ ಎಲ್‌1 ಯೋಜನೆ ವಿಶೇಷತೆಗಳು
– ಒಟ್ಟು ಏಳು ಪೇಲೋಡ್‌ಗಳನ್ನು ಹೊಂದಿದೆ. ಈ ಪೈಕಿ ನಾಲ್ಕು ನೇರವಾಗಿ ಸೂರ್ಯನ, ಉಳಿದ ಮೂರು ಲ್ಯಾಗ್ರೇಜ್‌ ಪಾಯಿಂಟ್‌ನ ಅಧ್ಯಯನಕ್ಕೆ
– ಸೂರ್ಯನ ಕೊರೊನಾ ವ್ಯಾಪ್ತಿಯಲ್ಲಿ ಭಾರಿ ತಾಪದ ಕಾರಣಗಳ ಅಧ್ಯಯನ
– ಭಾರೀ ಪ್ರಮಾಣದಲ್ಲಿ ಹೊರ ಸೂಸುತ್ತಿರುವ ಕಾಂತೀಯ ಅಂಶ (ಸಿಎಂಇ)ಗಳ ಪರಾಮರ್ಶೆ
– ಯಾವುದೇ ತಡೆ ಇಲ್ಲದೆ ಸೂರ್ಯನತ್ತ ನೋಡಿ, ಅಲ್ಲಿನ ಚಟುವಟಿಕೆಗಳ ಮೇಲೆ ಗಮನ ಸಾಧ್ಯ.

ಲ್ಯಾಗ್ರೇಜ್‌ ಪಾಯಿಂಟ್‌ ಎಂದರೇನು?
ಭೂಮಿ ಮತ್ತು ಸೂರ್ಯನ ನಡುವಿನ ಪ್ರದೇಶ. ಅಲ್ಲಿ ವಸ್ತುಗಳ ಆಕರ್ಷಣೆ ಮತ್ತು ವಿಕರ್ಷಣೆಯ ಪ್ರಮಾಣ ಸಮಾನವಾಗಿರುತ್ತದೆ. ಗಗನನೌಕೆಗಳಿಗೆ ಅಲ್ಲಿ ಕಡಿಮೆ ಪ್ರಮಾಣದ ಇಂಧನವನ್ನು ಉಪಯೋಗಿಸಿ ಸ್ಥಿರವಾಗಿರಲು ಸಾಧ್ಯವಿದೆ ಎಂದು ನಾಸಾ ತಿಳಿಸಿದೆ. ಇಟೆಲಿ-ಫ್ರಾನ್ಸ್‌ ಗಣಿತಶಾಸ್ತ್ರಜ್ಞ ಜೋಸೆಫಿ -ಲೂಯಿಸ್‌ ಲ್ಯಾಗ್ರೇಜ್‌ ಗೌರವಾರ್ಥ ಅಲ್ಲಿಗೆ ಲ್ಯಾಗ್ರೇಜ್‌ ಪಾಯಿಂಟ್‌ ಎಂಬ ಹೆಸರು ಇರಿಸಲಾಗಿದೆ.

ಯಾವಾಗ? ಸೆ.2, ಶನಿವಾರ ಬೆ.11.50
ಎಲ್ಲಿಂದ? ಶ್ರೀಹರಿಕೋಟದ, ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ
ತಲುಪಬೇಕಾಗಿರುವ ದಿನಗಳು? 127
ಎಷ್ಟು ಕಿಮೀ? 15 ಲಕ್ಷ ಕಿಮೀ ಚಂದ್ರನಿಂದ 4 ಪಟ್ಟು ಹೆಚ್ಚು ದೂರ
ಉಡಾವಣಾ ವಾಹಕ- ಪಿಎಸ್‌ಎಲ್‌ವಿ-ಸಿ57 ರಾಕೆಟ್‌
6,000 ಡಿಗ್ರಿ ಸೆಂಟಿಗ್ರೇಡ್‌- ಸೌರಮಂಡಲದ ತಾಪಮಾನ

ನೋಂದಣಿಗೆ ಅವಕಾಶ
ಉಡಾವಣೆಯನ್ನು ಶ್ರೀಹರಿಕೋಟಕ್ಕೆ ತೆರಳಿ ವೀಕ್ಷಿಸುವವರಿಗೆ ಇಸ್ರೋ ಅವಕಾಶ ಮಾಡಿಕೊಡಲಿದೆ. ಅದಕ್ಕಾಗಿ [email protected] ಗೆ ಇ-ಮೇಲ್‌ ಕಳುಹಿಸುವ ಮೂಲಕ ನೋಂದಣಿ.

ಕುಳಿಯಿಂದ ಪ್ರಜ್ಞಾನ್‌ ಪಾರು
ಚಂದ್ರನ ದಕ್ಷಿಣ ಭಾಗದಲ್ಲಿ ಸಂಚರಿಸುತ್ತಿರುವ ಪ್ರಜ್ಞಾನ್‌ ರೋವರ್‌ ಎರಡು ಅಪಾಯಗಳಿಂದ ಪಾರಾಗಿದೆ. ಇಸ್ರೋ ಟ್ವೀಟ್‌ ಮಾಡಿರುವ ಪ್ರಕಾರ ಆ.27ರಂದು 4 ಮೀಟರ್‌ ಆಳದ ಕುಳಿಯಿಂದ ಪಾರಾಗಿದೆ. 3 ಮೀಟರ್‌ ದೂರದಲ್ಲಿ ಇರುವಾಗಲೇ ಅದನ್ನು ಪತ್ತೆ ಹಚ್ಚಿಕೊಂಡ ಪ್ರಜ್ಞಾನ್‌ ಸುಸೂತ್ರವಾಗಿ ಪಥ ಬದಲಿಸಿ ಮುಂದೆ ಸಾಗಿತು. ಜತೆಗೆ ಅದರ ಎರಡು ಫೋಟೋಗಳನ್ನೂ ರವಾನಿಸಿದೆ. ಇದಕ್ಕಿಂತ ಮೊದಲು 100 ಮಿಲಿಮೀಟರ್‌ ಆಳದ ಕುಳಿಯನ್ನು ಯಶಸ್ವಿಯಾಗಿ ದಾಟಿಕೊಂಡು ಮುನ್ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿರಿಯ ವಿಜ್ಞಾನಿ “ಮೊದಲು ಎದುರಾದದ್ದು ಸಣ್ಣ ಪ್ರಮಾಣದ ಕುಳಿ. ಎರಡನೇಯದ್ದು ಕೊಂಚ ದೊಡ್ಡದಾಗಿತ್ತು. ಅದನ್ನು ತಪ್ಪಿಸಿಕೊಂಡು ತೆರಳಲು ಸೂಚಿಸಲಾಯಿತು. ರೋವರ್‌ಗೆ 5 ಮೀಟರ್‌ ಮುಂದೆ ಇರುವ ದಾರಿ ಮಾತ್ರ ಕಾಣಲು ಸಾಮರ್ಥ್ಯ ಇದೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.