![rain 21](https://www.udayavani.com/wp-content/uploads/2024/07/rain-21-415x263.jpg)
ನನ್ನ ವಿರುದ್ಧ BJP ಕಚೇರಿಯಿಂದಲೇ ಅಪಪ್ರಚಾರ: ರೇಣುಕಾಚಾರ್ಯ
Team Udayavani, Aug 29, 2023, 9:18 PM IST
![renukacharya](https://www.udayavani.com/wp-content/uploads/2023/08/renukacharya-620x372.jpg)
ಹೊನ್ನಾಳಿ: ನಾನು ಬಿಜೆಪಿ ಬಿಡುತ್ತೇನೆ ಅಥವಾ ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ರಾಜ್ಯ ಬಿಜೆಪಿ ಕಚೇರಿಯಿಂದಲೇ “ಎಂಪಿಆರ್ ಬಿಜೆಪಿ ಬಿಡುತ್ತಾರೆ’ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸ್ವಪಕ್ಷದ ವಿರುದ್ಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತೆ ಹರಿಹಾಯ್ದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು ಮಾಜಿ ಸಚಿವನಾದ ನನ್ನ ಆದ್ಯ ಕರ್ತವ್ಯ. ಇದಕ್ಕಾಗಿ ನಾನು ಸಿಎಂ, ಡಿಸಿಎಂ, ಕಂದಾಯ ಹಾಗೂ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆಯೇ ಹೊರತು ಎಂದಿಗೂ ನಾನು ಕಾಂಗ್ರೆಸ್ ಸೇರುತ್ತೇನೆಂದು ಹೇಳಿಲ್ಲ, ಆದರೆ ದುರುದ್ದೇಶದಿಂದ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಎಂದಿಗೂ ಕಾಂಗ್ರೆಸ್ ಸೇರುವುದಿಲ್ಲ ಎಂದರು.
ಚುನಾವಣೆ ನಡೆದ ನಂತರ ಕಾಂಗ್ರೆಸ್ ಅ ಧಿಕಾರಕ್ಕೆ ಬಂದು ನೂರು ದಿನಗಳಾದರೂ ಈವರೆಗೂ ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ, ರಾಜ್ಯಾಧ್ಯಕ್ಷರ ಅವ ಧಿ ಮುಗಿದು ಎರಡು ವರ್ಷಗಳಾದರೂ ಬದಲಾವಣೆ ಮಾಡಿಲ್ಲ, ಈ ಬಗ್ಗೆ ಕಾಂಗ್ರೆಸ್ ಅಥವಾ ವಿಪಕ್ಷದ ಕಾರ್ಯಕರ್ತರು ನಮ್ಮ ಕಾರ್ಯಕರ್ತರನ್ನು ಹಂಗಿಸುತ್ತಿದ್ದಾರೆ. ನಿಮ್ಮ ಯೋಗ್ಯತೆಗೆ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆ ಮಾಡಿಲ್ಲ ಎಂದಾಗ ನಮ್ಮ ಕಾರ್ಯಕರ್ತರಿಗೆ ಮುಜುಗರವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಬಿಎಸ್ವೈ ಕಡೆಗಣಿಸಿದ್ದಕ್ಕೆ ತಕ್ಕ ಶಾಸ್ತಿ: ಯಾರಧ್ದೋ ಮಾತನ್ನು ಕೇಳಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದ್ದರಿಂದ ನಮ್ಮ ಪಕ್ಷ ಸೋತು ಸುಣ್ಣವಾಯಿತು. ಬಿಎಸ್ವೈ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ಬಿಜೆಪಿ ನೆಲ ಕಚ್ಚಿತು ಎಂದು ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ಬಿಎಸ್ವೈ ಅವರಿಂದ ಮುಖ್ಯಮಂತ್ರಿ ಹುದ್ದೆಯನ್ನು ಬಲವಂತವಾಗಿ ಕಿತ್ತುಕೊಂಡು ಬಿಜೆಪಿ ಕೇಂದ್ರಿಯ ಸಂಸದಿಯ ಮಂಡಳಿ ಸದಸ್ಯರನ್ನಾಗಿ ಮಾಡಿದರು. ಹೀಗೆ ಮಾಡಿದರೆ ರಾಜ್ಯದ ಜನತೆಯನ್ನು ಸುಮ್ಮನಿರಿಸಬಹುದು ಎಂದು ಅವರಿಂದ ಸಿಎಂ ಹುದ್ದೆ ಕಿತ್ತುಕೊಂಡರು. ಆದರೆ ರಾಜ್ಯದ ಜನತೆ ಬಿಜೆಪಿಯನ್ನೇ ಮನೆಗೆ ಕಳುಹಿಸಿದರು. ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು. ಆಗ ಸಂಘಟನೆ ಬಲಗೊಂಡು ಮುಂಬರುವ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅತ್ಯಧಿ ಕ ಸ್ಥಾನ ಗಳಿಸಲು ಸಹಾಯವಾಗುತ್ತದೆ ಎಂದರು.
ಮಂತ್ರಿ ಸ್ಥಾನಕ್ಕೆ ಕುತ್ತು ತಂದರು:
ಬಿಜೆಪಿ ಅಧಿಕಾರಾವಧಿಯಲ್ಲಿ ದಾವಣಗೆರೆ ಜಿಲ್ಲೆಯವರೇ ಮಂತ್ರಿಗಳಾಗಬೇಕು. ನಮ್ಮ ಐದು ಜನರಲ್ಲಿ ಯಾರನ್ನಾದರೂ ಮಂತ್ರಿ ಮಾಡಲಿ ಎಂದಾಗ ನನಗೆ ಮಂತ್ರಿ ಸ್ಥಾನ ಕೊಡಲು ಸಿದ್ಧತೆ ನಡೆದಿತ್ತು. ಆದರೆ ದಾವಣಗೆರೆ ಜಿಲ್ಲೆಯ ಮಹಾನುಭಾವರೊಬ್ಬರು ನನ್ನ ಹೆಸರನ್ನು ಡಿಲೀಟ್ ಮಾಡಿಸಿದರು. ನಾನು ಬಕೆಟ್ ರಾಜಕೀಯ ಮಾಡುವುದಿಲ್ಲ, ಆ ಸಂಸ್ಕೃತಿ ನನಗೆ ಗೊತ್ತಿಲ್ಲ. ಇದ್ದಿದ್ದನ್ನು ನೇರವಾಗಿ ಹೇಳುತ್ತೇನೆ. ಹಾಗಾಗಿ ನನಗೆ ಹಲವಾರು ಅವಕಾಶಗಳು ತಪ್ಪಿದವು. ಮಾಜಿ ಪ್ರಧಾನಿ ವಾಜಪೇಯಿ ಸೋಲಿಗೆ ನಾವೇ ಹೊಣೆ ಹೊರಬೇಕಾಗುತ್ತದೆ. ಏಕೆಂದರೆ ಅವರು ಮಾಡಿದ ಅಭಿವೃದ್ಧಿ ಬಗ್ಗೆ ನಮ್ಮ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಕೇಂದ್ರ ಸರ್ಕಾರ ಸಾಧನೆಗಳ ಬಗ್ಗೆ ತಿಳಿಸಲಿಲ್ಲ. ಹೀಗಾಗಿ ಅಂದು ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ಹಿನ್ನಡೆ ಅನುಭವಿಸಬೇಕಾಯಿತು.
ನಮ್ಮ ಕ್ಷೇತ್ರದಲ್ಲಿ ಐದಾರು ಗ್ರಾಮ ಬಿಟ್ಟರೆ ಉಳಿದ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಸಾಧನೆಯ ಕರಪತ್ರಗಳನ್ನು ವಿತರಿಸಿ ಕೇಂದ್ರದ ಸಾಧನೆಯನ್ನು ತಿಳಿಸಿದ್ದೇನೆ. ರಾಜ್ಯದಲ್ಲಿ ಇನ್ನೂ ಮನೆ ಮನೆ ಸಂಪರ್ಕ ಆಗಿಲ್ಲ, ನಮ್ಮ ಮುಖಂಡರು ಹಾಗೂ ಕಾರ್ಯಕರ್ತರು ಈಗಲಾದರೂ ಎಚ್ಚೆತ್ತುಕೊಂಡು ಮನೆ ಮನೆ ಸಂಪರ್ಕ ಮಾಡಿ ಕೇಂದ್ರದ ಸಾಧನೆಗಳ ಬಗ್ಗೆ ತಿಳಿಸಲಿ ಎಂದರು.
ಟಾಪ್ ನ್ಯೂಸ್
![rain 21](https://www.udayavani.com/wp-content/uploads/2024/07/rain-21-415x263.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![renukaacharya](https://www.udayavani.com/wp-content/uploads/2024/07/renukaacharya-150x100.jpg)
Lok Sabha Elections; ಪಕ್ಷ ವಿರೋಧಿ ಚಟುವಟಿಕೆ ನಡೆಸಿಯೇ ಇಲ್ಲ: ರೇಣುಕಾಚಾರ್ಯ
![ಪ್ರಹ್ಲಾದ ಜೋಶಿ](https://www.udayavani.com/wp-content/uploads/2024/07/prahlad-joshi-1-150x83.jpg)
Hubli; ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ: ಪ್ರಹ್ಲಾದ ಜೋಶಿ
![CM-Police](https://www.udayavani.com/wp-content/uploads/2024/07/CM-Police-150x104.jpg)
Karnataka Police: ಡ್ರಗ್ಸ್, ಜೂಜು ಮಟ್ಟಹಾಕಿ: ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ
![Zeeka-Virus](https://www.udayavani.com/wp-content/uploads/2024/07/Zeeka-Virus-150x90.jpg)
Suspect Zika Virus: ಶಿವಮೊಗ್ಗದಲ್ಲಿ ವೃದ್ಧ ಸಾವು
![HD-Kumaraswamy](https://www.udayavani.com/wp-content/uploads/2024/07/HD-Kumaraswamy-2-150x90.jpg)
MUDA Scam: ಹೆಲಿಕಾಪ್ಟರ್ನಲ್ಲಿ ಮುಡಾ ಕಡತ ರವಾನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
![rain 21](https://www.udayavani.com/wp-content/uploads/2024/07/rain-21-150x95.jpg)
Heavy Rain; ಉತ್ತರ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಜುಲೈ 8 ರಂದು ಪಿಯುಸಿವರೆಗೆ ರಜೆ
![Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ](https://www.udayavani.com/wp-content/uploads/2024/07/Bha-150x73.jpg)
Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ
![1-wqwewewq](https://www.udayavani.com/wp-content/uploads/2024/07/1-wqwewewq-150x106.jpg)
T20 ಸರಣಿ ಸಮಬಲ: ಜಿಂಬಾಬ್ವೆ ವಿರುದ್ಧ 100 ರನ್ ಗಳ ಅಮೋಘ ಜಯ ಸಾಧಿಸಿದ ಭಾರತ
![renukaacharya](https://www.udayavani.com/wp-content/uploads/2024/07/renukaacharya-150x100.jpg)
Lok Sabha Elections; ಪಕ್ಷ ವಿರೋಧಿ ಚಟುವಟಿಕೆ ನಡೆಸಿಯೇ ಇಲ್ಲ: ರೇಣುಕಾಚಾರ್ಯ
![BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!](https://www.udayavani.com/wp-content/uploads/2024/07/BSNL-150x84.jpg)
BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.